ಆ್ಯಪ್ನಗರ

ಮಳೆ ಸಾಧ್ಯತೆ: ದುರಂತ ನಿವಾರಣಾ ಪ್ರಾಧಿಕಾರ ಎಚ್ಚರಿಕೆ

ರಾಜ್ಯದಲ್ಲಿ ಆ1ರ ವರೆಗೆ ಧಾರಾಕರ ಮಳೆ ಸುರಿಯುವ ಮುನ್ನೆಚ್ಚರಿಕೆ ಹಿನ್ನೆಯಲ್ಲಿ ಹವಾಮಾನ ನಿರೀಕ್ಷಣಾ ಕೇಂದ್ರದ ದುರಂತ ನಿವಾರಣಾ ಪ್ರಾಧಿಕಾರ ಜಾಗೃತಿ ನಿರ್ದೇಶನ ನೀಡಿದೆ...

Vijaya Karnataka 31 Jul 2018, 5:00 am
ಕಾಸರಗೋಡು: ರಾಜ್ಯದಲ್ಲಿ ಆ.1ರ ವರೆಗೆ ಧಾರಾಕರ ಮಳೆ ಸುರಿಯುವ ಮುನ್ನೆಚ್ಚರಿಕೆ ಹಿನ್ನೆಯಲ್ಲಿ ಹವಾಮಾನ ನಿರೀಕ್ಷಣಾ ಕೇಂದ್ರದ ದುರಂತ ನಿವಾರಣಾ ಪ್ರಾಧಿಕಾರ ಜಾಗೃತಿ ನಿರ್ದೇಶನ ನೀಡಿದೆ.
Vijaya Karnataka Web heavy rain forecaste
ಮಳೆ ಸಾಧ್ಯತೆ: ದುರಂತ ನಿವಾರಣಾ ಪ್ರಾಧಿಕಾರ ಎಚ್ಚರಿಕೆ


ನಿರಂತರವಾಗಿ ಮಳೆ ಲಭಿಸಿದರೆ ಜಲಪ್ರವಾಹ, ಮಣ್ಣು ಕುಸಿತದ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ರಾತ್ರಿವೇಳೆಯಲ್ಲಿ ಮಲೆನಾಡು ವಲಯದಲ್ಲಿ ಪ್ರಯಾಣ ಕಡಿಮೆ ಮಾಡಲು ಹಾಗೂ ಸಮುದ್ರಕ್ಕೆ ಇಳಿಯದಿರಲು ಎಚ್ಚರಿಕೆ ನೀಡಿದೆ.

ಹೊಳೆ-ತೋಡುಗಳಿಗೆ ಇಳಿಯಬಾರದು. ಮಲೆನಾಡು ವಲಯದ ರಸ್ತೆಗಳ ಇಕ್ಕೆಲಗಳ ಸಣ್ಣ ಚರಂಡಿಗಳ ಮೂಲಕ ಅಪಾಯ ಸಾಧ್ಯತೆಗಳಿದ್ದು, ಇಂತಹ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸಬಾರದು. ಮರಗಳ ಕೆಳಗೆ ವಾಹನಗಳನ್ನು ಪಾರ್ಕ್‌ ಮಾಡಬಾರದು, ಮಣ್ಣುಕುಸಿತ ಸಾಧ್ಯತೆ ಇರುತ್ತದೆ. ಅಧಿಕಾರಿಗಳು ಹೇಳಿದರೆ ವಾಸ ಸ್ಥಳಾಂತರಿಸಲು ಉದಾಸೀನ ತೋರಬಾರದು. ತರಬೇತಿ ಪಡೆದವರಲ್ಲದ ಸಮಾಜಸೇವಕರು ಮತ್ತಿತರರು ಜಲಪ್ರವಾಹ, ಮಣ್ಣುಕುಸಿತ ನಡೆದ ಸ್ಥಳಗಳನ್ನು ಸಂದರ್ಶಿಸಬಾರದು ಎಂದು ದುರಂತ ನಿವಾರಣಾ ಪ್ರಾಧಿಕಾರ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ