ಗಂಗಾಧರ್ ಯಾದವ್, ಕಾಸರಗೋಡು
ಎರ್ನಾಕುಳಂ ಜಿಲ್ಲೆಯು ಕೇರಳದ ಮೊದಲ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಲಿದ್ದು, ಈ ಬಗ್ಗೆ ಸಿದ್ಧತೆ ಆರಂಭಗೊಂಡಿದೆ. ಇದರ ಅಂಗವಾಗಿ ಕೊಚ್ಚಿಯ ಚೈಲ್ಡ್ಲೈನ್ನ ನೇತೃತ್ವದಲ್ಲಿ ಜಿಲ್ಲೆಯ ಮನೆಗಳಲ್ಲಿ, ಬಾಲ ಕಾರ್ಮಿಕರು ಕೆಲಸ ಮಾಡುವಂತಹ ಸ್ಥಳಗಳನ್ನು ಕೇಂದ್ರೀಕರಿಸಿ ಮೂರು ತಿಂಗಳ ಕಾಲ ಜಾಗೃತಿ ಅಭಿಯಾನ ಆರಂಭಗೊಂಡಿದೆ.
14 ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಬಾಲ ಕಾರ್ಮಿಕ ನಿಷೇಧ ಕಾನೂನು ಪ್ರಕಾರ ಜೈಲು ಶಿಕ್ಷೆ ಲಭಿಸಬಹುದಾದಂತಹ ಅಪರಾಧವಾಗಿದೆ. ಇದರಂತೆ ಕೊಚ್ಚಿ ನಗರದಲ್ಲಿ ಮೊದಲ ಹಂತದ ಅಭಿಯಾನ ಆರಂಭಗೊಂಡಿದೆ. ಹೊರ ರಾಜ್ಯ ಕಾರ್ಮಿಕರು ಹೆಚ್ಚಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಪೆರುಂಬವೂರು ಮತ್ತಿತರ ಕೇಂದ್ರಗಳಲ್ಲಿ ಅಭಿಯಾನ ನಡೆಸಲಾಗುವುದು. ಕೊಚ್ಚಿ ನಗರದಲ್ಲಿನ ಹೋಟೆಲ್ಗಳು, ಬೇಕರಿಗಳು, ಅಂಗಡಿಗಳು, ಫ್ಯಾಕ್ಟರಿಗಳು, ಫ್ಲ್ಯಾಟ್ ಮೊದಲಾದ ಕಡೆಗಳಲ್ಲಿ ಹೊರ ರಾಜ್ಯದಿಂದ ಬಂದ ಅನೇಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿಯಲ್ಲಿ ಹೊರ ರಾಜ್ಯ ಕಾರ್ಮಿಕರನ್ನು ಕೆಲಸಕ್ಕಾಗಿ ಇರಿಸಿಕೊಂಡಿರುವ ಮಾಲೀಕರಿಗೆ 14 ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳನ್ನು ಇರಿಸಿಕೊಳ್ಳದಂತೆ ನಿರ್ದೇಶನ ನೀಡಲಾಗುವುದು ಅಲ್ಲದೆ ಈ ಬಗ್ಗೆ ಸ್ಟಿಕ್ಕರ್ಗಳನ್ನು ಫ್ಲ್ಯಾಟ್, ಕಾರ್ಖಾನೆಗಳು ಸೇರಿದಂತೆ ಆಯಾ ಜನನಿಭಿಡ ಕೇಂದ್ರಗಳಲ್ಲಿ ಅಂಟಿಸಲಾಗುವುದು.
ಅಭಿಯಾನದ ಅಂಗವಾಗಿ 14ರಿಂದ 18 ವರ್ಷ ವಯೋಮಿತಿಯವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಪಾಲಿಸಬೇಕಾದ ವ್ಯವಸ್ಥೆಗಳ ಕುರಿತು ಮಾರ್ಗಸೂಚಿಗಳನ್ನು ಕೂಡ ನೀಡಲಾಗುವುದು. ಬೆಳಗ್ಗೆ 8ರಿಂದ ರಾತ್ರಿ 7ರ ತನಕ ಮಾತ್ರ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು, ಅಲ್ಲದೆ ಪ್ರತಿ ಮೂರು ಗಂಟೆಗಳಿಗೊಮ್ಮೆ ವಿಶ್ರಾಂತಿ ನೀಡಬೇಕು. ಬೆಂಕಿ ಸಂಬಂಧಪಟ್ಟಂತೆ ಕೆಲಸಗಳು, ಕಟ್ಟಡ ನಿರ್ಮಾಣ ಸಹಿತ ಭಾರ ಎತ್ತುವ ಕೆಲಸಗಳನ್ನು ಮಾಡಿಸದಂತೆ ಮಾರ್ಗಸೂಚಿಗಳನ್ನು ನೀಡಲಾಗುವುದು. ಬಾಲ ಕಾರ್ಮಿಕ ನಿಷೇಧ ದಿನವಾದ ಜೂ.12ರಂದು ಪೂರ್ಣಗೊಳಿಸುವ ರೀತಿಯಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ.
ಪ್ರತಿ ದಿನ ತಮಿಳುನಾಡು, ಬಿಹಾರ, ಅಸ್ಸಾಂ, ಒಡಿಸ್ಸಾ ಸೇರಿದಂತೆ ವಿವಿಧ ರಾಜ್ಯಗಳಿಂದ ನೂರಾರು ಮಕ್ಕಳ ಸಹಿತ ಯುವಕರು ಕೆಲಸ ಆರಿಸಿಕೊಂಡು ಕೇರಳಕ್ಕೆ ಆಗಮಿಸುತ್ತಾರೆ. ಅವರವರ ಮಾತೃ ರಾಜ್ಯಗಳಲ್ಲಿ ಪ್ರತಿ ದಿನ ಕೆಲಸಕ್ಕಾಗಿ 50ರಿಂದ 80 ರೂ. ತನಕ ಕೂಲಿ ಲಭಿಸಿದರೆ ಕೇರಳದಲ್ಲಿ ಅವರಿಗೆ ಪ್ರತಿ ದಿನ 100ರಿಂದ 200 ರೂ. ತನಕ ಕೂಲಿ ಲಭಿಸುತ್ತದೆ. ಇದರಿಂದಲೇ ಉತ್ತರ ಭಾರತದಿಂದ ಅನೇಕ ಮಂದಿ ಕೆಲಸ ಅರಸಿಕೊಂಡು ಕೇರಳಕ್ಕೆ ಆಗಮಿಸುತ್ತಾರೆ.
ಕೊಚ್ಚಿಯಲ್ಲಿ ಹೆಚ್ಚಿದ ಪ್ರಕರಣ: ಇದೇ ಸಂದರ್ಭದಲ್ಲಿ ಬಾಲ ಕಾರ್ಮಿಕ ಪ್ರಕರಣಗಳು ಕೊಚ್ಚಿಯಲ್ಲಿ ಹೆಚ್ಚಳಗೊಂಡಿದೆ. 2017-18ನೇ ಅವಧಿಯಲ್ಲಿ 39 ಪ್ರಕರಣಗಳು ದಾಖಲಾಗಿದ್ದರೆ 2016-17ರಲ್ಲಿ 35 ಪ್ರಕರಣಗಳು ದಾಖಲಾಗಿದ್ದವು. ಮುಂದಿನ ಹಂತದಲ್ಲಿ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಸಮಗ್ರ ಅಭಿಯಾನ ನಡೆಸಿ ಸಂಪೂರ್ಣವಾಗಿ ಬಾಲಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಗುವುದು.
ಎರ್ನಾಕುಳಂ ಜಿಲ್ಲೆಯು ಕೇರಳದ ಮೊದಲ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಲಿದ್ದು, ಈ ಬಗ್ಗೆ ಸಿದ್ಧತೆ ಆರಂಭಗೊಂಡಿದೆ. ಇದರ ಅಂಗವಾಗಿ ಕೊಚ್ಚಿಯ ಚೈಲ್ಡ್ಲೈನ್ನ ನೇತೃತ್ವದಲ್ಲಿ ಜಿಲ್ಲೆಯ ಮನೆಗಳಲ್ಲಿ, ಬಾಲ ಕಾರ್ಮಿಕರು ಕೆಲಸ ಮಾಡುವಂತಹ ಸ್ಥಳಗಳನ್ನು ಕೇಂದ್ರೀಕರಿಸಿ ಮೂರು ತಿಂಗಳ ಕಾಲ ಜಾಗೃತಿ ಅಭಿಯಾನ ಆರಂಭಗೊಂಡಿದೆ.
14 ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಬಾಲ ಕಾರ್ಮಿಕ ನಿಷೇಧ ಕಾನೂನು ಪ್ರಕಾರ ಜೈಲು ಶಿಕ್ಷೆ ಲಭಿಸಬಹುದಾದಂತಹ ಅಪರಾಧವಾಗಿದೆ. ಇದರಂತೆ ಕೊಚ್ಚಿ ನಗರದಲ್ಲಿ ಮೊದಲ ಹಂತದ ಅಭಿಯಾನ ಆರಂಭಗೊಂಡಿದೆ. ಹೊರ ರಾಜ್ಯ ಕಾರ್ಮಿಕರು ಹೆಚ್ಚಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಪೆರುಂಬವೂರು ಮತ್ತಿತರ ಕೇಂದ್ರಗಳಲ್ಲಿ ಅಭಿಯಾನ ನಡೆಸಲಾಗುವುದು. ಕೊಚ್ಚಿ ನಗರದಲ್ಲಿನ ಹೋಟೆಲ್ಗಳು, ಬೇಕರಿಗಳು, ಅಂಗಡಿಗಳು, ಫ್ಯಾಕ್ಟರಿಗಳು, ಫ್ಲ್ಯಾಟ್ ಮೊದಲಾದ ಕಡೆಗಳಲ್ಲಿ ಹೊರ ರಾಜ್ಯದಿಂದ ಬಂದ ಅನೇಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿಯಲ್ಲಿ ಹೊರ ರಾಜ್ಯ ಕಾರ್ಮಿಕರನ್ನು ಕೆಲಸಕ್ಕಾಗಿ ಇರಿಸಿಕೊಂಡಿರುವ ಮಾಲೀಕರಿಗೆ 14 ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳನ್ನು ಇರಿಸಿಕೊಳ್ಳದಂತೆ ನಿರ್ದೇಶನ ನೀಡಲಾಗುವುದು ಅಲ್ಲದೆ ಈ ಬಗ್ಗೆ ಸ್ಟಿಕ್ಕರ್ಗಳನ್ನು ಫ್ಲ್ಯಾಟ್, ಕಾರ್ಖಾನೆಗಳು ಸೇರಿದಂತೆ ಆಯಾ ಜನನಿಭಿಡ ಕೇಂದ್ರಗಳಲ್ಲಿ ಅಂಟಿಸಲಾಗುವುದು.
ಅಭಿಯಾನದ ಅಂಗವಾಗಿ 14ರಿಂದ 18 ವರ್ಷ ವಯೋಮಿತಿಯವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಪಾಲಿಸಬೇಕಾದ ವ್ಯವಸ್ಥೆಗಳ ಕುರಿತು ಮಾರ್ಗಸೂಚಿಗಳನ್ನು ಕೂಡ ನೀಡಲಾಗುವುದು. ಬೆಳಗ್ಗೆ 8ರಿಂದ ರಾತ್ರಿ 7ರ ತನಕ ಮಾತ್ರ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು, ಅಲ್ಲದೆ ಪ್ರತಿ ಮೂರು ಗಂಟೆಗಳಿಗೊಮ್ಮೆ ವಿಶ್ರಾಂತಿ ನೀಡಬೇಕು. ಬೆಂಕಿ ಸಂಬಂಧಪಟ್ಟಂತೆ ಕೆಲಸಗಳು, ಕಟ್ಟಡ ನಿರ್ಮಾಣ ಸಹಿತ ಭಾರ ಎತ್ತುವ ಕೆಲಸಗಳನ್ನು ಮಾಡಿಸದಂತೆ ಮಾರ್ಗಸೂಚಿಗಳನ್ನು ನೀಡಲಾಗುವುದು. ಬಾಲ ಕಾರ್ಮಿಕ ನಿಷೇಧ ದಿನವಾದ ಜೂ.12ರಂದು ಪೂರ್ಣಗೊಳಿಸುವ ರೀತಿಯಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ.
ಪ್ರತಿ ದಿನ ತಮಿಳುನಾಡು, ಬಿಹಾರ, ಅಸ್ಸಾಂ, ಒಡಿಸ್ಸಾ ಸೇರಿದಂತೆ ವಿವಿಧ ರಾಜ್ಯಗಳಿಂದ ನೂರಾರು ಮಕ್ಕಳ ಸಹಿತ ಯುವಕರು ಕೆಲಸ ಆರಿಸಿಕೊಂಡು ಕೇರಳಕ್ಕೆ ಆಗಮಿಸುತ್ತಾರೆ. ಅವರವರ ಮಾತೃ ರಾಜ್ಯಗಳಲ್ಲಿ ಪ್ರತಿ ದಿನ ಕೆಲಸಕ್ಕಾಗಿ 50ರಿಂದ 80 ರೂ. ತನಕ ಕೂಲಿ ಲಭಿಸಿದರೆ ಕೇರಳದಲ್ಲಿ ಅವರಿಗೆ ಪ್ರತಿ ದಿನ 100ರಿಂದ 200 ರೂ. ತನಕ ಕೂಲಿ ಲಭಿಸುತ್ತದೆ. ಇದರಿಂದಲೇ ಉತ್ತರ ಭಾರತದಿಂದ ಅನೇಕ ಮಂದಿ ಕೆಲಸ ಅರಸಿಕೊಂಡು ಕೇರಳಕ್ಕೆ ಆಗಮಿಸುತ್ತಾರೆ.
ಕೊಚ್ಚಿಯಲ್ಲಿ ಹೆಚ್ಚಿದ ಪ್ರಕರಣ: ಇದೇ ಸಂದರ್ಭದಲ್ಲಿ ಬಾಲ ಕಾರ್ಮಿಕ ಪ್ರಕರಣಗಳು ಕೊಚ್ಚಿಯಲ್ಲಿ ಹೆಚ್ಚಳಗೊಂಡಿದೆ. 2017-18ನೇ ಅವಧಿಯಲ್ಲಿ 39 ಪ್ರಕರಣಗಳು ದಾಖಲಾಗಿದ್ದರೆ 2016-17ರಲ್ಲಿ 35 ಪ್ರಕರಣಗಳು ದಾಖಲಾಗಿದ್ದವು. ಮುಂದಿನ ಹಂತದಲ್ಲಿ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಸಮಗ್ರ ಅಭಿಯಾನ ನಡೆಸಿ ಸಂಪೂರ್ಣವಾಗಿ ಬಾಲಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಗುವುದು.