ಆ್ಯಪ್ನಗರ

ಜ್ಯೋತಿ ರವಿರಾಜ್‌ಗೆ ಕೊಡಗಿನ ಗೌರಮ್ಮ ಪ್ರಶಸ್ತಿ

ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲದ ಆಶ್ರಯದಲ್ಲಿ ಪ್ರತಿ ವರ್ಷ ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ ನಡೆಸುತ್ತಿರುವ ಸಣ್ಣಕಥಾ ಸ್ಪರ್ಧೆಯ ಈ ಬಾರಿಯ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಥಮ ಬಹುಮಾನ ಜ್ಯೋತಿ ರವಿರಾಜ್‌ ವಿಟ್ಲ ಅವರ 'ಆರುಹೊಣೆ'ಎಂಬ ಕತೆಗೆ ಲಭಿಸಿದೆ.

Vijaya Karnataka 14 Aug 2019, 5:00 am
ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲದ ಆಶ್ರಯದಲ್ಲಿ ಪ್ರತಿ ವರ್ಷ ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ ನಡೆಸುತ್ತಿರುವ ಸಣ್ಣಕಥಾ ಸ್ಪರ್ಧೆಯ ಈ ಬಾರಿಯ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಥಮ ಬಹುಮಾನ ಜ್ಯೋತಿ ರವಿರಾಜ್‌ ವಿಟ್ಲ ಅವರ 'ಆರುಹೊಣೆ'ಎಂಬ ಕತೆಗೆ ಲಭಿಸಿದೆ.
Vijaya Karnataka Web gauramma award jyoti raviraj
ಜ್ಯೋತಿ ರವಿರಾಜ್‌ಗೆ ಕೊಡಗಿನ ಗೌರಮ್ಮ ಪ್ರಶಸ್ತಿ


ಸರ್ವಮಂಗಳ ಎಂಬ ಹೆಸರಿನ ಇವರು ರವಿರಾಜ ಭಟ್‌ ಅವರ ಪತ್ನಿಯಾಗಿದ್ದು, ಜ್ಯೋತಿ ರವಿರಾಜ್‌ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿಯನ್ನು ಮಾಡುತ್ತಿದ್ದಾರೆ. ಪ್ರಸ್ತುತ ಪುತ್ತೂರು ಅಂಬಿಕಾ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ಯಾಗಿ ದುಡಿಯುತ್ತಿದ್ದಾರೆ. ಮಂಗಳೂರು ಆಕಾಶವಾಣಿಯ ಯುವ ಜನಪದೀಯ ಗುಂಪು ಗಾಯನ ಸ್ಪರ್ಧೆಯಲ್ಲಿ ಬಿ ಗ್ರೇಡ್‌ ಕಲಾವಿದೆಯೂ ಹೌದು. ಎರಡನೇ ಬಹುಮಾನ ರತ್ನ ಕುಮಾರಿ ಕಾಕುಂಜೆ ಅವರ 'ಸಿರಿ' ಎಂಬ ಕಥೆಗೆ ದೊರಕಿದೆ. ಮೂರನೇ ಬಹುಮಾನ ಶಿರಸಿಯ ಭವ್ಯ ಹಳೆಯೂರು ಅವರ 'ಬಯಲು ಸೀಮೆಯ ಸುಂದ್ರಿ' ಪಡೆದುಕೊಂಡಿದೆ. ಇವರ 'ಮತ್ತೆ ನೆನಪಾಗುತ್ತಾಳೆ ರಾಧೆ' ಎಂಬ ಕವನ ಸಂಕಲನ ಈಗಾಗಲೇ ಪ್ರಕಟಗೊಂಡಿದೆ.

ಸ್ಪರ್ಧಾ ತೀರ್ಪುಗಾರರಾಗಿ ಶಿಕ್ಷಣ ತಜ್ಞ, ಸಾಹಿತಿ ವಿ.ಬಿ. ಕುಳಮರ್ವ, ನಿವೃತ್ತ ಪ್ರೊಫೆಸರ್‌ ಡಾ. ಹರಿಕೃಷ್ಣ ಭರಣ್ಯ ಹಾಗೂ ನಾರಾಯಣ ಹೆಗಡೆ ಹೊನ್ನಾವರ ಭಾಗವಹಿಸಿದ್ದರು. ಪ್ರಶಸ್ತಿ ವಿತರಣೆ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರಿಂದ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ