ಆ್ಯಪ್ನಗರ

ಲಕ್ಷಾಂತರ ರೂ. ಮೌಲ್ಯದ ಗೇರುಬೀಜ ಮೂಲೆಗುಂಪು

ಮೂರು ಬಾರಿ ಹರಾಜು ನಡೆದರೂ ಮಾರಾಟವಾಗದ ಲಕ್ಷಾಂತರ ರೂ ಮೌಲ್ಯದ ಗೇರುಬೀಜ ಮೂಲೆಗುಂಪಾಗಿದೆ...

Vijaya Karnataka 25 Sep 2018, 5:00 am
ಕಾಸರಗೋಡು: ಮೂರು ಬಾರಿ ಹರಾಜು ನಡೆದರೂ ಮಾರಾಟವಾಗದ ಲಕ್ಷಾಂತರ ರೂ. ಮೌಲ್ಯದ ಗೇರುಬೀಜ ಮೂಲೆಗುಂಪಾಗಿದೆ.
Vijaya Karnataka Web cashew nut became waste
ಲಕ್ಷಾಂತರ ರೂ. ಮೌಲ್ಯದ ಗೇರುಬೀಜ ಮೂಲೆಗುಂಪು


ಕಳೆದ ಹಂಗಾಮಿನಲ್ಲಿ ತೊಟಗಾರಿಕಾ ನಿಗಮ ಕಾರ್ಮಿಕರು ನೇರವಾಗಿ ಸಂಗ್ರಹಿಸಿದ ಗೇರುಬೀಜ ಮಾರಾಟ ಮಾಡಲಾಗದೇ ಗೋದಾಮಿನಲ್ಲಿ ರಾಶಿ ಬಿದ್ದಿದೆ. ಆ.8ರಂದು ಹಾಗೂ ಸೆ.8ರಂದು ಮುದಲಪ್ಪಾರೆಯ ಕಚೇರಿಯಲ್ಲಿ ಹಾಗೂ ಸೆ. 17ರಂದು ರಾಜಪುರದಲ್ಲಿ ಗೇರುಬೀಜ ಹರಾಜು ಪ್ರಕ್ರಿಯೆ ನಡೆದಿದ್ದರೂ ತೋಟಗಾರಿಕಾ ನಿಗಮ ನಿಗದಿಪಡಿಸದ ಮೊತ್ತವನ್ನು ಹರಾಜು ಮೂಲಕ ಪಡೆಯಲು ಯಾರೂ ತಯಾರಾಗಿಲ್ಲ.

ಮೊದಲು ನಡೆದ ಹರಾಜು ಪ್ರಕ್ರಿಯೆಯಲ್ಲಿ 122 ರೂ. ಕೋಟ್‌ ಮಾಡಿದಾಗ, 2ನೇ ಹರಾಜಿನಲ್ಲಿ ಒಬ್ಬಾತ ಮಾತ್ರವೇ ಭಾಗವಹಿಸಿದ್ದು, 105 ರೂ. ಕೊಟ್‌ ಮಾಡಿದ್ದರು. 3ನೇ ಹರಾಜು ಪ್ರಕ್ರಿಯೆಯಲ್ಲಿ 10ಕ್ಕಿಂತ ಹೆಚ್ಚು ಮಂದಿ ಭಾಗವಹಿಸಿದ್ದರೂ ಕೂಡಾ 109 ರೂ. ವರೆಗೆ ಮಾತ್ರವೇ ಕೋಟ್‌ ಮಾಡಲಾಗಿತ್ತು. ಆದರೆ, ಈ ಮೊತ್ತ ಹರಾಜು ಮಾಡಲು ತೋಟಗಾರಿಕಾ ನಿಗಮ ತಯಾರಾಗಿರಲಿಲ್ಲ. ರಾಶಿ ಬಿದ್ದ ಗೇರುಬೀಜವನ್ನು ಏನು ಮಾಡಬೇಕು? ಎಂದು ತಿಳಿಯದೇ ಅಧಿಕಾರಿಗಳು ಕಂಗಾಲಾಗಿದ್ದಾರೆ.

ಕಾಸರಗೋಡು, ರಾಜಪುರ, ಚೀಮೇನಿ ಎಸ್ಟೇಟ್‌ಗಳ ಹರಾಜು ಪ್ರಕ್ರಿಯೆ ನಡೆಯದ ತೋಟಗಳಿಂದ ಗೇರುಬೀಜವನ್ನು ಮಾರಾಟ ಮಾಡಲಾಗದೆ ರಾಶಿ ಬಿದ್ದಿದೆ. ಆರಂಭದಲ್ಲಿ ಪ್ರತಿ ಕೆ.ಜಿ.ಗೆ 155ರೂ. ವರೆಗೆ ಬೆಲೆ ಇದ್ದಾಗ ಸಾರ್ವಜನಿಕ ವಲಯ ಗೇರುಬೀಜ ಫ್ಯಾಕ್ಟರಿಗಳಿಗೆ ತೋಟಗಾರಿಕಾ ನಿಗಮದ ಗೇರುಬೀಜಗಳನ್ನು ನೀಡಬೇಕು ಎಂಬ ಸರಕಾರದ ಆದೇಶ ಇದೆ. ಆದ್ದರಿಂದ, ಮಾರಾಟ ಮಾಡಲಾಗಲಿಲ್ಲ.

ಆದರೆ, ಒಮ್ಮೆಲೇ ಎಲ್ಲ ಮೊತ್ತವನ್ನು ನೀಡಲು ಸಾಧ್ಯವಿಲ್ಲ. ಮೊದಲು ಅರ್ಧ ಮೊತ್ತವನ್ನು ಮಾತ್ರವೇ ನೀಡುವುದಾಗಿ ಸಾರ್ವಜನಿಕ ವಲಯ ಸಂಸ್ಥೆಗಳು ತಿಳಿಸಿದ್ದರಿಂದ ತೋಟಗಾರಿಕಾ ನಿಗಮ ಗೇರುಬೀಜ ನೀಡಲು ತಯಾರಾಗಿಲ್ಲ. ಮುದಲಪ್ಪಾರೆಯ ಗೋದಾಮಿನಲ್ಲಿ ಆಕ್ಕಿ ಸಾಮಗ್ರಿಗಳೊಂದಿಗೆ ರಾಶಿ ಹಾಕಿರುವ ಗೇರುಬೀಜ ಮಾರಾಟ ನಡೆಸಲು ವಿಳಂಬವಾಗುತ್ತಿದೆ. ಗೇರುಬೀಜದ ಮೌಲ್ಯ ಕುಸಿಯಲಿದೆ ಹಾಗೂ ಗೇರುಬೀಜ ಹಾಳಾಗಲಿದೆ ಎಂಬ ಆತಂಕ ಅಧಿಕಾರಿಗಳಿಗೆ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ