ಆ್ಯಪ್ನಗರ

ಕರಾವಳಿ ಹೆದ್ದಾರಿ ಪ್ರಾದೇಶಿಕ ಸಮಿತಿ ಸಭೆ

ಕಾಸರಗೋಡು: ಭಾರಿ ಸಂಖ್ಯೆಯಲ್ಲಿ ಜನರ ವಾಸ ಸ್ಥಳಾಂತರಿಸಿರುವ ಹೆದ್ದಾರಿ ನಿರ್ಮಾಣ ಸರಕಾರದ ನೀತಿಯಲ್ಲ ಎಂದೂ, ಅದು ನಡೆಯಲ್ಲ. ಜನರ ಆತಂಕ ದೂರ ಮಾಡಿ ಪುನರ್ವಸತಿ ಖಾತರಿಪಡಿಸಲಾಗುವುದು ಎಂದು ಸಚಿವ ಇ. ಚಂದ್ರಶೇಖರನ್‌ ಹೇಳಿದರು.

Vijaya Karnataka 26 Dec 2018, 5:08 pm
ಕಾಸರಗೋಡು: ಭಾರಿ ಸಂಖ್ಯೆಯಲ್ಲಿ ಜನರ ವಾಸ ಸ್ಥಳಾಂತರಿಸಿರುವ ಹೆದ್ದಾರಿ ನಿರ್ಮಾಣ ಸರಕಾರದ ನೀತಿಯಲ್ಲ ಎಂದೂ, ಅದು ನಡೆಯಲ್ಲ. ಜನರ ಆತಂಕ ದೂರ ಮಾಡಿ ಪುನರ್ವಸತಿ ಖಾತರಿಪಡಿಸಲಾಗುವುದು ಎಂದು ಸಚಿವ ಇ. ಚಂದ್ರಶೇಖರನ್‌ ಹೇಳಿದರು.
Vijaya Karnataka Web 1


ಕರಾವಳಿಯಲ್ಲಿ ಮೂರು ಸ್ಥಳಗಳಲ್ಲಿ ನಡೆದ ಕರಾವಳಿ ಹೆದ್ದಾರಿ ಪ್ರಾದೇಶಿಕ ಅಭಿವೃದ್ಧಿ ಸಮಿತಿ ಸಭೆಗಳಲ್ಲಿ ಸಚಿವರು ಮಾತನಾಡಿದರು.

ಮೀನು ಸಂಪತ್ತಿನ ಕುಸಿತ, ಉದ್ಯೋಗ ನಷ್ಟದ ದಿನಗಳಲ್ಲಿ ಕಾಲಕಳೆಯುತ್ತಿರುವ ಕರಾವಳಿಯ ಜನರ ಆತಂಕ ದೂರಮಾಡುವುದಕ್ಕಾಗಿ ಪ್ರಾದೇಶಿಕ ಅಭಿವೃದ್ಧಿ ಸಮಿತಿ ಸಭೆಗಳು ನಡೆದುವು. ಬದಲಿ ನಿರ್ದೇಶನಗಳು, ಲ್ಯಾಂಡ್‌ ಅಕ್ವಿಸಿಶನ್‌ ಸಂಬಂಧಿಸಿದ ಆತಂಕಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪರಿಸರ ಸಮಸ್ಯೆಗಳ ಕುರಿತು ಸಂವಾದಗಳು ನಡೆದುವು.

ಕಾಞಂಗಾಡು ಅಜಾನೂರು ಕೂರುಂಬ ಭಗವತೀ ಕ್ಷೇತ್ರ, ಞನಿಕ್ಕಡವ್‌ ಪುಂಜಾವಿ ಶಬರಿ ಕ್ಲಬ್‌ ಪರಿಸರ, ಮರಕ್ಕಾಪ್‌ ಮಡಪ್ಪುರ ಫಿಶರೀಸ್‌ ಪ್ರೌಢಶಾಲೆಗಳಲ್ಲಿ ಸಭೆಗಳು ನಡೆದುವು. ಮೂರು ಸ್ಥಳಗಳಲ್ಲಿ ಬಹುಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದರು.

ಮೂರು ಸಭೆಗಳಲ್ಲಿ ಸಚಿವ ಇ. ಚಂದ್ರಶೇಖರನ್‌, ಕಾಞಂಗಾಡು ನಗರಸಭಾಧ್ಯಕ್ಷ ವಿ.ವಿ. ರಮೇಶನ್‌, ಸಿಪಿಐ ಮಂಡಲ ಕಾರ್ಯದರ್ಶಿ ಸಿ.ಕೆ. ಬಾಬುರಾಜ್‌, ಕಿಫ್‌ಬಿ ಜನರಲ್‌ ಮೇನೇಜರ್‌ ಸುನಿಲ್‌ ಕುಮಾರ್‌, ನ್ಯಾಟ್‌ಪ್ಯಾಕ್‌ ಪ್ರತಿನಿಧಿ ಸಿ.ಟಿ. ವಿಲ್ಸನ್‌, ರಾಷ್ಟ್ರೀಯ ಹೆದ್ದಾರಿ ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸಿ.ಜೆ. ಕೃಷ್ಣನ್‌ ಮತ್ತಿತರರು ಉಪಸ್ಥಿತರಿದ್ದರು.

11 ಕಿಲೋ ಮೀಟರ್‌ ರಾಜ್ಯ ಹೆದ್ದಾರಿಯ ಹಾಗೂ 16 ಕಿಲೋ ಮೀಟರ್‌ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿ ಕರಾವಳಿ ಹೆದ್ದಾರಿ ಜಿಲ್ಲೆಯಲ್ಲಿ ಹಾದು ಹೋಗುತ್ತದೆ. 57 ಕಿಲೋಮೀಟರ್‌ ದೂರದಲ್ಲಿ ಜಿಲ್ಲೆಯಲ್ಲಿ ಕರಾವಳಿ ಹೆದ್ದಾರಿ ಕಾರ್ಯಾರಂಭಗೊಳ್ಳಲಿದೆ. ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ಸ್ಥಳಗಳಲ್ಲಿ ಈ ಕುರಿತಾ ಅಧ್ಯಯನ ವರದಿ ತಯಾರಿಸಲಾಗುವುದು ಎಂದೂ, 2021ರ ಮುಂಚಿತವಾಗಿ ಹೆದ್ದಾರಿ ಪೂರ್ತಿಗೊಳಿಸಲು ಸಾಧ್ಯವಾಗಲಿದೆ ಎಂದು ಕಿಫ್‌ಬಿ ಜನರಲ್‌ ಮೇನೇಜರ್‌ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಅಜಾನೂರು ಕೂರುಂಬ ಭಗವತೀ ಕ್ಷೇತ್ರ ಪರಿಸರದಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಪಿ. ದಾಮೋದರನ್‌ ಅಧ್ಯಕ್ಷ ತೆ ವಹಿಸಿದ್ದರು. ಅಜಾನೂರು ಪಂಚಾಯಿತಿ ಸದಸ್ಯೆ ಪಾರ್ವತಿ ಮಾತನಾಡಿದರು.

ಞನಿಕ್ಕಡವ್‌ ಪುಂಜಾವಿ ಶಬರಿ ಕ್ಲಬ್‌ ಪರಿಸರದಲ್ಲಿ ನಡೆದ ಸಭೆಯಲ್ಲಿ ವಿ. ವಿ. ರಮೇಶನ್‌ ಅಧ್ಯಕ್ಷ ತೆ ವಹಿಸಿದ್ದರು. ಕ್ಷೇತ್ರ ಅಧ್ಯಕ್ಷ ಪಿ. ರಾಮಕೃಷ್ಣನ್‌, ಎಂ. ಕಮಲಾಕ್ಷ ನ್‌, ಎ. ಹಮೀದ್‌ ಹಾಜಿ, ಗಣೇಶನ್‌, ನಗರಸಭಾ ಕೌನ್ಸಿಲರ್‌ ಮುಹಮ್ಮದ್‌ ಕುಞಿ, ಕರಾವಳಿ ನಿವಾಸಿಗಳಾದ ಸಾಮಿಕುಟ್ಟಿ, ಮನೋಹರನ್‌, ಎ. ರಮೇಶನ್‌ ಮಾತನಾಡಿದರು.

ಮರಕ್ಕಾಪ್‌ ಕಡಪ್ಪುರ ಫೀಶರೀಸ್‌ ಶಾಲೆಯಲ್ಲಿ ನಡೆದ ಸಭೆಯಲ್ಲಿ ಕೌನ್ಸಿಲರ್‌ ಸುಮತಿ ಸುರೇಶ್‌, ಮುಹಮ್ಮದ್‌ ಮುರಿಯನಾವಿ, ಸಂತೋಷ್‌, ಪ್ರದೀಪನ್‌ ಮರಕ್ಕಾಪ್‌, ಸುಧೀರ್‌ ಮಾಸ್ತರ್‌, ಟಿ. ವಿ. ದಾಮೋದರನ್‌ ಮಾತನಾಡಿದರು.

2017-18ರಲ್ಲಿ ನ್ಯಾಟ್‌ಪಾಕ್‌ ಸಲ್ಲಿಸಿದ ಅಲೈನ್‌ಮೆಂಟ್‌ ವರದಿ ಪ್ರಕಾರ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಾಗಿದೆ.

ಕರಾವಳಿ ರಸ್ತೆಗಳು ಅಗಲ ಕಡಿಮೆಯಾಗಿರುವುದರಿಂದ ಐದು ಮೀಟರ್‌ ಅಗಲದಲ್ಲಿರುವ ಸ್ಥಳಗಳಲ್ಲಿ ಮೇಲ್ಸೇತುವೆ ಅಗತ್ಯವಿದೆ ಎಂಬುದು ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಲಿದೆ. ಜಿಲ್ಲೆಯಲ್ಲಿ ಈ ರೀತಿ ಐದು ಹೆಚ್ಚುವರಿ ಮೇಲ್ಸೇತುವೆಗಳನ್ನು ನಿರ್ಮಿಸಬೇಕಾಗಲಿದೆ. ಪ್ರಸ್ತುತ ಎಂಟು ಮೀಟರ್‌ ಅಗಲದಲ್ಲಿರುವ ಸ್ಥಳಗಳಲ್ಲಿ ನಿರ್ಮಾಣ ಆರಂಭಿಸಲು ಯೋಜನೆ ಇರಿಸಲಾಗಿದೆ.

14 ಕಿಲೋಮೀಟರ್‌ ಅಗಲದಲ್ಲಿ ಕರಾವಳಿ ಹೆದ್ದಾರಿ ಆರಂಭವಾಗಲಿದೆ. ಇದರಲ್ಲಿ ಏಳುಮೀಟರ್‌ ಅಗಲದಲ್ಲಿ ದ್ವಿಪಥ, ಬಾಕಿ ಸ್ಥಳದಲ್ಲಿ ಫುಟ್‌ಪಾತ್‌, ಸೈಕಲ್‌ ಟ್ರ್ಯಾಕ್‌ ನಿರ್ಮಿಸಲಾಗುವುದು. ಎತ್ತರ ಕಡಿಮೆಯಾಗಿರುವುದು ಹೆದ್ದಾರಿಯ ಪ್ರಧಾನ ಸವಿಶೇಷತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ