ಆ್ಯಪ್ನಗರ

ಹರಿತಮುಟ್ಟಂ ಯೋಜನೆಗೆ ಚಾಲನೆ

ಹೊಸವರ್ಷವನ್ನು ಹಸುರು ಸಮೃದ್ಧಗೊಳಿಸುವ ಉದ್ದೇಶದೊಂದಿಗೆ ಹರಿತ ಕೇರಳಂ ಮಿಷನ್‌ ಜಿಲ್ಲೆಯಲ್ಲಿ 'ಹರಿತಮುಟ್ಟಂ (ಹಸುರು ಅಂಗಳ) ಯೋಜನೆಯನ್ನು ಜಾರಿಗೊಳಿಸುತ್ತಿದೆ.

Vijaya Karnataka 2 Jan 2019, 3:10 pm
ಕಾಸರಗೋಡು: ಹೊಸವರ್ಷವನ್ನು ಹಸುರು ಸಮೃದ್ಧಗೊಳಿಸುವ ಉದ್ದೇಶದೊಂದಿಗೆ ಹರಿತ ಕೇರಳಂ ಮಿಷನ್‌ ಜಿಲ್ಲೆಯಲ್ಲಿ 'ಹರಿತಮುಟ್ಟಂ (ಹಸುರು ಅಂಗಳ) ಯೋಜನೆಯನ್ನು ಜಾರಿಗೊಳಿಸುತ್ತಿದೆ.
Vijaya Karnataka Web harithamuttam programme inaguration
ಹರಿತಮುಟ್ಟಂ ಯೋಜನೆಗೆ ಚಾಲನೆ


ಜಿಲ್ಲೆಯ ಎಲ್ಲ ವಿದ್ಯಾಲಯಗಳ, ಸಂಸ್ಥೆಗಳ ಆವರಣವನ್ನು ಸಸ್ಯ ಶ್ಯಾಮಲಗೊಳಿಸುವ ಉದ್ದೇಶದಿಂದ ನಾನಾ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಿತು. ಫಲ ನೀಡುವ ಸಸ್ಯವನ್ನು ನೆಡುವ ಮೂಲಕ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಕಾರ್ಯಕ್ರಮ ಉದ್ಘಾಟಿಸಿದರು.

ಹಸಿರು ಕೇರಳ ಮಿಷನ್‌ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್‌, ಜಿಲ್ಲಾ ಮಾಹಿತಿ ಕೇಂದ್ರ ಅಧಿಕಾರಿ ರಶೀದ್‌ ಬಾಬು, ಎಡಿಸಿ ಬೆವಿನ್‌, ಜಿಲ್ಲಾ ಪ್ರೊಬೇಷನ್‌ ಅಧಿಕಾರಿ ಭಾಸ್ಕರನ್‌ ಬಿ., ಕೆ.ಪಿ.ಗಂಗಾಧರನ್‌ ಮೊದಲಾದವರು ಉಪಸ್ಥಿತರಿದ್ದರು.

ಚಿತ್ರ:1ಕೆಎಸ್‌ಮುಟ್ಟಂ-ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಸ್ಯ ನೆಡುವ ಮೂಲಕ ಜಿಲ್ಲಾಧಿಕಾರಿ ಡಾ.ಡಿ. ಸಜಿತ್‌ ಬಾಬು ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ