ಆ್ಯಪ್ನಗರ

ಸೌಲಭ್ಯಗಳಿಗೆ ಶಿಫಾರಸು ಮಾಡಿದ ಎಂಡೋ ಸಂತ್ರಸ್ತರ ತಪಾಸಣೆ ಕಡ್ಡಾಯವಲ್ಲ

ಎಂಡೋಸಲ್ಫಾನ್‌ ಸಂತ್ರಸ್ತರಲ್ಲಿ ಸೌಲಭ್ಯಗಳಿಗೆ ಈಗಾಗಲೇ ವೈದ್ಯಕೀಯ ತಂಡ ಶಿಫಾರಸು ಮಾಡಿದವರ ವಿಷಯದಲ್ಲಿ ಮತ್ತೆ ತಪಾಸಣೆ ಕಡ್ಡಾಯಗೊಳಿಸಬೇಕಾಗಿಲ್ಲ ಎಂದು ತೀರ್ಮಾನಿಸಿ ಸರಕಾರ ಆದೇಶ ಹೊರಡಿಸಿದೆ.

Vijaya Karnataka 19 Mar 2019, 5:00 am
ಕಾಸರಗೋಡು: ಎಂಡೋಸಲ್ಫಾನ್‌ ಸಂತ್ರಸ್ತರಲ್ಲಿ ಸೌಲಭ್ಯಗಳಿಗೆ ಈಗಾಗಲೇ ವೈದ್ಯಕೀಯ ತಂಡ ಶಿಫಾರಸು ಮಾಡಿದವರ ವಿಷಯದಲ್ಲಿ ಮತ್ತೆ ತಪಾಸಣೆ ಕಡ್ಡಾಯಗೊಳಿಸಬೇಕಾಗಿಲ್ಲ ಎಂದು ತೀರ್ಮಾನಿಸಿ ಸರಕಾರ ಆದೇಶ ಹೊರಡಿಸಿದೆ.
Vijaya Karnataka Web endo santhrasthara test not must
ಸೌಲಭ್ಯಗಳಿಗೆ ಶಿಫಾರಸು ಮಾಡಿದ ಎಂಡೋ ಸಂತ್ರಸ್ತರ ತಪಾಸಣೆ ಕಡ್ಡಾಯವಲ್ಲ


2017ರ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದ 1905 ಮಂದಿಯಲ್ಲಿ 18 ವಯಸ್ಸಿಗಿಂತ ಕೆಳಗಿನ ಮಕ್ಕಳನ್ನು ವೈದ್ಯಕೀಯ ತಂಡದ ತಪಾಸಣೆಯ ಆಧಾರದಲ್ಲಿ ಸೌಲಭ್ಯಗಳಿಗಾಗಿ ಒಳಪಡಿಸಬೇಕು ಹಾಗೂ ಕಾಸರಗೋಡು ಜಿಲ್ಲಾಧಿಕಾರಿ ಈ ವಿಷಯದಲ್ಲಿ ಅಗತ್ಯ ತಪಾಸಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಎಂಡೋಸಲ್ಫಾನ್‌ ಸಂತ್ರಸ್ತರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಕುರಿತು ಸಂತ್ರಸ್ತರ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಕಂದಾಯ-ಆರೋಗ್ಯ-ಸಾಮಾಜಿಕ ನ್ಯಾಯ ಸಚಿವರ ನೇತೃತ್ವದಲ್ಲಿ ನಡೆಸಿದ ಚರ್ಚೆಗಳ ಆಧಾರದಲ್ಲಿ ಈ ನಿರ್ದೇಶನಗಳನ್ನು ಒಳಗೊಂಡ ಆದೇಶವನ್ನು ಸಾಮಾಜಿಕ ನ್ಯಾಯ ಇಲಾಖೆ ಹೊರಡಿಸಿದೆ.

ಶಿಬಿರ ನಡೆದ ದಿನ ಹರತಾಳ ಆಗಿರುವುದರಿಂದ ಭಾಗವಹಿಸಲು ಸಾಧ್ಯವಾಗದವರು, ಭಾಗವಹಿಸಲು ಸ್ಲಿಪ್‌ ಲಭಿಸಿದವರು ಎಲ್ಲರನ್ನು ಪಾಲ್ಗೊಳ್ಳಿಸಿ ಜಿಲ್ಲಾಧಿಕಾರಿ ಶಿಬಿರ ನಡೆಸಬೇಕು. ಎಂಡೋಸಲ್ಫಾಣ್‌ ಸಂತ್ರಸ್ತ ಪಂಚಾಯಿತಿಗಳಿಂದ ಹೊರಹೋಗಿ ವಾಸವಿರುವವರನ್ನು ಕೂಡ ಪಂಚಾಯಿತಿಗಳ ಗಡಿಭಾಗವನ್ನು ಪರಿಗಣಿಸಿ, ಅರ್ಹರನ್ನು ಎಂಡೋಸಲ್ಫಾನ್‌ ಸಂತ್ರಸ್ತ ಪಟ್ಟಿಯಲ್ಲಿ ಒಳಪಡಿಸಲು ಬೇಕಾದ ಕ್ರಮಗಳನ್ನು ಜಿಲ್ಲಾಧಿಕಾರಿ ಕೈಗೊಳ್ಳುವರು. ಒಂದೇ ಮನೆಯಲ್ಲಿ ಸಮಾನ ರೀತಿಯಲ್ಲಿ ಅಸೌಖ್ಯ ಬಾಧಿಸಿದ ಮಕ್ಕಳಲ್ಲಿ ಒಂದು ಮಗುವನ್ನು ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡಿಸಲು ಕ್ರಮ ಕೈಗೊಳ್ಳಬೇಕು. 50 ಸಾವಿರ ರೂ.ಗಳಿಂದ 3 ಲಕ್ಷ ರೂ. ವರೆಗಿನ ಸಂತ್ರಸ್ತರ ಸಾಲ ಹೊರೆಗಳನ್ನು ಮನ್ನಾಗೊಳಿಸಲು ಶೀಘ್ರ ಕ್ರಮ ಜರುಗಿಸಬೇಕು. ಎಂಡೋಸಲ್ಫಾನ್‌ ಪುನರ್ವಸತಿ ಗ್ರಾಮ ನಿರ್ಮಾಣ ಕಾರಾರ‍ಯಚರಣೆ ಸಮಯೋಚಿತವಾಗಿ ಪೂರ್ತಿಗೊಳಿಸಲು ಬಡ್ಸ್‌ ಶಾಲೆಗಳ ಕಾರಾರ‍ಯಚರಣೆ ಪುನರಾರಂಭಿಸಲಿರುವ ಕ್ರಮಗಳನ್ನು ಸಾಮಾಜಿಕ ನ್ಯಾಯ ಇಲಾಖೆಯೊಂದಿಗೆ ಸೇರಿ ಕೈಗೊಳ್ಳಬೇಕು. ಎಲ್ಲ ಸಂತ್ರಸ್ತರನ್ನು ಬಿಪಿಎಲ್‌ ಪಟ್ಟಿಯಲ್ಲಿ ಒಳಪಡಿಸಲಿರುವ ಕ್ರಮವನ್ನು ಆಹಾರ, ಸಿವಿಲ್‌ ಸಪ್ಲೈಸ್‌ ಇಲಾಖೆ ಸಂಪರ್ಕಿಸಿ ಕೈಗೊಳ್ಳಬೇಕು. ಪೆಸ್ಟಿಸೈಡ್‌ ಇಂಡಿಯಾ ಲಿಮಿಟೆಡ್‌ನ್ನು ಸಂಪರ್ಕಿಸಿ ದಾಸ್ತಾನಿಟ್ಟ ಎಂಡೋಸಲ್ಫಾನ್‌ನ್ನು ತ್ವರಿತವಾಗಿ ನಿಷ್ಕ್ರಿಯಗೊಳಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ