ಆ್ಯಪ್ನಗರ

ಹಸಿರು ಉದ್ಯಾನ ಕಾರ್ಯಕ್ರಮ ಉದ್ಘಾಟನೆ

ಹಸಿರು ಮಿಷನ್‌ ಆಶ್ರಯದಲ್ಲಿ ಸಿದ್ಧಪಡಿಸುವ ಹಸಿರು ಉದ್ಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾಞಿರಪಳ್ಳಿ ಜಿಎಚ್‌ಎಸ್‌ನಲ್ಲಿ ಬುಧವಾರ ರಾಜ್ಯ ಕಂದಾಯ ಮತ್ತು ಭವನ ನಿರ್ಮಾಣ ಖಾತೆ ಸಚಿವ ಇ. ಚಂದ್ರಶೇಖರನ್‌ ಉದ್ಘಾಟಿಸಿದರು.

Vijaya Karnataka 6 Jun 2019, 5:00 am
ಕಾಸರಗೋಡು: ಹಸಿರು ಮಿಷನ್‌ ಆಶ್ರಯದಲ್ಲಿ ಸಿದ್ಧಪಡಿಸುವ ಹಸಿರು ಉದ್ಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾಞಿರಪಳ್ಳಿ ಜಿಎಚ್‌ಎಸ್‌ನಲ್ಲಿ ಬುಧವಾರ ರಾಜ್ಯ ಕಂದಾಯ ಮತ್ತು ಭವನ ನಿರ್ಮಾಣ ಖಾತೆ ಸಚಿವ ಇ. ಚಂದ್ರಶೇಖರನ್‌ ಉದ್ಘಾಟಿಸಿದರು.
Vijaya Karnataka Web green garden programme inaguration
ಹಸಿರು ಉದ್ಯಾನ ಕಾರ್ಯಕ್ರಮ ಉದ್ಘಾಟನೆ


ಮಡಿಕೈ ಗ್ರಾಪಂ, ಜಿಲ್ಲಾ ಸಾಮಾಜಿಕ ಅರಣ್ಯೀಕರಣ ವಿಭಾಗ, ಹಸಿರು ಕೇರಳ ಮಿಷನ್‌, ಜೀವ ವೈವಿಧ್ಯ ಮಂಡಳಿ, ಎಂಜಿಎನ್‌ಆರ್‌ಇಜಿ, ಕುಟುಂಬಶ್ರೀ ಮೊದಲಾದುವುಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಬರಿದಾಗುತ್ತಿರುವ ಗ್ರಾಮೀಣ ಸ್ವರೂಪವನ್ನು ಪುನಃ ಸ್ಥಾಪಿಸಲು ಮತ್ತು ನಗರ ಪ್ರದೇಶಗಳಲ್ಲಿ ಲಭ್ಯವಾಗುವ ಪ್ರದೇಶದಲ್ಲಿ ಹಸಿರೀಕರಣದ ಜೀವ ವೈವಿಧ್ಯತೆಯನ್ನು ಪುನಃ ಸ್ಥಾಪಿಸುವುದೇ ಇದರ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 20 ಪಂಚಾಯಿತಿಗಳಲ್ಲಿ ಆಯ್ಕೆ ಮಾಡಿದ 55 ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಸೂಕ್ತ ಸ್ಥಳಗಳನ್ನು ಪತ್ತೆ ಹಚ್ಚಿ ಉದ್ಯಾನ ಸೃಷ್ಟಿಸುವುದು. ಅರಣ್ಯ ಮಾದರಿಯಲ್ಲಿ ಸಸಿ ನೆಟ್ಟು ರಕ್ಷಿಸುವುದು. ಈ ರೀತಿಯಲ್ಲಿ ಅರಣ್ಯವನ್ನು ಸೃಷ್ಟಿಸುವ ಮೂಲಕ ವಾತಾವರಣದ ತಾಪವನ್ನು ನಿಯಂತ್ರಿಸುವುದರೊಂದಿಗೆ ಪಕ್ಷಿಗಳ ಸಹಿತ ಆವಾಸ ಸ್ಥಾನವನ್ನು ಒದಗಿಸಿದಂತಾಗುವುದು. ಜೀವ ವೈವಿಧ್ಯ ಉದ್ಯಾನಗಳು, ಕಾವುಗಳ ಸಂರಕ್ಷ ಣೆ, ಪುನರ್‌ಜೀವ, ಜಲಸಂರಕ್ಷ ಣೆ ಮೊದಲಾದುವುಗಳು ಯೋಜನೆಯ ಪ್ರಧಾನ ಅಂಶಗಳಾಗಿವೆ.

ಕಾರ್ಯಕ್ರಮದಲ್ಲಿ ಕಾಞಂಗಾಡು ಬ್ಲಾಕ್‌ ಪಂಚಾಯತಿ ಅಧ್ಯಕ್ಷ ಎಂ. ಗೌರಿ ಅಧ್ಯಕ್ಷ ತೆ ವಹಿಸಿದ್ದÜರು. ಈ ಸಂದರ್ಭದಲ್ಲಿ ನಡೆದ ಹಲಸು ಫೆಸ್ಟ್‌ ಉದ್ಘಾಟನೆಯನ್ನು ಮಾಜಿ ಸಂಸದ ಪಿ. ಕರುಣಾಕರನ್‌ ನಿರ್ವಹಿಸಿದರು. ನಕ್ಷ ತ್ರ ಅರಣ್ಯೀಕರಣ, ಸಾರ್ವಜನಿಕ ಬನ ಸಂರಕ್ಷ ಣೆಯ ಉದ್ಘಾಟನೆಯನ್ನು ಎಂ. ಗೌರಿ, ಔಷಧ ಸಸ್ಯ ತೋಟವನ್ನು, ಫೋಟೋ ಸಿನಿಮಾ ಪ್ರದರ್ಶನವನ್ನು ಮಡಿಕೈ ಗಾಪಂ ಅಧ್ಯಕ್ಷ ಸಿ. ಪ್ರಭಾಕರನ್‌ ನಿರ್ವಹಿಸಿದರು.

ಕೆ. ಪ್ರಮೀಳಾ, ಎಂ.ಕುಂಞಂಬು, ಶಶೀಂಧ್ರನ್‌ ಮಡಿಕೈ, ಎಂ.ಅಬ್ದುಲ್‌ ರಹಮಾನ್‌, ಸಿ. ಇಂದಿರಾ, ಓಮನಾ, ಪಿ.ಕೆ. ಅನೂಪ್‌, ವಿ.ಕೆ. ದಿಲೀಪ್‌, ಎಂ.ಪಿ. ಸುಬ್ರಹ್ಮಣ್ಯನ್‌, ಟಿ.ಟಿ. ಸುರೇಂದ್ರನ್‌, ಪಿ. ಕೃಷ್ಣನ್‌, ಪಿ. ಪ್ರಸೀತಾ, ಬೇಬಿ ಬಾಲಕೃಷ್ಣನ್‌, ಎಂ. ರಾಜನ್‌ ಮತ್ತಿರರು ಭಾಗವಹಿಸಿದ್ದರು. ಕಾಸರಗೋಡು ಫಾರೆಸ್ಟ್‌ ಸಹಾಯಕ ಅಧಿಕಾರಿ ಪಿ. ಬಿಜು ಸ್ವಾಗತಿಸಿ, ಸಂಘಟಕಾ ಸಮಿತಿ ಸಂಚಾಲಕ ಸನಲ್‌ಷಾ ಮಾಸ್ಟರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ