ಆ್ಯಪ್ನಗರ

ಮಂಜೂರಾದರೂ ಶಾಲೆಗಳಿಗೆ ತಲುಪದ ಬಸ್‌ಗಳು!

ಶಾಲೆಗಳಿಗೆ ಮಂಜೂರಾದ ಬಸ್‌ಗಳ ಬರುವಿಕೆಯನ್ನು ಕುಂಬಳೆ ಕೊಡ್ಯಮ್ಮೆ ಸರಕಾರಿ ಪ್ರೌಢಶಾಲೆ, ಕುಣಿಯ ಸರಕಾರಿ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆ ಎಂಬೆಡೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.

Vijaya Karnataka 25 Jun 2019, 5:00 am
ಕಾಸರಗೋಡು: ಶಾಲೆಗಳಿಗೆ ಮಂಜೂರಾದ ಬಸ್‌ಗಳ ಬರುವಿಕೆಯನ್ನು ಕುಂಬಳೆ ಕೊಡ್ಯಮ್ಮೆ ಸರಕಾರಿ ಪ್ರೌಢಶಾಲೆ, ಕುಣಿಯ ಸರಕಾರಿ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆ ಎಂಬೆಡೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.
Vijaya Karnataka Web busse not reached schools
ಮಂಜೂರಾದರೂ ಶಾಲೆಗಳಿಗೆ ತಲುಪದ ಬಸ್‌ಗಳು!


ಪ್ರಸಕ್ತ ಶೈಕ್ಷ ಣಿಕ ವರ್ಷದ ಮೊದಲ ವಾರದಲ್ಲೇ ಶಾಲೆಗಳಿಗೆ ಬಸ್‌ಗಳು ತಲುಪಲಿವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, 2 ವಾರದಗಳಾದರೂ ಇನ್ನೂ ತಲುಪಿಲ್ಲ. ಸರಕಾರಿ ಇ-ಮಾರ್ಕೆಟ್‌ನಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳದ ಬಗ್ಗೆ ಡಿಇಒ ಕಚೇರಿಯಿಂದ ಶಾಲಾ ಅಧಿಕಾರಿಗಳಿಗೆ ತಿಳಿಸಲಾಗಿದೆ.

ರಾಜ್ಯ ಸಭಾ ಸಂಸದ ಎಂ. ಪಿ. ಅಬ್ದುಲ್‌ ವಹಾಬ್‌ ಅನುದಾನದಿಂದ ಕುಣಿಯ ಸರಕಾರಿ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆಗೆ ಬಸ್‌ ಮಂಜೂರುಗೊಳಿಸಿದೆ. ಕಳೆದ ಜನವರಿಯಲ್ಲೇ ಬಸ್‌ ಸಂಬಂಧಿಸಿದ ಎಲ್ಲ ರೀತಿಯ ದಾಖಲೆಗಳನ್ನು ಡಿಇಒ ಕಚೇರಿಯಲ್ಲಿ ಸಲ್ಲಿಸಿದ್ದು, ಬಳಿಕ ಚುನಾವಣಾ ಕಾಯ್ದೆ ಜಾರಿಗೆ ಬರುವ ಮುನ್ನ , ಅನುದಾನ ಹಸ್ತಾಂತರಿಸಲಾಗಿತ್ತು. ಆದರೆ, ಬಸ್‌ ಜೂ. 18ರಂದು ಶಾಲೆಗೆ ತಲುಪಬಹುದು ಎಂಬ ಸಂದೇಶ ಮಾತ್ರವೇ ಲಭಿಸಿರುವುದಾಗಿ ಸಿಬಂದಿಗಳು ಹೇಳುತ್ತಿದ್ದಾರೆ.

ಇದೇ ಸಂದರ್ಭ ಶಾಸಕ ಪಿ. ಬಿ. ಅಬ್ದುಲ್‌ ಅವರು ಮರಣ ಹೊಂದುವ 10 ತಿಂಗಳ ಮುನ್ನವೇ ಕೊಡ್ಯಮ್ಮೆ ಸರಕಾರಿ ಪ್ರೌಢಶಾಲೆಗೆ ಬಸ್‌ಗಾಗಿ ಹಣ ಮಂಜೂರುಗೊಳಿಸಲಾಗಿದೆ. ಬಳಿಕ ಇ-ಟೆಂಡರ್‌ ಆಹ್ವಾನಿಸಿದರೂ ಯಾರೂ ಭಾಗವಹಿಸಿಲ್ಲ. ಆದ್ದರಿಂದ, ಫೋರ್ಸ್‌ ಕಂಪನಿಯ ಬಸ್‌ ತೆಗೆಯಲು ಡಿಇಒ ಕಚೇರಿಯಿಂದ ರಕ್ಷ ಕ-ಶಿಕ್ಷ ಕ ಸಮಿತಿಗೆ ನಿರ್ದೇಶನ ನೀಡಲಾಗಿದೆ.

ಆದರೆ, ಫ್ಲೂಯಿಡ್‌ ಬ್ರೇಕ್‌ ಸಿಸ್ಟಂ ಇರುವುದು, ಗ್ರೌಂಡ್‌ ಕ್ಲಿಯರೆನ್ಸ್‌ ಕಡಿಮೆಯಾಗಿರುವ ಕಾರಣ ಬಸ್‌ ಬೇಡ ಎಂದು ಹೇಳಿರುವುದರಿಂದ ಬಳಿಕ ಮುಂದಿನ ಪ್ರಕ್ರಿಯೆಗಳು ಡಿಇಒ ಕಚೇರಿಯ ಕೆಂಪು ಕಡತದಲ್ಲಿ ಸಿಲುಕಿರುವುದಾಗಿ ಪಿಟಿಎ ಪದಾಧಿಕಾರಿಗಳು ಹೇಳುತ್ತಿದ್ದಾರೆ.

ಫೋರ್ಸ್‌ ಕಂಪನಿಯ ಬಸ್‌ನ್ನೇ ಖರೀದಿಸಬೇಕು ಎಂದು ಡಿಇಒ ಕಟ್ಟುನಿಟ್ಟಿನ ನಿಲುವು ಕೈಗೊಂಡಿರುವುದರಿಂದ ಡಿಇಒಗೆ, ಅಂದಿನ ಜಿಲ್ಲಾಧಿಕಾರಿಗೆ ವಕೀಲ್‌ ನೋಟಿಸ್‌ ಕಳುಹಿಸಿದ ಹಿನ್ನಲೆಯಲ್ಲಿ ಪ್ರಸ್ತುತ ಉದ್ಯಮದಿಂದ ಡಿಇಒ ಹಿಂಜರಿದಿರುವುದಾಗಿ ವ್ಯಕ್ತಪಡಿಸಿದ್ದಾರೆ. ಬಳಿಕ, ಬಸ್‌ಗಾಗಿ ಹಲವಾರು ಬಾರಿ ಡಿಇಒ ಕಚೇರಿಯನ್ನು ಸಂಪರ್ಕಿಸಿದರೂ ಬಸ್‌ ಮಂಜೂರುಗೊಳಿಸಿ ಲಭಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ