ಆ್ಯಪ್ನಗರ

ಸಿಪಿಸಿಆರ್‌ಐ ಸುಧಾರಿತ ತಂತ್ರಜ್ಞಾನಕ್ಕೆ ಕೇಂದ್ರೀಯ ಪುರಸ್ಕಾರ

ಕಾಸರಗೋಡು ಸಿಪಿಸಿಆರ್‌ಐ ಕೇಂದ್ರ ಅಭಿವೃದ್ಧಿಪಡಿಸಿದ ಕಟಾವು ನಂತರದ ತಂತ್ರಜ್ಞಾನ ಆಧರಿತ ಸೇವೆಗೆ ಕೇಂದ್ರೀಯ ಪುರಸ್ಕಾರ ಲಭಿಸಿದೆ.

Vijaya Karnataka 31 Jan 2020, 5:00 am
ಮಂಜೇಶ್ವರ: ಕಾಸರಗೋಡು ಸಿಪಿಸಿಆರ್‌ಐ ಕೇಂದ್ರ ಅಭಿವೃದ್ಧಿಪಡಿಸಿದ ಕಟಾವು ನಂತರದ ತಂತ್ರಜ್ಞಾನ ಆಧರಿತ ಸೇವೆಗೆ ಕೇಂದ್ರೀಯ ಪುರಸ್ಕಾರ ಲಭಿಸಿದೆ.
Vijaya Karnataka Web cpcri


2019-20ನೇ ಸಾಲಿನ 25ನೇ ಅಖಿಲ ಭಾರತೀಯ ಸಂಯೋಜಿತ ಸಂಶೋಧನಾ ಯೋಜನೆಯಡಿ ಜಬಲ್ಪುರದ ಜವಾಹರಲಾಲ್‌ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಆಯೋಜಿಸಿದ್ದ ಕಾರ್ಯಾಗಾರದಲ್ಲಿಕಟಾವು ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಸಿಪಿಸಿಆರ್‌ಐ ಸಂಸ್ಥೆಗೆ ಈ ಪ್ರಶಸ್ತಿ ನೀಡಲಾಗಿದೆ.

ಜ.23ರಿಂದ 25ರ ತನಕ ಜಬಲ್ಪುರದಲ್ಲಿನಡೆದ ಕೃಷಿ ತಂತ್ರಜ್ಞಾನ ಆಧರಿತ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿಈ ಪುರಸ್ಕಾರವನ್ನು ಸಿಪಿಸಿಆರ್‌ಐ ಸಂಸ್ಥೆಗೆ ನೀಡಲಾಯಿತು. ಐಸಿಎಆರ್‌-ಸಿಪಿಸಿಆರ್‌ಐ ಕಾಸರಗೋಡು ಸಂಸ್ಥೆ ತೆಂಗು ಬೆಳೆಯ ಅಭಿವೃದ್ಧಿ ಸಹಿತ ಅದನ್ನು ಪ್ರೋತ್ಸಾಹಿಸುವ ಮೂಲಕ ಜನರನ್ನು ತೆಂಗು ಕೃಷಿಯತ್ತ ಆಕರ್ಷಿಸಿದೆ.

ಅದರಂತೆ ತೆಂಗಿನ ಐಸ್‌ಕ್ರೀಂ, ತೆಂಗಿನೆಣ್ಣೆ, ಕೊಕ್ಕೋ ಚಾಕಲೇಟ್‌ ಸಹಿತ ತೆಂಗಿನಿಂದ ಸಕ್ಕರೆ ಉತ್ಪಾದಿಸುವ ಕಾರ್ಯವನ್ನು ಯಶಸ್ವಿಯಾಗಿಸಿದೆ. ಹಲವು ಮೌಲ್ಯಾಧರಿತ ಉತ್ಪನ್ನಗಳನ್ನು ತಯಾರಿಸಿ, ಪ್ರೋತ್ಸಾಹಿಸುವುದರ ಜತೆಗೆ ಮಾರುಕಟ್ಟೆ ಸೃಷ್ಟಿಯಲ್ಲೂಸಾಧನೆ ಮಾಡಿದ ಸಿಪಿಸಿಆರ್‌ಐ ಕಾರ್ಯವನ್ನು ಶ್ಲಾಘಿಸಿರುವ ಜಲಬಲ್ಪುರ ವಿವಿಯು ಕೇಂದ್ರೀಯ ಪುರಸ್ಕಾರ ನೀಡಿದೆ.

ಸಿಪಿಸಿಆರ್‌ಐ ಸಂಸ್ಥೆ ಈಗಾಗಲೇ ನಾಲ್ಕು ತಂತ್ರಜ್ಞಾನವನ್ನು ಉದ್ಯಮಿಗಳಿಗೆ ನೀಡಿದೆ. ನಾಲ್ಕು ತಾಂತ್ರಿಕ ಸಾಧನಗಳನ್ನು 16 ಉದ್ಯಮಿಗಳ ಮೂಲಕ ಮುನ್ನಡೆಸುತ್ತಿದೆ. ಸಂಸ್ಥೆಯಿಂದ ತಯಾರಿಸಲಾದ ಮೌಲ್ಯಾಧರಿತ ವಸ್ತುಗಳು ಒಟ್ಟು ಏಳು ಕೃಷಿ ಮೇಳ, ವ್ಯಾಪಾರಿ ಮೇಳ ಸಹಿತ ನಾನಾ ಪ್ರದರ್ಶನ ಮಳಿಗೆಗಳಲ್ಲಿಪ್ರದರ್ಶಿಸಲಾಗಿದೆ. ನೂತನ ತಂತ್ರಜ್ಞಾನವನ್ನು ಹಲವೆಡೆ ಪ್ರದರ್ಶಿಸಲಾಗಿದ್ದು, ಸುಧಾರಿತ ತಂತ್ರಜ್ಞಾನದ ಬಗ್ಗೆ ಸಂಶೋಧನಾ ಲೇಖನಗಳು ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿಪ್ರಕಟಗೊಂಡಿದೆ. ಒಂದು ತಂತ್ರಜ್ಞಾನಕ್ಕೆ ಪೇಟೆಂಟ್‌ ಕೂಡ ಲಭಿಸಿದೆ.

ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಎಂ.ಆರ್‌. ಮಣಿಕಂಠನ್‌ ಮತ್ತು ಡಾ. ಆರ್‌. ಪಾಂಡಿಸೆಲ್ವನ್‌ ಸಂಸ್ಥೆಗೆ ಲಭಿಸಿದ ಉನ್ನತ ಪುರಸ್ಕಾರ ಸ್ವೀಕರಿಸಿದರು. ಜೆ.ಎನ್‌.ಕೆ.ವಿ.ವಿ ಸಂಸ್ಥೆಯ ಉಪ ಕುಲಪತಿ ಡಾ. ಪಿ.ಕೆ. ಬಿಸೆನ್‌ ಪ್ರಶಸ್ತಿ ಹಸ್ತಾಂತರಿಸಿದರು. ಡಾ. ಎಸ್‌.ಎನ್‌. ಝಾ, ಡಾ. ಎಸ್‌.ಕೆ. ತ್ಯಾಗಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ