ಕೆ.ಗಂಗಾಧರ್ ಯಾದವ್ ಕಾಸರಗೋಡು
ತರಕಾರಿ ಸಸಿ ಹಾಗೂ ಮರಗಳನ್ನು ಬೆಳೆಸುವುದಕ್ಕಾಗಿ ಬೀಜ ಹಾಕಲು ಇನ್ನು ಪ್ಲಾಸ್ಟಿಕ್ ಚೀಲಗಳನ್ನು ಆಶ್ರಯಿಸಬೇಕಿಲ್ಲ . ಪರಿಸರಸ್ನೇಹಿ ಅಡಕೆ ಹಾಳೆಗಳ ಗ್ರೋ ಬ್ಯಾಗ್ ಪರಿಕಲ್ಪನೆಯನ್ನು ಚೆರ್ವತ್ತೂರಿನ ಮಹಿಳೆಯೊಬ್ಬರು ಪರಿಚಯಿಸಿದ್ದಾರೆ.
ಚೆರ್ವತ್ತೂರು ಕೊಡಕಾಡು ನಿವಾಸಿ ಎಂ.ಪದ್ಮಾವತಿ ಈ ಸಾಧಕಿ. ಹೆಚ್ಚಿನ ಕಡೆ ವ್ಯರ್ಥ ಮಾಡುವ ಅಡಕೆ ಹಾಳೆ ಹಾಗೂ ಸೆಗಣಿಯನ್ನು ಉಪಯೋಗಿಸಿಕೊಂಡು ಸಸಿಗಳನ್ನು ನೆಡುವುದಕ್ಕಾಗಿ ಗ್ರೋಬ್ಯಾಗ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತರಕಾರಿ ಸಸಿಗಳ ಬೀಜ ಹಾಕಲು ವ್ಯಾಪಕವಾಗಿ ಪ್ಲಾಸ್ಟಿಕ್ ಚೀಲಗಳನ್ನೇ ಬಳಸುವುದರಿಂದ ಭೂಮಿಯು ಕಲುಷಿತವಾಗುತ್ತದೆ ಎಂಬ ಆತಂಕಕ್ಕೆ ಪರ್ಯಾಯ ಮಾರ್ಗದ ಕುರಿತು ಎಂ. ಪದ್ಮಾವತಿ ಆಲೋಚಿಸಿದಾಗ, ಮಣ್ಣಿನೊಂದಿಗೆ ಕೊಳೆಯುವಂತಹ ಚೀಲಗಳನ್ನು ನಿರ್ಮಿಸುವುದಕ್ಕಾಗಿ ಪ್ರಯತ್ನಿಸಿದರು. ಅದರಂತೆ ಕೇವಲ ಮಣ್ಣಿನಿಂದಲೇ ತಯಾರಿಸಿದ ಸಸಿ ಮಾಡುವ ಗೂಡು, ತೆಂಗಿನ ನಾರು, ಹುಲ್ಲು, ಬಾಳೆಯ ದಿಂಡು ಮುಂತಾದವುಗಳನ್ನು ಉಪಯೋಗಿಸಿ ತಯಾರಿಸಿದರೂ ಅದು ವಿಫಲವಾಗಿತ್ತು. ಬಳಿಕವೇ ಅಡಕೆ ಹಾಳೆ ಉಪಯೋಗಿಸಿ ಗ್ರೋಬ್ಯಾಗ್ ಎಂಬ ಕಲ್ಪನೆಯಲ್ಲಿ ಯಶಸ್ವಿಯಾಗಿದ್ದಾರೆ. ಇದರಂತೆ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ವಾಣಿಜ್ಯ ಆಧಾರದಲ್ಲಿ ಗ್ರೋಬ್ಯಾಗ್ ನಿರ್ಮಿಸಲು ಆರಂಭಿಸಿದ್ದಾರೆ.
ಗ್ರೋ ಬ್ಯಾಗ್ ಸಿದ್ಧಪಡಿಸುವುದು ಹೇಗೆ ?
ಆರಂಭದಲ್ಲಿ ಹಾಳೆಯನ್ನು ಉಪಯೋಗಿಸಿ ಗೂಡುಗಳನ್ನು ನಿರ್ಮಿಸಬೇಕು. ಬಳಿಕ ಸೆಗಣಿ, ಹುಲ್ಲಿನ ಹುಡಿ, ಜೈವಿಕ ಗೊಬ್ಬರಗಳ ಮಿಶ್ರಿತದಿಂದ ಗೂಡನ್ನು ಇನ್ನಷ್ಟು ಬಲಪಡಿಸಬೇಕು. ಇವುಗಳಲ್ಲಿ ಬೀಜ ಬಿತ್ತುವ ಮೂಲಕ ಸಸಿಗಳು ದೊಡ್ಡದಾಗಿ ನೆಡುವ ಸಂದರ್ಭದಲ್ಲಿ ಮಣ್ಣಿನಲ್ಲಿಯೇ ಹಾಳೆ ವಿಲೀನಗೊಳ್ಳುತ್ತದೆ. ಹಾಳೆಗೆ ಬಳಸಿದ ಸೆಗಣಿ ಹಾಗೂ ಜೈವಿಕ ಗೊಬ್ಬರವು ಸಸಿಗಳ ಬೆಳವಣಿಗೆ ಸಹಾಯಕವಾಗುತ್ತದೆ. ಅಲ್ಲದೇ ಕೀಟಗಳ ಬಾಧ್ಯೆಯಿಂದಲೂ ತಪ್ಪಿಸಿಕೊಳ್ಳಬಹುದು. ಈ ರೀತಿಯಲ್ಲಿ ನಿರ್ಮಿಸಿದ ಗ್ರೋಬ್ಯಾಗ್ಗಳನ್ನು ಕುಟುಂಬಶ್ರೀಯ ಮೂಲಕ 25 ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಬೃಹತ್ ಸಂಖ್ಯೆಯಲ್ಲಿ ನಿರ್ಮಿಸುವ ಮೂಲಕ ಕಡಿಮೆ ದರದಲ್ಲಿ ಜೈವಿಕ ಗ್ರೋಬ್ಯಾಗ್ಗಳನ್ನು ತಯಾರಿಸಬಹುದು.
ಮಣಿಪುರ ರಾಜ್ಯದಿಂದ ತಂಡವೊಂದು ಜೈವಿಕ ಗ್ರೋಬ್ಯಾಗ್ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಮುಂದಿನ ವಾರ ಚೆರ್ವತ್ತೂರು ಪೋಳ್ಳಬೈಯಲಿಗೆ ಬರಲಿದೆ. ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಸಾವಯವ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಗೃಹಿಣಿ ಪದ್ಮಾವತಿಯ ಸಾಧನೆಗೆ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾರೆ.
ತರಕಾರಿ ಸಸಿ ಹಾಗೂ ಮರಗಳನ್ನು ಬೆಳೆಸುವುದಕ್ಕಾಗಿ ಬೀಜ ಹಾಕಲು ಇನ್ನು ಪ್ಲಾಸ್ಟಿಕ್ ಚೀಲಗಳನ್ನು ಆಶ್ರಯಿಸಬೇಕಿಲ್ಲ . ಪರಿಸರಸ್ನೇಹಿ ಅಡಕೆ ಹಾಳೆಗಳ ಗ್ರೋ ಬ್ಯಾಗ್ ಪರಿಕಲ್ಪನೆಯನ್ನು ಚೆರ್ವತ್ತೂರಿನ ಮಹಿಳೆಯೊಬ್ಬರು ಪರಿಚಯಿಸಿದ್ದಾರೆ.
ಚೆರ್ವತ್ತೂರು ಕೊಡಕಾಡು ನಿವಾಸಿ ಎಂ.ಪದ್ಮಾವತಿ ಈ ಸಾಧಕಿ. ಹೆಚ್ಚಿನ ಕಡೆ ವ್ಯರ್ಥ ಮಾಡುವ ಅಡಕೆ ಹಾಳೆ ಹಾಗೂ ಸೆಗಣಿಯನ್ನು ಉಪಯೋಗಿಸಿಕೊಂಡು ಸಸಿಗಳನ್ನು ನೆಡುವುದಕ್ಕಾಗಿ ಗ್ರೋಬ್ಯಾಗ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತರಕಾರಿ ಸಸಿಗಳ ಬೀಜ ಹಾಕಲು ವ್ಯಾಪಕವಾಗಿ ಪ್ಲಾಸ್ಟಿಕ್ ಚೀಲಗಳನ್ನೇ ಬಳಸುವುದರಿಂದ ಭೂಮಿಯು ಕಲುಷಿತವಾಗುತ್ತದೆ ಎಂಬ ಆತಂಕಕ್ಕೆ ಪರ್ಯಾಯ ಮಾರ್ಗದ ಕುರಿತು ಎಂ. ಪದ್ಮಾವತಿ ಆಲೋಚಿಸಿದಾಗ, ಮಣ್ಣಿನೊಂದಿಗೆ ಕೊಳೆಯುವಂತಹ ಚೀಲಗಳನ್ನು ನಿರ್ಮಿಸುವುದಕ್ಕಾಗಿ ಪ್ರಯತ್ನಿಸಿದರು. ಅದರಂತೆ ಕೇವಲ ಮಣ್ಣಿನಿಂದಲೇ ತಯಾರಿಸಿದ ಸಸಿ ಮಾಡುವ ಗೂಡು, ತೆಂಗಿನ ನಾರು, ಹುಲ್ಲು, ಬಾಳೆಯ ದಿಂಡು ಮುಂತಾದವುಗಳನ್ನು ಉಪಯೋಗಿಸಿ ತಯಾರಿಸಿದರೂ ಅದು ವಿಫಲವಾಗಿತ್ತು. ಬಳಿಕವೇ ಅಡಕೆ ಹಾಳೆ ಉಪಯೋಗಿಸಿ ಗ್ರೋಬ್ಯಾಗ್ ಎಂಬ ಕಲ್ಪನೆಯಲ್ಲಿ ಯಶಸ್ವಿಯಾಗಿದ್ದಾರೆ. ಇದರಂತೆ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ವಾಣಿಜ್ಯ ಆಧಾರದಲ್ಲಿ ಗ್ರೋಬ್ಯಾಗ್ ನಿರ್ಮಿಸಲು ಆರಂಭಿಸಿದ್ದಾರೆ.
ಗ್ರೋ ಬ್ಯಾಗ್ ಸಿದ್ಧಪಡಿಸುವುದು ಹೇಗೆ ?
ಆರಂಭದಲ್ಲಿ ಹಾಳೆಯನ್ನು ಉಪಯೋಗಿಸಿ ಗೂಡುಗಳನ್ನು ನಿರ್ಮಿಸಬೇಕು. ಬಳಿಕ ಸೆಗಣಿ, ಹುಲ್ಲಿನ ಹುಡಿ, ಜೈವಿಕ ಗೊಬ್ಬರಗಳ ಮಿಶ್ರಿತದಿಂದ ಗೂಡನ್ನು ಇನ್ನಷ್ಟು ಬಲಪಡಿಸಬೇಕು. ಇವುಗಳಲ್ಲಿ ಬೀಜ ಬಿತ್ತುವ ಮೂಲಕ ಸಸಿಗಳು ದೊಡ್ಡದಾಗಿ ನೆಡುವ ಸಂದರ್ಭದಲ್ಲಿ ಮಣ್ಣಿನಲ್ಲಿಯೇ ಹಾಳೆ ವಿಲೀನಗೊಳ್ಳುತ್ತದೆ. ಹಾಳೆಗೆ ಬಳಸಿದ ಸೆಗಣಿ ಹಾಗೂ ಜೈವಿಕ ಗೊಬ್ಬರವು ಸಸಿಗಳ ಬೆಳವಣಿಗೆ ಸಹಾಯಕವಾಗುತ್ತದೆ. ಅಲ್ಲದೇ ಕೀಟಗಳ ಬಾಧ್ಯೆಯಿಂದಲೂ ತಪ್ಪಿಸಿಕೊಳ್ಳಬಹುದು. ಈ ರೀತಿಯಲ್ಲಿ ನಿರ್ಮಿಸಿದ ಗ್ರೋಬ್ಯಾಗ್ಗಳನ್ನು ಕುಟುಂಬಶ್ರೀಯ ಮೂಲಕ 25 ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಬೃಹತ್ ಸಂಖ್ಯೆಯಲ್ಲಿ ನಿರ್ಮಿಸುವ ಮೂಲಕ ಕಡಿಮೆ ದರದಲ್ಲಿ ಜೈವಿಕ ಗ್ರೋಬ್ಯಾಗ್ಗಳನ್ನು ತಯಾರಿಸಬಹುದು.
ಮಣಿಪುರ ರಾಜ್ಯದಿಂದ ತಂಡವೊಂದು ಜೈವಿಕ ಗ್ರೋಬ್ಯಾಗ್ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಮುಂದಿನ ವಾರ ಚೆರ್ವತ್ತೂರು ಪೋಳ್ಳಬೈಯಲಿಗೆ ಬರಲಿದೆ. ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಸಾವಯವ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಗೃಹಿಣಿ ಪದ್ಮಾವತಿಯ ಸಾಧನೆಗೆ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾರೆ.