ಆ್ಯಪ್ನಗರ

ಕರೋನಾ ಆತಂಕ: ಕನ್ನಡ ಸಿರಿ ಸಮ್ಮೇಳನ ಮುಂದೂಡಿಕೆ

ಅನಂತಪುರದಲ್ಲಿ ನಡೆಯಬೇಕಾಗಿದ್ದ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನವನ್ನು ಕೊರೊನಾ ಆತಂಕದ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ವಿಶೇಷ ಸಚಿವ ಸಂಪುಟ ಸಭೆ ನಡೆಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸದ್ಯದ ಒಂದು ತಿಂಗಳ ಮಟ್ಟಿಗೆ ರಾಜ್ಯಾದ್ಯಂತ ಉತ್ಸವಾಚರಣೆಗಳನ್ನು ನಡೆಸದಂತೆ ಕಡ್ಡಾಯ ಆದೇಶ ನೀಡಿದ್ದಾರೆ. ಈ ಹಿನ್ನೆಲೆ ಕಾಸರಗೋಡು ಜಿಲ್ಲಾಧಿಕಾರಿಗಳ ಮನವಿಯ ಪ್ರಕಾರ ಕನ್ನಡ ಸಿರಿ ಸಮ್ಮೇಳನವನ್ನು ಮುಂದಿನ ಮೇ 1 ರಿಂದ 3ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.

Vijaya Karnataka Web 12 Mar 2020, 7:23 am
ಕಾಸರಗೋಡು: ಅನಂತಪುರದಲ್ಲಿಏಪ್ರಿಲ್‌ 10 ರಿಂದ 12ರವರೆಗೆ ನಡೆಯಬೇಕಾಗಿದ್ದ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನವನ್ನು ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
Vijaya Karnataka Web coronavirus scare


ವಿಶ್ವ ವ್ಯಾಪಕವಾಗಿ ಆತಂಕಕ್ಕೆ ಕಾರಣವಾಗುತ್ತಿರುವ ಕೊರೊನಾ ವೈರಸ್‌ನ ಪರಿಣಾಮ ಕೇರಳದಲ್ಲಿ 12 ಮಂದಿಗೆ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳವಾರ ವಿಶೇಷ ಸಚಿವ ಸಂಪುಟ ಸಭೆ ನಡೆಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸದ್ಯದ ಒಂದು ತಿಂಗಳ ಮಟ್ಟಿಗೆ ರಾಜ್ಯಾದ್ಯಂತ ಉತ್ಸವಾಚರಣೆಗಳನ್ನು ನಡೆಸದಂತೆ ಕಡ್ಡಾಯ ಆದೇಶ ನೀಡಿದರು. ಜತೆಗೆ ಅಂಗನವಾಡಿಗಳ ಸಹಿತ ಏಳನೇ ತರಗತಿವರೆಗೆ ಶಾಲಾ ಚಟುವಟಿಕೆ, ಪರೀಕ್ಷೆಗಳಿಗೆ ನಿರ್ಬಂಧ ಹೇರಿದ್ದು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿಗಳ ಮನವಿಯ ಪ್ರಕಾರ ಕನ್ನಡ ಸಿರಿ ಸಮ್ಮೇಳನವನ್ನು ಮುಂದಿನ ಮೇ 1 ರಿಂದ 3ರವರೆಗೆ ನಡೆಸಲು ತೀರ್ಮಾನಿಸಿರುವುದಾಗಿ ಸಮ್ಮೇಳನದ ಕೇಂದ್ರ ಸಮಿತಿ ಪ್ರಕಟಣೆ ತಿಳಿಸಿದೆ.

ಕನ್ನಡ ಸಿರಿ ಸಮ್ಮೇಳನದ ಗೌರವಾಧ್ಯಕ್ಷ ಟಿ.ಎಸ್‌.ನಾಗಾಭರಣ, ಸರ್ವಾಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುದಾಬಿ, ಅಧ್ಯಕ್ಷ ರಾಮ ಪ್ರಸಾದ್‌ ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ, ಕಾರ್ಯಾಧ್ಯಕ್ಷರಾದ ಎಂ.ವಿ.ಮಹಾಲಿಂಗೇಶ್ವರ ಭಟ್‌, ಎಸ್‌.ವಿ.ಭಟ್‌, ಪ್ರೊ.ಎ.ಶ್ರೀನಾಥ್‌, ಜಯದೇವ ಖಂಡಿಗೆ, ಪ್ರದೀಪ್‌ ಕುಮಾರ್‌ ಶೆಟ್ಟಿ ಬೇಳ, ಗೋಪಾಲ ಶೆಟ್ಟಿ ಅರಿಬೈಲು ಅವರು ಸಂಯುಕ್ತ ಪ್ರಕಟಣೆಯಲ್ಲಿಈ ಬಗ್ಗೆ ಮಾಹಿತಿ ನೀಡಿ ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆದರೆ ದಿನಾಂಕದಲ್ಲಿ ಮಾತ್ರ ಅನಿವಾರ್ಯ ಕಾರಣಗಳಿಂದ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ