ಆ್ಯಪ್ನಗರ

ಮುಳ್ಳೇರಿಯ ಪೇಟೆಯಲ್ಲಿ ಭೀತಿ ಹುಟ್ಟಿಸುವ ವೃಕ್ಷ ಗಳು

ಇಲ್ಲಿನ ಪೇಟೆಯ ಮಧ್ಯದಲ್ಲಿರುವ ವೃಕ್ಷ ಗಳು ಸದಾ ಭೀತಿಗೆ ಕಾರಣವಾಗುತ್ತಿವೆ...

Vijaya Karnataka 12 Aug 2019, 5:00 am
ಮುಳ್ಳೇರಿಯ: ಇಲ್ಲಿನ ಪೇಟೆಯ ಮಧ್ಯದಲ್ಲಿರುವ ವೃಕ್ಷ ಗಳು ಸದಾ ಭೀತಿಗೆ ಕಾರಣವಾಗುತ್ತಿವೆ.
Vijaya Karnataka Web dangerous tress at mulleria town
ಮುಳ್ಳೇರಿಯ ಪೇಟೆಯಲ್ಲಿ ಭೀತಿ ಹುಟ್ಟಿಸುವ ವೃಕ್ಷ ಗಳು


ಮರಗಳನ್ನು ಕಡಿಯುವುದು ನಿಯಮ ವಿರುದ್ಧವಾದರೂ ಪೇಟೆಯ ನಡುವಿನಲ್ಲಿರುವ ವೃಕ್ಷ ಗಳು ಯಾವಾಗಲೂ ಅಪಾಯವನ್ನು ತಂದೊಡ್ಡಬಲ್ಲುವು. ಬæೕಸಗೆ ಸಂದರ್ಭದಲ್ಲಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ, ನೆರಳೂ ಲಭಿಸುತ್ತದೆ. ಆದರೆ ಮಳೆಗಾಲದಲ್ಲಿ ಇವು ಭಯವನ್ನು ಹುಟ್ಟಿಸುತ್ತಿವೆ. ಈ ವರ್ಷದ ಮಳೆಗಾಲದ ಬೀಸಿ ಬರುವ ಗಾಳಿಯು ಈ ವೃಕ್ಷ ಗಳ ಕೊಂಬæಗಳನ್ನು ಮುರಿದು ಹಾಕುವಂತೆ ಬೀಸಿ ಮರೆಯಾಗುತ್ತಿದೆ. ಪೇಟೆಗೆ ಬಂದವರು ಇದರ ಪಕ್ಕದಲ್ಲಿಯೇ ಸಾಗುವ ಕಾರಣ ಭಯಪಡಬæೕಕಾಗಿದೆ. ಈ ವೃಕ್ಷ ಗಳ ಅಡಿಯಲ್ಲಿ ವಾಹನಗಳ ಪಾರ್ಕಿಂಗ್‌ ಇರುತ್ತದೆ. ಯಾವಾಗ ಈ ವಾಹನಗಳ ಮೇಲæ ಮರದ ಗೆಲ್ಲುಗಳು ಬಿದ್ದೀತೋ ಎಂಬ ಭೀತಿಯೂ ಇದೆ. ಈ ವೃಕ್ಷ ಗಳ ಸಮೀಪದಲ್ಲಿಯೇ ವಿದ್ಯುತ್ತ್‌ ತಂತಿಯೂ ಹಾದು ಹೋಗಿದೆ. ಹೀಗಾಗಿ ಅಪಾಯ ಭೀತಿ ಮತ್ತಷ್ಟೂ ಹೆಚ್ಚಾಗಿದೆ. ಕನಿಷ್ಠ ಈ ಮರಗಳ ಕೊಂಬೆಗಳನ್ನಾದರೂ ಕತ್ತರಿಸಿದರೆ ಅಪಾಯ ಕಡಿಮೆಯಾಗಬಹುದು.

ಸುಳ್ಯ, ಅಡೂರು ಪ್ರದೇಶಗಳಿಗೆ ಸಾಗುವ ಬಸ್‌ ನಿಲುಗಡೆಯ ಸ್ಥಳದಲ್ಲಿರುವ ಬೃಹತ್‌ ವೃಕ್ಷ ಗಳೂ ಅಪಾಯಕಾರಿಯಾಗಿವೆ. ಕಳೆದ ವರ್ಷ ಇವುಗಳ ಕೊಂಬೆಯನ್ನು ಕತ್ತರಿಸಲಾಗಿತ್ತು. ಆದರೂ ಇನ್ನೂ ಜಾಗರೂಕರಾಗಿರಬæೕಕು. ಈ ಮರಗಳ ಅಡಿಯಲ್ಲ್ಲಿಯೇ ಕೆಲವಾರು ಗೂಡಂಗಡಿಗಳು ಇವೆ. ಬಾಡಿಗೆ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತದೆ. ಹೀಗಾಗಿ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತಿದೆ.
ವಿದ್ಯುತ್ತ್‌ ಇಲಾಖೆಯು ಅಪಾಯವನ್ನು ಮನಗಂಡು ತಂತಿಗೆ ನಿಕಟವಾಗಿದ್ದ ವೃಕ್ಷ ಗಳ ಕೊಂಬæಗಳನ್ನು ತುಂಡರಿಸಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ