ಆ್ಯಪ್ನಗರ

ಗೈಲ್‌ ಪೈಪ್‌ಲೈನ್‌: ನಷ್ಟ ಪರಿಹಾರಕ್ಕಾಗಿ ಪರದಾಟ

ಕಾಸರಗೋಡು: ಮಂಗಳೂರಿನಿಂದ ಕೊಚ್ಚಿಗೆ ನೈಸರ್ಗಿಕ ಅನಿಲ ಸಾಗಿಸುವುದಕ್ಕಾಗಿ ಸ್ಥಾಪಿಸುವ ಗೈಲ್‌ ಪೈಪ್‌ಲೈನ್‌ಗೆ ಸಂಬಂಧಿಸಿ ನಷ್ಟ ಪರಿಹಾರ ಲಭಿಸಿಲ್ಲ. ಹೀಗಾಗಿ, ಜಮೀನು ಮಾಲೀಕರು, ಕಟ್ಟಡಗಳ ಮಾಲೀಕರು ಕಷ್ಟಕ್ಕೆ ಸಿಲುಕಿದ್ದಾರೆ.

Vijaya Karnataka 27 Dec 2018, 5:00 am
ಕಾಸರಗೋಡು: ಮಂಗಳೂರಿನಿಂದ ಕೊಚ್ಚಿಗೆ ನೈಸರ್ಗಿಕ ಅನಿಲ ಸಾಗಿಸುವುದಕ್ಕಾಗಿ ಸ್ಥಾಪಿಸುವ ಗೈಲ್‌ ಪೈಪ್‌ಲೈನ್‌ಗೆ ಸಂಬಂಧಿಸಿ ನಷ್ಟ ಪರಿಹಾರ ಲಭಿಸಿಲ್ಲ. ಹೀಗಾಗಿ, ಜಮೀನು ಮಾಲೀಕರು, ಕಟ್ಟಡಗಳ ಮಾಲೀಕರು ಕಷ್ಟಕ್ಕೆ ಸಿಲುಕಿದ್ದಾರೆ.
Vijaya Karnataka Web gail pipeline a fight for loss relief
ಗೈಲ್‌ ಪೈಪ್‌ಲೈನ್‌: ನಷ್ಟ ಪರಿಹಾರಕ್ಕಾಗಿ ಪರದಾಟ


ಜನವಾಸ ಕೇಂದ್ರಗಳು, ಕೃಷಿ ಸ್ಥಳಗಳನ್ನು ಹೊರತುಪಡಿಸಿ ಪೈಪ್‌ಲೈನ್‌ ಸ್ಥಾಪಿಸಬೇಕು ಎಂಬ ನಿಯಮವನ್ನು ಗಾಳಿಗೆ ತೂರಿ ಪೈಪ್‌ಲೈನ್‌ ಸ್ಥಾಪಿಸಲಾಗಿದೆ ಎಂಬ ಆರೋಪವಿದೆ. ಆದ್ದರಿಂದ, ಜಮೀನು-ಕಟ್ಟಡ ಕಳೆದುಕೊಂಡವರು ಈಗ ಪರಿಹಾರ ಪಡೆಯಲು ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಪುಲ್ಲೂರು-ಪೆರಿಯ, ಚೆಮ್ನಾಡ್‌, ಮುಳಿಯಾರು ಪಂಚಾಯಿತಿ ವ್ಯಾಪ್ತಿಗಳಲ್ಲಿ ಜನವಾಸ ಕೇಂದ್ರಗಳಲ್ಲಿ ಹೆಚ್ಚಾಗಿ ಪೈಪ್‌ಲೈನ್‌ ಸ್ಥಾಪಿಸಲಾಗಿದೆ. ಪುಲ್ಲೂರು-ಪೆರಿಯ ಪಂಚಾಯಿತಿಯ ಒಂದನೇ ವಾರ್ಡ್‌ನಲ್ಲಿ 100ಕ್ಕೂ ಹೆಚ್ಚು ಮನೆಗಳಿರುವೆಡೆ ಪೈಪ್‌ಲೈನ್‌ ಸ್ಥಾಪಿಸಿದ್ದರೂ ಕಟ್ಟಡ ಮಾಲೀಕರಿಗೆ ಸಂಪೂರ್ಣವಾಗಿ ನಷ್ಟ ಪರಿಹಾರ ನೀಡಿಲ್ಲ. ಪೈಪ್‌ಲೈನ್‌ ಮಾರ್ಗದಲ್ಲಿ ಇದ್ದ ಬೃಹತ್‌ ಕಗ್ಗಲ್ಲು ಬಂಡೆಗಳನ್ನು ಒಡೆಯಲು ನಿಷೇದಿತ ಸ್ಫೋಟಕ ವಸ್ತುಗಳನ್ನು ಉಪಯೋಗಿಸಿದ ಕಾರಣ 50ರಷ್ಟು ಮನೆಗಳು ಹಾನಿಗೀಡಾಗಿವೆ. ಆದರೆ, ಕೆಲವರಿಗೆ ಮಾತ್ರ ನಷ್ಟ ಪರಿಹಾರ ಲಭಿಸಿದೆ.

ಕುಣಿಯ ಸರಕಾರಿ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲಾ ಮೈದಾನ, ಚಟ್ಟಂಚಾಲ್‌ ಮಿನಿ ಇಂಡಸ್ಟ್ರಿಯಲ್‌ ಏರಿಯಾದ ಕೆಲ ಸಂಸ್ಥೆಗಳಿಗೆ ನಷ್ಟ ಪರಿಹಾರದ ಭರವಸೆ ಮಾತ್ರ ದೊರೆತಿದೆ. ಆದರೆ. ೕವರೆಗೂ ಪರಿಹಾರ ನೀಡಿಲ್ಲ. ಸಂಪಾದನೆಗಾಗಿ ಸ್ವಯಂ ಉದ್ಯೋಗ ನಡೆಸುತ್ತಿದ್ದವರ ಸಂಸ್ಥೆಗಳು ಪೈಪ್‌ಲೈನ್‌ ಸ್ಥಾಪಿಸುವ ಹೆಸರಿನಲ್ಲಿ ನಷ್ಟಗೊಂಡಿವೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಸಂಸ್ಥೆಗಳು ನಷ್ಟವಾಗುತ್ತಿರುವಾಗ ಅದರ ಬಂಡವಾಳವನ್ನು ಮಾಲೀಕರಿಗೆ ನೀಡಲು ತಯಾರಾಗದೇ ಗುತ್ತಿಗೆದಾರರು ಜಾಗ ಖಾಲಿ ಮಾಡಿದ್ದಾರೆ. ಪುಲ್ಲೂರು-ಪೆರಿಯದ ಕೃಷಿಭೂಮಿಯಲ್ಲಿ ಪೈಪ್‌ಲೈನ್‌ ಹಾದು ಹೋಗಿತ್ತು. ಇವರಿಗೆ ನಷ್ಟ ಪರಿಹಾರ ಮೊತ್ತ ನೀಡಿಲ್ಲ.

ಈ ಮಧೆ,್ಯ ಈ ಹಿಂದೆ ಇದ್ದ ಮಾಜಿ ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ಸಾರ್ವಜನಿಕರ ಇಂತಹ ದೂರುಗಳಿಗೆ ಪ್ರಾಧಾನ್ಯತೆ ನೀಡಿದ್ದರು ಎಂದು ಜನರು ಹೇಳುತ್ತಿದ್ದಾರೆ. ಆದರೆ ಅವರು ವರ್ಗಾವಣೆಗೊಂಡು ತೆರಳಿದ್ದರಿಂದ ಗೈಲ್‌ ಪೈಪ್‌ಲೈನ್‌ಗೆ ಸಂಬಂಧಿಸಿದ ದೂರುಗಳಿಗೆ ಪ್ರಾಧಾನ್ಯತೆ ಕಲ್ಪಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಜಿಲ್ಲೆಯ ನಾನಾ ಪಂಚಾಯಿತಿಗಳ ಹಲವಾರು ಜನ ಗುತ್ತಿಗೆದಾರರ ಮೋಹಕ ಭರವಸೆಗಳನ್ನು ನಂಬಿ ಪೈಪ್‌ಲೈನ್‌ಗೆ ತಮ್ಮ ಜಮೀನು ಹಾಗೂ ಕಟ್ಟಡಗಳನ್ನು ತೆರವುಗೊಳಿಸಲು ಸಮ್ಮತಿಸಿದ್ದರು.

ಮೊದಲು ನಡೆಸಿದ ಸಮೀಕ್ಷೆ ಮಾರ್ಗ ಬದಲಿಸಿ ಕೋಟ್ಯಂತರ ಲಾಭ ಗಿಟ್ಟಿಸುವುದಕ್ಕಾಗಿ ಜನವಾಸ ಕೇಂದ್ರಗಳಲ್ಲಿ ಗುತ್ತಿಗೆದಾರರು ಪೈಪ್‌ಲೈನ್‌ ಸ್ಥಾಪಿಸಿದ್ದಾರೆ. ತಮ್ಮ ಹಿತ್ತಿಲಿನಲ್ಲಿ ಬೃಹತ್‌ ಯಂತ್ರಗಳು ನುಗ್ಗಿ ಬರುವಾಗಲೇ ಈ ಮಾರ್ಗವಾಗಿ ಪೈಪ್‌ಲೈನ್‌ ಹಾದುಹೋಗುವ ಮಾಹಿತಿ ಲಭಿಸಿತ್ತು. ಈ ಬಗ್ಗೆ ನೋಟಿಸ್‌ ನೀಡಿರಲಿಲ್ಲ. ಸ್ಥಳದ ಮಾಲೀಕರಿಗೆ ಅಡುಗೆ ಅನಿಲ ಸಂಪರ್ಕ ಉಚಿತವಾಗಿ ನೀಡುವುದಾಗಿಯೂ, ಅಗತ್ಯ ನಷ್ಟ ಪರಿಹಾರ ನೀಡುವುದಾಗಿಯೂ ಭರವಸೆ ನೀಡಿ ಒಪ್ಪಿಗೆ ಪತ್ರದಲ್ಲಿ ಸಹಿ ಹಾಕಿಕೊಳ್ಳಲಾಗಿತ್ತು. (26ಕೆಎಸ್‌ಎಲ್‌ಪೈಪ್‌ಲೈನ್‌) ಮುಳಿಯಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದುಹೋಗುವ ಪೈಪ್‌ಲೈನ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ