ಆ್ಯಪ್ನಗರ

ಸ್ಟ್ರಾಂಗ್‌ ರೂಂಗೆ ವಿವಿಪಾಟ್‌ ಸಹಿತ ಮತಯಂತ್ರಗಳ ರವಾನೆ

ಲೋಕಸಭೆ ಚುನಾವಣೆಗಾಗಿ ಬಳಸಿದ ವಿವಿಪಾಟ್‌ ಸಹಿತ ಮತಯಂತ್ರಗಳನ್ನು ಬುಧವಾರ ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜಿನ ಸ್ಟ್ರಾಂಗ್‌ ರೂಂಗೆ ತಲಪಿಸಲಾಗಿದೆ.

Vijaya Karnataka 25 Apr 2019, 5:00 am
ಕಾಸರಗೋಡು: ಲೋಕಸಭೆ ಚುನಾವಣೆಗಾಗಿ ಬಳಸಿದ ವಿವಿಪಾಟ್‌ ಸಹಿತ ಮತಯಂತ್ರಗಳನ್ನು ಬುಧವಾರ ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜಿನ ಸ್ಟ್ರಾಂಗ್‌ ರೂಂಗೆ ತಲಪಿಸಲಾಗಿದೆ.
Vijaya Karnataka Web evm safe in strong room
ಸ್ಟ್ರಾಂಗ್‌ ರೂಂಗೆ ವಿವಿಪಾಟ್‌ ಸಹಿತ ಮತಯಂತ್ರಗಳ ರವಾನೆ


ಮುಂಜಾನೆ 5 ಗಂಟೆ ವೇಳೆಗೆ ಈ ಸಾಮಗ್ರಿಗಳನ್ನು ತಲಪಿಸಲಾಗಿತ್ತು. 7 ವಿಧಾನಸಭೆ ಕ್ಷೇತ್ರಗಳ ಮತಯಂತ್ರಗಳನ್ನು ಸ್ಟ್ರಾಂಗ್‌ ರೂಂ ನಲ್ಲಿ ಇರಿಸಲಾಗಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಪಡನ್ನಕ್ಕಾಡ್‌ ನೆಹರೂ ಕಲಾ- ವಿಜ್ಞಾನ ಕಾಲೇಜುಗಳ ಸ್ವೀಕಾರ ಕೇಂದ್ರಗಳ ಮೂಲಕ ವೋಟಿಂಗ್‌ ಸಾಮಗ್ರಿಗಳನ್ನು ಸ್ಟ್ರಾಂಗ್‌ ರೂಂಗೆ ವರ್ಗಾಯಿಸಲಾಗಿದೆ.

ಕಾಸರಗೋಡು ಸರಕಾರಿ ಕಾಲೇಜಿನಿಂದ ಮತಗಟ್ಟೆ ಕರ್ತವ್ಯ ಸಿಬ್ಬಂದಿಯಿಂದ ಪಡೆಯಲಾದ ಸಾಮಗ್ರಿಗಳನ್ನು ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಪಡನ್ನಕ್ಕಾಡಿಗೆ ತರಲಾಗಿತ್ತು. ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು , ಜಿಲ್ಲಾ ನಿರೀಕ್ಷ ಕ ಎಸ್‌.ಗಣೇಶ್‌, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್‌, 7 ವಿಧಾನಸಭೆಗಳ ಉಪಚುನಾವಣೆ ಅಧಿಕಾರಿಗಳಾದ ಉಪಜಿಲ್ಲಾಧಿಕಾರಿ ಅರುಣ್‌ ಕೆ.ವಿಜಯನ್‌, ಎಲ್‌.ಆರ್‌.ಸಹಾಯಕ ಜಿಲ್ಲಾಧಿಕಾರಿ ಎಸ್‌.ಎಲ್‌.ಸಜಿ ಕುಮಾರ್‌, ಎಲ್‌.ಆರ್‌. ಸಹಾಯಕ ಜಿಲ್ಲಾಧಿಕಾರಿ ಪಿ.ಆರ್‌.ರಾಧಿಕಾ, ಕಣ್ಣೂರು ಎಲ್‌.ಆರ್‌. ಸಹಾಯಕ ಜಿಲ್ಲಾಧಿಕಾರಿ ರಶೀದ್‌ ಮುದುಕಂಡಿ, ಎಲ್ಲ ಅಭ್ಯರ್ಥಿಗಳ ಪ್ರತಿನಿಧಿಗಳು ಮೊದಲಾದವರ ಸಮಕ್ಷ ದಲ್ಲಿ ಮತಯಂತ್ರಗಳನ್ನು ಸೀಲ್‌ ನಡೆಸಿ ಸ್ಟ್ರಾಂಗ್‌ ರೂಂ ನಲ್ಲಿ ಇರಿಸಲಾಗಿದೆ.

ತ್ರಿಸ್ತರ ಸುರಕ್ಷೆ ವ್ಯವಸ್ಥೆಯಲ್ಲಿ ಸ್ಟ್ರಾಂಗ್‌ ರೂಂ ಸಿದ್ಧಪಡಿಸಲಾಗಿದೆ. ಕೇಂದ್ರ ಸೇನೆ, ರಾಜ್ಯ ಪೊಲೀಸ್‌, ಕಾರ್ಯಕಾರಿ ನ್ಯಾಯಮೂರ್ತಿ ಸೇರಿದಂತೆ ತ್ರಿಸ್ತರ ಸುರಕ್ಷೆ ವ್ಯವಸ್ಥೆಯಿದೆ. ಮತಗಣನೆಯ ದಿನವಾದ ಮೇ 23ರಂದು ಮಾತ್ರ ಸ್ಟ್ರಾಂಗ್‌ ರೂಂ ತೆರೆಯಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ