ಆ್ಯಪ್ನಗರ

ಆನೆಕಾಲು ರೋಗಿಗಳು ಚಿಕಿತ್ಸೆ ಲಭಿಸದೆ ಮರಳುವಂತಾಗಬಾರದು

ಆನೆಕಾಲು ಇನ್ನಿತರ ದೀರ್ಘಕಾಲಿಕ ಚರ್ಮರೋಗಗಳ ಕುರಿತು ಕಾಸರಗೋಡಿನ ಐಎಡಿಯಲ್ಲಿನಡೆದ 10ನೇ ರಾಷ್ಟ್ರೀಯ ವಿಚಾರ ಸಂಕಿರಣ ಗುರುವಾರ ಸಮಾರೋಪಗೊಂಡಿತು.

Vijaya Karnataka 21 Feb 2020, 5:00 am
ಕಾಸರಗೋಡು: ಆನೆಕಾಲು ಇನ್ನಿತರ ದೀರ್ಘಕಾಲಿಕ ಚರ್ಮರೋಗಗಳ ಕುರಿತು ಕಾಸರಗೋಡಿನ ಐಎಡಿಯಲ್ಲಿನಡೆದ 10ನೇ ರಾಷ್ಟ್ರೀಯ ವಿಚಾರ ಸಂಕಿರಣ ಗುರುವಾರ ಸಮಾರೋಪಗೊಂಡಿತು.
Vijaya Karnataka Web 20KSNARAHARI_29


ಸಮಾರೋಪ ಭಾಷಣ ಮಾಡಿದ ಐಎಡಿಯ ನಿರ್ದೇಶಕ ಡಾ. ಎಸ್‌.ಆರ್‌. ನರಹರಿ, ಬಡವರ ದೊಡ್ಡ ಅನಾರೋಗ್ಯವೆಂದೇ ಬಿಂಬಿತವಾಗಿರುವ ಆನೆಕಾಲು ರೋಗ ನಿಯಂತ್ರಣ-ಚಿಕಿತ್ಸೆಗಾಗಿ ಐಎಡಿಗೆ ಆಗಮಿಸುವ ರೋಗಿಗಳು ಯಾವ ಕಾರಣಕ್ಕೂ ಚಿಕಿತ್ಸೆಗೆ ಹಣವಿಲ್ಲವೆಂದು ಹಿಂತೆರಳುವ ಸಾಧ್ಯತೆಯೇ ಇಲ್ಲ. ಈ ನಿಟ್ಟಿನಲ್ಲಿಅಂತವರಿಗೆ ಐಎಡಿ ಗರಿಷ್ಠ ಮಟ್ಟದ ಅತ್ಯುತ್ತಮ ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದೆ ಎಂದರು.

ವಿವಿಧ ಸರಕಾರಿ ವಲಯಗಳು ಆವಶ್ಯಪಟ್ಟರೆ ರಾಷ್ಟಾ್ರದ್ಯಂತ ಐಎಡಿಯ ಉಪ ಕೇಂದ್ರಗಳಲ್ಲಿತರಬೇತಿ ಆರಂಭಿಸಲು ಐಎಡಿ ಎಂದಿಗೂ ಮುಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂಗ್ಲೆಂಡ್‌ ಆಕ್ಸ್‌ಫರ್ಡ್‌ ಮಹಾ ವಿದ್ಯಾಲಯದ ಚರ್ಮರೋಗ ವಿಭಾಗದ ಮುಖ್ಯಸ್ಥ ಪ್ರೊ. ಟೆರೆನ್ಸ್‌ ಜೆ. ರೇಯಾನ್‌, ದಿಲ್ಲಿಯ ಬಿಲ್‌ ಆ್ಯಂಡ್‌ ಮಿಲಿಂಡಾ ಗೇಟ್ಸ್‌ ಫೌಂಡೇಶನ್‌ ಡಾ. ಭೂಪೇಂದ್ರ ತ್ರಿಪಾಠಿ ಶುಭಾಶಂಸೆ ಮಾಡಿದರು. ರಾಯಲ್‌ ಡರ್ಬೆ ಇಂಗ್ಲೆಂಡ್‌ನ ಪ್ರಾಧ್ಯಾಪಕಿ ಪ್ರೊ. ವಘೋನ್‌ ಕೀಲೆ, ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ಚರ್ಮರೋಗ ವಿಭಾಗದ ಮುಖ್ಯಸ್ಥೆ ಪ್ರೊ.ಗೈಲ್‌ ಟೋಡ್‌ ಶುಭಹಾರೈಸಿದರು.

ಐಎಡಿಯ ಆಯುರ್ವೇದ ವಿಭಾಗದ ಹಿರಿಯ ವೈದ್ಯ ಡಾ. ಗುರುಪ್ರಸಾದ್‌ ಅಗ್ಗಿತ್ತಾಯ ಮಧೂರು ಸ್ವಾಗತಿಸಿದರು. ಐಎಡಿಯ ಆಡಳಿತಾಧಿಕಾರಿ ಪ್ರಜ್ವಲ್‌ ಆರ್‌.ಕೆ. ವಂದಿಸಿದರು. ಡಾ. ಪ್ರಸನ್ನ ನರಹರಿ ಸಹಿತ ಐಎಡಿಯ ಎಲ್ಲವಿಭಾಗಗಳ ವೈದ್ಯರು, ಸಿಬ್ಬಂದಿ ಸಹಕರಿಸಿದರು.

ಗುರುವಾರ ಬೆಳಗ್ಗೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ಯುನಿರ್ವಸಿಟಿಯ ಚರ್ಮರೋಗ ವಿಭಾಗದ ಪ್ರೊ. ಗೈಲ್‌ ಟಾಡ್‌ ಅವರು ಆನೆ ಕಾಲು ರೋಗಿಗಳಲ್ಲಿಚರ್ಮ ಸಂರಕ್ಷಣೆಯ ತೊಡಕುಗಳ ಬಗ್ಗೆ ವಿಚಾರ ಮಂಡಿಸಿದರು.

ದಿಲ್ಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದದ ಡಾ. ಶಿಶಿರ್‌ ಕುಮಾರ್‌ ಮಂಡಲ್‌ ಅವರು ಚರ್ಮರೋಗ ಚಿಕಿತ್ಸೆಯಲ್ಲಿಮನಸ್ಸಿನ ಪಾತ್ರದ ಕುರಿತು ಪ್ರಬಂಧ ಮಂಡಿಸಿದರು. ಲಿಂಫೇಟಿಕ್‌ ಪೈಲೇರಿಯಾಸಿಸ್‌ ಹರಡುವಿಕೆಯನ್ನು ತಡೆಗಟ್ಟುವಲ್ಲಿಸಮುದಾಯಗಳ ಒಳಗೊಳ್ಳುವಿಕೆಯ ಕುರಿತು ವಿಷಯ ಪ್ರಸ್ತುತಪಡಿಸಿದರು.

ಬಿಲ್‌ ಆ್ಯಂಡ್‌ ಮಿಲಿಂಡಾ ಗೇಟ್ಸ್‌ ಫೌಂಡೇಶನ್‌ನ ಡಾ. ಭೂಪೇಂದ್ರ ತ್ರಿಪಾಠಿ, ಐಎಡಿ ಆಯುರ್ವೇದ ವಿಭಾಗದ ಹಿರಿಯ ವೈದ್ಯ ಡಾ. ಗುರುಪ್ರಸಾದ್‌ ಅಗ್ಗಿತ್ತಾಯ ವಿವಿಧ ವಿಷಯಗಳ ಬಗ್ಗೆ ಪ್ರಬಂಧ-ಸಂಶೋಧನಾ ಮುನ್ನೋಟಗಳ ಬಗ್ಗೆ ಬೆಳಕು ಚೆಲ್ಲಿದರು. ಪ್ರೊ. ಟೆರೆನ್ಸ್‌ ಜೆ. ರೆಯಾನ್‌, ಡಾ. ಚಂದ್ರಕಾಂತ್‌ ರೇವಂಕರ್‌, ಡಾ. ಎಸ್‌.ಆರ್‌. ನರಹರಿ ಮಾರ್ಗದರ್ಶನ ನೀಡಿದರು.

ಸಮುದಾಯಗಳನ್ನು ಜತೆ ಸೇರಿಸಿ ಆನೆಕಾಲು ರೋಗದ ಪ್ರಸರಣವನ್ನು ಹೇಗೆ ತಡೆಗಟ್ಟಬಹುದೆಂಬುದರ ಬಗ್ಗೆ ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನ ಡಾ. ಪಿ.ಎಸ್‌. ಬಾಲು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚೆ ನಡೆಸಿಕೊಟ್ಟರು. ಮೂರು ದಿನಗಳ ಕಾಲ ನಡೆದ ಈ ವಿಚಾರ ಸಂಕಿರಣದಲ್ಲಿಭಾಗವಹಿಸಿದ ಪ್ರತಿನಿಧಿಗಳಿಗೆ ಮತ್ತು ಅತಿಥಿಗಳಿಗೆ ಬಡಿಸಿದ ಪ್ರತಿಯೊಂದು ಆಹಾರ ತಿನಿಸುಗಳಲ್ಲಿಅಡಗಿದ್ದ ಕ್ಯಾಲೋರಿಯ ಬಗ್ಗೆ ಡಾ. ರೂಪಾ ಕಾಮತ್‌ ಮಾಹಿತಿ ನೀಡಿದ್ದು ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ