ಆ್ಯಪ್ನಗರ

ಜಿಲ್ಲೆಯ ಮೊದಲ ಗಣಕೀಕೃತ ಚಾಲನಾ ಪರೀಕ್ಷಾ ಕೇಂದ್ರ ಕಾರ್ಯಾರಂಭ

ಕಂಪ್ಯೂಟರ್‌ ಮತ್ತು ಕ್ಯಾಮೆರಾದ ಸಹಾಯದಿಂದ ಗಣಕೀಕೃತ ಚಾಲನಾ ಪರೀಕ್ಷಾ ಕೇಂದ್ರ ಮತ್ತು ವಾಹನ ತಪಾಸಣಾ ಕೇಂದ್ರ ಕಾರ್ಯಾರಂಭಗೊಂಡಿದೆ.

Vijaya Karnataka 15 Feb 2020, 5:00 am
ಕಾಸರಗೋಡು: ಕಂಪ್ಯೂಟರ್‌ ಮತ್ತು ಕ್ಯಾಮೆರಾದ ಸಹಾಯದಿಂದ ಗಣಕೀಕೃತ ಚಾಲನಾ ಪರೀಕ್ಷಾ ಕೇಂದ್ರ ಮತ್ತು ವಾಹನ ತಪಾಸಣಾ ಕೇಂದ್ರ ಕಾರ್ಯಾರಂಭಗೊಂಡಿದೆ. ಜಿಲ್ಲೆಯ ಪ್ರಥಮ ಮತ್ತು ಎಂಟನೇ ಅತ್ಯಾಧುನಿಕ ತಪಾಸಣಾ ಕೇಂದ್ರದ ಉದ್ಘಾಟನೆಯನ್ನು ರಾಜ್ಯ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್‌ ಉದ್ಘಾಟಿಸಿದರು. ಕಂದಾಯ ಮತ್ತು ವಸತಿ ಸಚಿವ ಇ. ಚಂದ್ರಶೇಖರನ್‌ ಅಧ್ಯಕ್ಷತೆ ವಹಿಸಿದ್ದರು.
Vijaya Karnataka Web track


ನೂತನ ತಂತ್ರಜ್ಞಾನದೊಂದಿಗೆ ಹೊಸ ಕೇಂದ್ರವು ಚಾಲನಾ ಪರೀಕ್ಷೆಗಳು ಮತ್ತು ವಾಹನ ತಪಾಸಣೆ ನಡೆಸಲು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸಲು ಸಹಾಯ ಮಾಡುತ್ತದೆ. ಆಧುನಿಕ ತಪಾಸಣೆ ವ್ಯವಸ್ಥೆಯೊಂದಿಗೆ ಸುರಕ್ಷಿತ ವಾಹನ ಚಾಲನೆಯೊಂದಿಗೆ ಜೀವನವನ್ನು ಸುರಕ್ಷಿತವಾಗಿಸಲು ಸಾಧ್ಯವಾಗಲಿದೆ. ಕಾಸರಗೋಡು ಆರ್‌ಟಿಒ ಕಚೇರಿ ಅಧೀನದಲ್ಲಿರುವ ಕೇಂದ್ರವನ್ನು ಪರಿಶೀಲಿಸಲಾಗುವುದು. ಜರ್ಮನ್‌ ತಂತ್ರಜ್ಞಾನ ವ್ಯವಸ್ಥೆಯಲ್ಲಿಬೇಳದಲ್ಲಿ2.03 ಎಕರೆ ಪ್ರದೇಶದಲ್ಲಿ4.10 ಕೋಟಿ ರೂ. ವೆಚ್ಚದಲ್ಲಿಸಜ್ಜುಗೊಳಿಸಲಾಗಿದೆ. ಗಣಕೀಕೃತ ಟೆಸ್ಟ್‌ ಟ್ರ್ಯಾಕ್‌ಗಳನ್ನು ಒಳಗೊಂಡಿದೆ. ಗಣಕೀಕೃತ ವಾಹನ ತಪಾಸಣೆ ಕೇಂದ್ರದಲ್ಲಿಎಲ್‌ಎಂವಿ/ ತ್ರೀ ವೀಲರ್‌ ಟೆಸ್ಟ್‌ ಟ್ರ್ಯಾಕ್‌, ಎಚ್‌ಎಂವಿ ಟೆಸ್ಟ್‌ ಟ್ರ್ಯಾಕ್‌ ಮತ್ತು ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ.

ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌, ಶಾಸಕ ಎನ್‌.ಎ. ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಂಟಿ ಸಾರಿಗೆ ಆಯುಕ್ತ ರಾಜೀವ್‌ ಪುತಲಾತ್‌ ವರದಿ ಮಂಡಿಸಿದರು. ಸಾರಿಗೆ ಆಯುಕ್ತ ಆರ್‌. ಶ್ರೀಲೇಖಾ ಮತ್ತು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು, ಜಿಲ್ಲಾಎಸ್‌ಪಿ ಪಿ.ಎಸ್‌. ಸಾಬು, ಬದಿಯಡ್ಕ ಪಂಚಾಯಿತಿ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌, ಆರ್‌ಟಿಒ ಮನೋಜ್‌, ಪಂಚಾಯಿತಿ ಸದಸ್ಯ ಶ್ಯಾಮ್‌ಪ್ರಸಾದ್‌, ಎಸ್‌. ಸಬಾನ, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರತಿ ತಾಲೂಕಿನಲ್ಲಿಆರ್‌ಟಿಒ ಕಚೇರಿ: ಸ್ಥಳ ಲಭ್ಯವಾಗಿಸಿದರೆ ರಾಜ್ಯದಲ್ಲಿನೂತನವಾಗಿ ರಚಿಸಿದ ತಾಲೂಕುಗಳ ಸಹಿತ ಎಲ್ಲ ತಾಲೂಕುಗಳಲ್ಲಿಮುಂದಿನ ವರ್ಷವೇ ಆರ್‌ಟಿಒ ಕಚೇರಿ ಸ್ಥಾಪಿಸುವುದಾಗಿ ರಾಜ್ಯ ಸಾರಿಗೆ ಖಾತೆ ಸಚಿವ ಎ.ಕೆ. ಶಶೀಂದ್ರನ್‌ ಹೇಳಿದರು.

ಭೂಮಿಯ ಲಭ್ಯತೆ ಅಡ್ಡಿಯಾಗದಂತೆ ಪರಿಹಾರ ಕಾಣುವುದಕ್ಕಾಗಿ ಸರಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿಸ್ಥಳ ಲಭ್ಯವಾಗಿಸಲು ನಿರ್ಧರಿಸಲಾಗಿದೆ. ಅದರಂತೆ ಎಲ್ಲ ತಾಲೂಕುಗಳಲ್ಲಿಅತ್ಯಾಧುನಿಕ ಸೌಕರ‍್ಯವಿರುವ ತಪಾಸಣಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಹಳೆಯ ಚಾಲನಾ ಪರೀಕ್ಷಾ ವಿಧಾನಗಳಿಂದ ಗಣಕೀಕೃತ ಪರೀಕ್ಷಾ ಕೇಂದ್ರಗಳಿಗೆ ಬದಲಾಯಿಸಲಾಗುವುದು. ಇದು ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಅತ್ಯಾಧುನಿಕ ವ್ಯವಸ್ಥೆಯನ್ನು ರಾಜ್ಯದ ಎಂಟು ಜಿಲ್ಲೆಗಳಲ್ಲಿಜಾರಿಗೆ ತರಲಾಗಿದೆ. ಇದನ್ನು ಎಲ್ಲಾಜಿಲ್ಲೆಗಳಿಗೂ ವಿಸ್ತರಿಸುವುದಾಗಿ ಸಚಿವರು ಹೇಳಿದರು.

ಅಂತಾರಾಷ್ಟ್ರೀಯವಾಗಿ ಸ್ವೀಕರಿಸುವ ಚಾಲನಾ ಪರವಾನಗಿ ವ್ಯವಸ್ಥೆಯ ಅಂಗವಾಗಿ ಲೈಸೆನ್ಸ್‌ ನೀಡುವುದಕ್ಕಾಗಿ ತರಬೇತಿ ಕೇಂದ್ರ ಮಲಪ್ಪುರ ಜಿಲೆಯಲ್ಲಿಆರಂಭಿಸುವುದಾಗಿ ಸಾರಿಗೆ ಸಚಿವರು ಹೇಳಿದರು.

ಶಾರ್ಜಾ ಆಡಳಿತಾಧಿಕಾರಿ ಹಾಗೂ ಕೇರಳ ಸಿಎಂ ನಡೆಸಿದ ಚರ್ಚೆಯಂತೆ ತರಬೇತಿ ಕೇಂದ್ರ ಆರಂಭಿಸಲಾಗುವುದು. ಯೋಜನೆಯ ಅಂಗವಾಗಿ 35 ಕೋಟಿ ರೂ.ನ ಆಡಳಿತಾನುಮತಿ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ ಎಂದು ಸಚಿವರು ಹೇಳಿದರು.

ವೆಳ್ಳರಿಕುಂಡಿನಲ್ಲಿವಾಹನ ಇಲಾಖೆಗೆ 3 ಎಕರೆ ಸ್ಥಳ: ವೆಳ್ಳರಿಕುಂಡು ತಾಲೂಕಿನ ಪರಪ್ಪ ಗ್ರಾಮದಲ್ಲಿಮೋಟಾರ್‌ ವಾಹನ ಇಲಾಖೆಗೆ 3.3 ಎಕರೆ ಜಾಗ ಮಂಜೂರುಗೊಳಿಸುವುದಾಗಿ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ಹೇಳಿದರು. ತಾಲೂಕಿನಲ್ಲಿಸ್ಥಾಪಿಸುವ ಜಂಟಿ ಆರ್‌ಟಿಒ ಕಚೇರಿ ಅಧೀನದಲ್ಲಿಕಂಪ್ಯೂಟರೀಕೃತ ಪರೀಕ್ಷಾ ಕೇಂದ್ರ ಮತ್ತು ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾಕ್‌ ಸ್ಥಾಪಿಸುವುದಾಗಿ ಈಗಾಗಲೇ ಜಿಲ್ಲಾಧಿಕಾರಿ ವರದಿ ನೀಡಿರುವುದಾಗಿ ಸಚಿವರು ಹೇಳಿದರು. ಮಂಜೇಶ್ವರ ತಾಲೂಕಿನಲ್ಲಿಆರ್‌ಟಿಒ ಕಚೇರಿ ಆರಂಭಿಸುವ ಕ್ರಮ ಕೈಗೊಳ್ಳಲು ಸಚಿವರು ನಿರ್ದೇಶ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ