ಆ್ಯಪ್ನಗರ

ಮೋದಿ ಅಭಿಮಾನಿ ಹೋಟೆಲ್‌ ಮಾಲಕನಿಂದ ಉಚಿತ ಊಟ, ಉಪಾಹಾರ

ನರೇಂದ್ರ ಮೋದಿ ಪ್ರಧಾನಿಯಾಗಿ 2ನೇ ಬಾರಿ ಅಧಿಕಾರಕ್ಕೇರುತ್ತಿರುವ ಸಂತಸವನ್ನು ತನ್ನ ಗ್ರಾಹಕರೊಂದಿಗೆ ಹಂಚಿಕೊಂಡ ಹೋಟೆಲ್‌ ಮಾಲಕ ದಿನವಿಡೀ ಉಚಿತವಾಗಿ ತಿಂಡಿ, ಊಟ, ಚಹ, ಪಾನೀಯ ವಿತರಿಸಿ ಗಮನಸೆಳೆದರು.

Vijaya Karnataka Web 31 May 2019, 5:00 am
ಬದಿಯಡ್ಕ : ನರೇಂದ್ರ ಮೋದಿ ಪ್ರಧಾನಿಯಾಗಿ 2ನೇ ಬಾರಿ ಅಧಿಕಾರಕ್ಕೇರುತ್ತಿರುವ ಸಂತಸವನ್ನು ತನ್ನ ಗ್ರಾಹಕರೊಂದಿಗೆ ಹಂಚಿಕೊಂಡ ಹೋಟೆಲ್‌ ಮಾಲಕ ದಿನವಿಡೀ ಉಚಿತವಾಗಿ ತಿಂಡಿ, ಊಟ, ಚಹ, ಪಾನೀಯ ವಿತರಿಸಿ ಗಮನಸೆಳೆದರು.
Vijaya Karnataka Web free meals snacks at badiyadka hotel
ಮೋದಿ ಅಭಿಮಾನಿ ಹೋಟೆಲ್‌ ಮಾಲಕನಿಂದ ಉಚಿತ ಊಟ, ಉಪಾಹಾರ


ಎಡನೀರಿನಲ್ಲಿ ಕಳೆದ ಅನೇಕ ವರ್ಷಗಳಿಂದ ಹೋಟೆಲ್‌ ಉದ್ಯಮ ನಡೆಸುತ್ತಿರುವ ಕೂವೆತ್ತೋಟ ಜಯರಾಮ ಭಟ್‌ ಈ ರೀತಿ ಮೋದಿಯವರಿಗೆ ಅಭಿಮಾನ ತೋರಿಸಿದವರು. ಗುರುವಾರ ಪ್ರಾತಃಕಾಲ ಗಣಪತಿ ಹೋಮ ನಡೆಸಿ ಮೋದಿಯವರ ಮೂಲಕ ದೇಶಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು. ನಂತರ ಎಲ್ಲರಿಗೂ ಉಚಿತವಾಗಿ ಫಲಾಹಾರ, ಊಟ ವಿತರಿಸಲಾಯಿತು.

ಬದಿಯಡ್ಕ ಸಮೀಪದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಸಮೀಪ 'ಪದ್ಮಗಿರಿ' ನಿವಾಸದಲ್ಲಿ ವಾಸಿಸುತ್ತಿರುವ ಇವರು ಮೋದಿಯವರ ಬಗ್ಗೆ ಅಪ್ಪಟ ಅಭಿಮಾನಿ. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌, ರವೀಶ ತಂತ್ರಿ ಕುಂಟಾರು, ಮಾಧವ ಹೇರಳ, ಹರೀಶ ನಾರಂಪಾಡಿ, ಸ್ಥಳೀಯರು ಬೆಳಗಿನ ಜಾವ ಉಪಸ್ಥಿತರಿದ್ದರು.

ನರೇಂದ್ರಮೋದಿಯವರೇ ಮತ್ತೊಮ್ಮೆ ನಮ್ಮ ದೇಶದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಮನಸ್ಸಿನ ಸಂಕಲ್ಪವು ಈಡೇರಿದಾಗ ಆದ ಸಂತಸವನ್ನು ಗ್ರಾಹಕರೊಂದಿಗೆ ಹಂಚಿಕೊಂಡಿರುವುದು ಮನಸ್ಸಿಗೆ ಆನಂದವನ್ನು ತಂದಿದೆ. ದೇಶವು ಭದ್ರವಾದ ಕೈಗಳಲ್ಲಿ ಸುಭದ್ರವಾಗಿರುವುದಕ್ಕಿಂತ ಹೆಚ್ಚು ನಮಗೇನೂ ಬೇಡ.ಮೋದಿಯವರು ಎಲ್ಲರನ್ನೂ ಒಂದುಗೂಡಿಸಿ ದೇಶವನ್ನು ಮುನ್ನಡೆಸುತ್ತಿರುವುದು ಸಂತಸದ ವಿಚಾರವಾಗಿದೆ. ಅವರಿಗೆ ದೇವರು ಒಳಿತನ್ನು ಮಾಡಲಿ.
- ಜಯರಾಮ ಭಟ್‌ ಕೂವೆತ್ತೋಟ, ಎಡನೀರು. ಹೋಟೆಲ್‌ ಮಾಲಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ