ಆ್ಯಪ್ನಗರ

ಬಾಯಾರ್‌ಪದವಿನಲ್ಲಿಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣೆ

ಐಶು ಇಂಡೆನ್‌ ಗ್ರಾಮೀಣ ವಿತರಕ್‌ ಬಾಯಾರ್‌ಪದವು ಆಶ್ರಯದಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಗ್ಯಾಸ್‌ಸಿಲಿಂಡರ್‌ ವಿತರಣೆ ಮತ್ತು ಎಲ್‌ಪಿಜಿ ಸೇಫ್ಟಿ ಕ್ಲಿನಿಕ್‌ ಶನಿವಾರ ಬಾಯಾರುಪದವಿನಲ್ಲಿನಡೆಯಿತು.

Vijaya Karnataka 2 Sep 2019, 5:00 am
ಉಪ್ಪಳ: ಐಶು ಇಂಡೆನ್‌ ಗ್ರಾಮೀಣ ವಿತರಕ್‌ ಬಾಯಾರ್‌ಪದವು ಆಶ್ರಯದಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಗ್ಯಾಸ್‌ಸಿಲಿಂಡರ್‌ ವಿತರಣೆ ಮತ್ತು ಎಲ್‌ಪಿಜಿ ಸೇಫ್ಟಿ ಕ್ಲಿನಿಕ್‌ ಶನಿವಾರ ಬಾಯಾರುಪದವಿನಲ್ಲಿನಡೆಯಿತು.
Vijaya Karnataka Web free lpg cylinder distribution
ಬಾಯಾರ್‌ಪದವಿನಲ್ಲಿಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣೆ


ಸುಮಾರು 45ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಗ್ಯಾಸ್‌ಸ್ಟವ್‌ ಮತ್ತು ಸಿಲಿಂಡರ್‌ ಉಚಿತವಾಗಿ ವಿತರಿಸಲಾಯಿತು. ಅಗ್ನಿಶಾಮಕದ ಉನ್ನತ ಅಧಿಕಾರಿಗಳು ಬಂದು ಎಲ್‌ಪಿಜಿ ಯ ಸುರಕ್ಷಾ ಉಪಯೋಗದ ಬಗ್ಗೆ ಮಾಹಿತಿ ನೀಡಿ, ತುರ್ತುಪರಿಸ್ಥಿತಿಯಲ್ಲಿಸುರಕ್ಷಾ ಕ್ರಮದ ಪ್ರಾತ್ಯಕ್ಷಿಕೆ ನೀಡಿದರು.

ವಾರ್ಡ್‌ ಪ್ರತಿನಿಧಿ ಕಿಶೋರ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಸಜಂಕಿಲ ವಾರ್ಡ್‌ ಪ್ರತಿನಿಧಿ ಸುಬ್ರಹ್ಮಣ್ಯ ಭಟ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಉಜ್ವಲ ಯೋಜನೆಯನ್ನು ಪ್ರತಿ ಮನೆಮನೆಗೆ ತಲುಪಿಸುವ ಕಾರ್ಯವನ್ನು ಐಶು ಇಂಡೇನ್‌ ಗ್ರಾಮೀಣ ವಿತ್ರಕ್‌ ಮಾಡುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು.

ಪ್ರಶಾಂತ್‌ ಸ್ವಾಗತಿಸಿದರು. ಯೋಗೀಶ್‌ ವಂದಿಸಿದರು. ಸದಾನಂದ ಚಿಪ್ಪಾರ್‌ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ