ಕಾಸರಗೋಡು: ಪ್ರದೇಶದ ಅಭಿವೃದ್ಧಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಬಿ.ಒ.ಟಿ. ಆಧಾರದಲ್ಲಿನಿರ್ಮಿಸಿರುವ ಬಸ್ ನಿಲ್ದಾಣ ಮೂಲೆಗುಂಪಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಚೆರ್ಕಳದಲ್ಲಿ ಕೂಗಳತೆಯಷ್ಟು ದೂರದಲ್ಲಿ ಒಂದೂವರೆ ದಶಕದ ಹಿಂದೆ ನಿರ್ಮಾಣವಾದ ಬಸ್ ನಿಲ್ದಾಣಕ್ಕೆ ಈ ಸ್ಥಿತಿ ಉಂಟಾಗಿದೆ. ಈಗ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು ಶೇ. 20ಕ್ಕಿಂತ ಕಡಿಮೆ ಬಸ್ಗಳು ಮಾತ್ರವಾಗಿವೆ. ಎಲ್ಲ ಸೌಕರ್ಯಗಳಿರುವ ಬಸ್ನಿಲ್ದಾಣವನ್ನು ಬಸ್ಗಳು ಕೈಬಿಟ್ಟಿರುವುದರಿಂದ ಕೈಗೂಸುಗಳೊಂದಿಗೆ ತಲುಪುವ ತಾಯಿಯಂದಿರು, ವೃದ್ಧರು ಬಿಸಿಲು-ಮಳೆಗೆ ಹೆದ್ದಾರಿ ಬದಿ ಕಾದು ನಿಲ್ಲುತ್ತಾರೆ.
ಬ್ಯಾಂಕ್ಗಳಿಂದ ಸಾಲ ಪಡೆದು ಮೊದಲಾದ ಬಹುನಿರೀಕ್ಷೆಯೊಂದಿಗೆ ಬಸ್ ನಿಲ್ದಾಣದಲ್ಲಿವ್ಯಾಪಾರ ಆರಂಭಿಸಿದ್ದ ವ್ಯಾಪಾರಿಗಳು ಪ್ರತಿ ತಿಂಗಳ ಬಾಡಿಗೆ ಕೂಡ ನೀಡಲು ಸಾಧ್ಯವಾಗದೆ ಕುಟುಂಬದ ನಿತ್ಯ ಖರ್ಚುಗಳಿಗೆ ಕಷ್ಟಪಡುತ್ತಿದ್ದಾರೆ. ಚೆರ್ಕಳ ಅಬ್ದುಲ್ಲ ಸ್ಥಳೀಯಾಡಳಿತ ಇಲಾಖೆ ಸಚಿವರು, ಪಿ.ಬಿ. ಅಬ್ದುಲ್ ರಝಾಕ್ ಚೆಂಗಳ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಬಿಒಟಿ ಆಧಾರದಲ್ಲಿರಾಜ್ಯದಲ್ಲೇ ಮೊದಲ ಬಾರಿಗೆ ಎಲ್ಲ ಸೌಕರ್ಯಗಳನ್ನೊಳಗೊಂಡ ಬಸ್ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಿದ್ದರು.
ಪಂಚಾಯಿತಿ ಜತೆ ಗುತ್ತಿಗೆ ಆಧಾರದಲ್ಲಿ ಬೇವಿಂಜೆಯ ಸಿ. ಅಬ್ದುಲ್ಲಅವರು ಬಸ್ ಸ್ಟಾತ್ರ್ಯಂಡ್ ಕಂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿದ್ದರು. ಮೂರು ಅಂತಸ್ತುಗಳಲ್ಲಿ30ಕ್ಕೂ ಹೆಚ್ಚು ಅಂಗಡಿ ಕೊಠಡಿಗಳಿರುವ ಕಟ್ಟಡ ಇದಾಗಿದೆ. 49 ವರ್ಷ ದಾಟಿದ ಬಳಿಕ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂಬುದು ಕರಾರು ವ್ಯವಸ್ಥೆ. ಅದುವರೆಗಿನ ಬಾಡಿಗೆ ಕಟ್ಟಡ ನಿರ್ಮಿಸಿದ ಅಬ್ದುಲ್ಲರಿಗೆ ಲಭಿಸಲಿದೆ. 2003ರ ಜನವರಿ 6ರಂದು ಸಚಿವ ಚೆರ್ಕಳ ಅಬ್ದುಲ್ಲಶಿಲಾನ್ಯಾಸ ಮಾಡಿದ ಬಸ್ ನಿಲ್ದಾಣವನ್ನು 2007ರ ಆಗಸ್ಟ್ 11ರಂದು ಕೇಂದ್ರ ಸಚಿವರಾಗಿದ್ದ ಇ. ಅಹಮ್ಮದ್ ಅವರು ನಾಡಿಗೆ ಅರ್ಪಿಸಿದ್ದರು.
ಆರಂಭದ ಕೆಲವು ವರ್ಷ ಬಸ್ಗಳು ನಿಲ್ದಾಣಕ್ಕೆ ಪ್ರವೇಶಿಸಿದ್ದವು. ಆದರೆ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿಬಳಿಕ ಹಲವು ಬಸ್ಗಳು ನಿಲ್ದಾಣಕ್ಕೆ ಪ್ರವೇಶಿಸದಾದವು. ರಸ್ತೆಯನ್ನು ಸಂಚಾರಯೋಗ್ಯಗೊಳಿಸಿದರೂ ಬಸ್ಗಳು ನಿಲ್ದಾಣಕ್ಕೆ ಪ್ರವೇಶಿಸದೆ ಓಡಲಾರಂಭಿಸಿದ್ದವು. ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ಓಡಿದ ಬಸ್ಗಳನ್ನು ಹಲವು ಬಾರಿ ನಾಗರಿಕರು, ಪ್ರಯಾಣಿಕರು, ವ್ಯಾಪಾರಿಗಳು ತಡೆದಿದ್ದರು. ಪೊಲೀಸರ ಉಪಸ್ಥಿತಿ ಕಡಿಮೆಯಾಗಿರುವುದರಿಂದ ಬಸ್ಗಳು ಬಸ್ ನಿಲ್ದಾಣ ಪ್ರವೇಶದಿಂದ ದೂರವಾದವು.
ಕೋವಿಡ್ ಬಳಿಕ ಬಸ್ ನಿಲ್ದಾಣ ಪ್ರವೇಶಿಸುವ ಬಸ್ಗಳ ಸಂಖ್ಯೆಯಲ್ಲೂ ಇಳಿಕೆಯುಂಟಾಯಿತು. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲವೊಂದು ಬಸ್ಗಳು ಮಾತ್ರ ನಿಲ್ದಾಣಕ್ಕೆ ಪ್ರವೇಶಿಸುತ್ತವೆ. ಬದಿಯಡ್ಕ, ಕುತ್ತಿಕ್ಕೋಲ್, ಮುಳ್ಳೇರಿಯ ಭಾಗಗಳಿಗಿರುವ ಪ್ರಯಾಣಿಕರಿಗೆ ಹೆಚ್ಚು ಸಮಯ ಕಾಲ ಬಸ್ಗಾಗಿ ಕಾದು ನಿಲ್ಲಬೇಕಾಗುತ್ತದೆ. ಬಸ್ಗಳು ನಿಲ್ದಾಣಕ್ಕೆ ಪ್ರವೇಶಿಸುವುದು ಕಡಿಮೆಯಾಗಿರುವುದರಿಂದ ಮೀನು ವ್ಯಾಪಾರಿಗಳು ಮೀನು ವ್ಯಾಪಾರವನ್ನು ಚೆರ್ಕಳ ಪೇಟೆಯ ಪಾಡಿ ರಸ್ತೆ ಸಮೀಪ ಸ್ಥಳಾಂತರಿಸಿದ್ದರು. ಅದು ಸಂಚಾರ ದಟ್ಟಣೆಗೆ ಹಾಗೂ ಹೆದ್ದಾರಿ ಬದಿ ಮಲಿನ ನೀರು ಕಟ್ಟಿ ನಿಲ್ಲಲು ಕಾರಣವಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಬಸ್ ನಿಲ್ದಾಣಕ್ಕೆ ಪ್ರವೇಶಿಸದ ಬಸ್ಗಳನ್ನು ಗುರುತಿಸಲು ಇತ್ತೀಚೆಗೆ ಚೆರ್ಕಳ ಪೇಟೆಯಲ್ಲಿ ವ್ಯಾಪಾರಿಗಳ ನೇತೃತ್ವದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಜನರ ದೂರು
ಬಸ್ ನಿಲ್ದಾಣಕ್ಕೆ ಪ್ರವೇಶಿಸದಿರುವುದರಿಂದ ವ್ಯಾಪಾರದಲ್ಲಿ ಗಣನೀಯವಾದ ಇಳಿಕೆ ಉಂಟಾಗಿದೆ. ಅಂಗಡಿ ಕೊಠಡಿಯ ಬಾಡಿಗೆ ಕೂಡ ಸಮರ್ಪಕವಾಗಿ ನೀಡಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿತೀವ್ರ ಆರ್ಥಿಕ ಸಂದಿಗ್ಧತೆಯನ್ನು ಎದುರಿಸುತ್ತಿರುವ ವ್ಯಾಪಾರಿಗಳಿಗೆ ಬದುಕು ಕಷ್ಟಸಾಧ್ಯವಾಗಿದೆ.
- ಸಿ.ಎ. ಬಶೀರ್, ತರಕಾರಿ ವ್ಯಾಪಾರಿ ಚೆರ್ಕಳ
--------------------------------------
ರಾಷ್ಟ್ರೀಯ ಹೆದ್ದಾರಿಯಿಂದ 300 ಮೀಟರ್ ದೂರದಲ್ಲಿರುವ ಜಿಲ್ಲೆಯಲ್ಲೇ ಅತ್ಯಂತ ಸೌಕರ್ಯಗಳಿರುವ ಬಸ್ ನಿಲ್ದಾಣದೊಳಗೆ ಬಸ್ಗಳು ಬಾರದಿರುವುದು ಪ್ರಯಾಣಿಕರಿಗೆ ಹೆಚ್ಚು ಸಮಸ್ಯೆ ಉಂಟಾಗುತ್ತಿದೆ. ಪೊಲೀಸರು, ಮೋಟಾರ್ ವಾಹನ ಇಲಾಖೆ ಕ್ರಮ ಕೈಗೊಂಡರೆ ಇದನ್ನು ತಡೆಗಟ್ಟಲು ಸಾಧ್ಯವಿದೆ. ಅಗತ್ಯ ಸೌಕರ್ಯಗಳಿಲ್ಲದೆ ಮಳೆ, ಬಿಸಿಲಿಗೆ ಹೆದ್ದಾರಿ ಬದಿ ಮಹಿಳೆಯರು, ಮಕ್ಕಳು ಬಸ್ಗಾಗಿ ಕಾದು ನಿಲ್ಲಬೇಕಾಗುತ್ತಿದೆ.
- ಸಿ. ಜಾಫರ್ ಸಾದಿಕ್, ಬಸ್ ನಿಲ್ದಾಣ ನಿರ್ಮಿಸಿದ ಸಿ. ಅಬ್ದುಲ್ಲ ಅವರ ಪುತ್ರ
ಬ್ಯಾಂಕ್ಗಳಿಂದ ಸಾಲ ಪಡೆದು ಮೊದಲಾದ ಬಹುನಿರೀಕ್ಷೆಯೊಂದಿಗೆ ಬಸ್ ನಿಲ್ದಾಣದಲ್ಲಿವ್ಯಾಪಾರ ಆರಂಭಿಸಿದ್ದ ವ್ಯಾಪಾರಿಗಳು ಪ್ರತಿ ತಿಂಗಳ ಬಾಡಿಗೆ ಕೂಡ ನೀಡಲು ಸಾಧ್ಯವಾಗದೆ ಕುಟುಂಬದ ನಿತ್ಯ ಖರ್ಚುಗಳಿಗೆ ಕಷ್ಟಪಡುತ್ತಿದ್ದಾರೆ. ಚೆರ್ಕಳ ಅಬ್ದುಲ್ಲ ಸ್ಥಳೀಯಾಡಳಿತ ಇಲಾಖೆ ಸಚಿವರು, ಪಿ.ಬಿ. ಅಬ್ದುಲ್ ರಝಾಕ್ ಚೆಂಗಳ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಬಿಒಟಿ ಆಧಾರದಲ್ಲಿರಾಜ್ಯದಲ್ಲೇ ಮೊದಲ ಬಾರಿಗೆ ಎಲ್ಲ ಸೌಕರ್ಯಗಳನ್ನೊಳಗೊಂಡ ಬಸ್ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಿದ್ದರು.
ಪಂಚಾಯಿತಿ ಜತೆ ಗುತ್ತಿಗೆ ಆಧಾರದಲ್ಲಿ ಬೇವಿಂಜೆಯ ಸಿ. ಅಬ್ದುಲ್ಲಅವರು ಬಸ್ ಸ್ಟಾತ್ರ್ಯಂಡ್ ಕಂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿದ್ದರು. ಮೂರು ಅಂತಸ್ತುಗಳಲ್ಲಿ30ಕ್ಕೂ ಹೆಚ್ಚು ಅಂಗಡಿ ಕೊಠಡಿಗಳಿರುವ ಕಟ್ಟಡ ಇದಾಗಿದೆ. 49 ವರ್ಷ ದಾಟಿದ ಬಳಿಕ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂಬುದು ಕರಾರು ವ್ಯವಸ್ಥೆ. ಅದುವರೆಗಿನ ಬಾಡಿಗೆ ಕಟ್ಟಡ ನಿರ್ಮಿಸಿದ ಅಬ್ದುಲ್ಲರಿಗೆ ಲಭಿಸಲಿದೆ. 2003ರ ಜನವರಿ 6ರಂದು ಸಚಿವ ಚೆರ್ಕಳ ಅಬ್ದುಲ್ಲಶಿಲಾನ್ಯಾಸ ಮಾಡಿದ ಬಸ್ ನಿಲ್ದಾಣವನ್ನು 2007ರ ಆಗಸ್ಟ್ 11ರಂದು ಕೇಂದ್ರ ಸಚಿವರಾಗಿದ್ದ ಇ. ಅಹಮ್ಮದ್ ಅವರು ನಾಡಿಗೆ ಅರ್ಪಿಸಿದ್ದರು.
ಆರಂಭದ ಕೆಲವು ವರ್ಷ ಬಸ್ಗಳು ನಿಲ್ದಾಣಕ್ಕೆ ಪ್ರವೇಶಿಸಿದ್ದವು. ಆದರೆ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿಬಳಿಕ ಹಲವು ಬಸ್ಗಳು ನಿಲ್ದಾಣಕ್ಕೆ ಪ್ರವೇಶಿಸದಾದವು. ರಸ್ತೆಯನ್ನು ಸಂಚಾರಯೋಗ್ಯಗೊಳಿಸಿದರೂ ಬಸ್ಗಳು ನಿಲ್ದಾಣಕ್ಕೆ ಪ್ರವೇಶಿಸದೆ ಓಡಲಾರಂಭಿಸಿದ್ದವು. ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ಓಡಿದ ಬಸ್ಗಳನ್ನು ಹಲವು ಬಾರಿ ನಾಗರಿಕರು, ಪ್ರಯಾಣಿಕರು, ವ್ಯಾಪಾರಿಗಳು ತಡೆದಿದ್ದರು. ಪೊಲೀಸರ ಉಪಸ್ಥಿತಿ ಕಡಿಮೆಯಾಗಿರುವುದರಿಂದ ಬಸ್ಗಳು ಬಸ್ ನಿಲ್ದಾಣ ಪ್ರವೇಶದಿಂದ ದೂರವಾದವು.
ಕೋವಿಡ್ ಬಳಿಕ ಬಸ್ ನಿಲ್ದಾಣ ಪ್ರವೇಶಿಸುವ ಬಸ್ಗಳ ಸಂಖ್ಯೆಯಲ್ಲೂ ಇಳಿಕೆಯುಂಟಾಯಿತು. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲವೊಂದು ಬಸ್ಗಳು ಮಾತ್ರ ನಿಲ್ದಾಣಕ್ಕೆ ಪ್ರವೇಶಿಸುತ್ತವೆ. ಬದಿಯಡ್ಕ, ಕುತ್ತಿಕ್ಕೋಲ್, ಮುಳ್ಳೇರಿಯ ಭಾಗಗಳಿಗಿರುವ ಪ್ರಯಾಣಿಕರಿಗೆ ಹೆಚ್ಚು ಸಮಯ ಕಾಲ ಬಸ್ಗಾಗಿ ಕಾದು ನಿಲ್ಲಬೇಕಾಗುತ್ತದೆ. ಬಸ್ಗಳು ನಿಲ್ದಾಣಕ್ಕೆ ಪ್ರವೇಶಿಸುವುದು ಕಡಿಮೆಯಾಗಿರುವುದರಿಂದ ಮೀನು ವ್ಯಾಪಾರಿಗಳು ಮೀನು ವ್ಯಾಪಾರವನ್ನು ಚೆರ್ಕಳ ಪೇಟೆಯ ಪಾಡಿ ರಸ್ತೆ ಸಮೀಪ ಸ್ಥಳಾಂತರಿಸಿದ್ದರು. ಅದು ಸಂಚಾರ ದಟ್ಟಣೆಗೆ ಹಾಗೂ ಹೆದ್ದಾರಿ ಬದಿ ಮಲಿನ ನೀರು ಕಟ್ಟಿ ನಿಲ್ಲಲು ಕಾರಣವಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಬಸ್ ನಿಲ್ದಾಣಕ್ಕೆ ಪ್ರವೇಶಿಸದ ಬಸ್ಗಳನ್ನು ಗುರುತಿಸಲು ಇತ್ತೀಚೆಗೆ ಚೆರ್ಕಳ ಪೇಟೆಯಲ್ಲಿ ವ್ಯಾಪಾರಿಗಳ ನೇತೃತ್ವದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಜನರ ದೂರು
ಬಸ್ ನಿಲ್ದಾಣಕ್ಕೆ ಪ್ರವೇಶಿಸದಿರುವುದರಿಂದ ವ್ಯಾಪಾರದಲ್ಲಿ ಗಣನೀಯವಾದ ಇಳಿಕೆ ಉಂಟಾಗಿದೆ. ಅಂಗಡಿ ಕೊಠಡಿಯ ಬಾಡಿಗೆ ಕೂಡ ಸಮರ್ಪಕವಾಗಿ ನೀಡಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿತೀವ್ರ ಆರ್ಥಿಕ ಸಂದಿಗ್ಧತೆಯನ್ನು ಎದುರಿಸುತ್ತಿರುವ ವ್ಯಾಪಾರಿಗಳಿಗೆ ಬದುಕು ಕಷ್ಟಸಾಧ್ಯವಾಗಿದೆ.
- ಸಿ.ಎ. ಬಶೀರ್, ತರಕಾರಿ ವ್ಯಾಪಾರಿ ಚೆರ್ಕಳ
--------------------------------------
ರಾಷ್ಟ್ರೀಯ ಹೆದ್ದಾರಿಯಿಂದ 300 ಮೀಟರ್ ದೂರದಲ್ಲಿರುವ ಜಿಲ್ಲೆಯಲ್ಲೇ ಅತ್ಯಂತ ಸೌಕರ್ಯಗಳಿರುವ ಬಸ್ ನಿಲ್ದಾಣದೊಳಗೆ ಬಸ್ಗಳು ಬಾರದಿರುವುದು ಪ್ರಯಾಣಿಕರಿಗೆ ಹೆಚ್ಚು ಸಮಸ್ಯೆ ಉಂಟಾಗುತ್ತಿದೆ. ಪೊಲೀಸರು, ಮೋಟಾರ್ ವಾಹನ ಇಲಾಖೆ ಕ್ರಮ ಕೈಗೊಂಡರೆ ಇದನ್ನು ತಡೆಗಟ್ಟಲು ಸಾಧ್ಯವಿದೆ. ಅಗತ್ಯ ಸೌಕರ್ಯಗಳಿಲ್ಲದೆ ಮಳೆ, ಬಿಸಿಲಿಗೆ ಹೆದ್ದಾರಿ ಬದಿ ಮಹಿಳೆಯರು, ಮಕ್ಕಳು ಬಸ್ಗಾಗಿ ಕಾದು ನಿಲ್ಲಬೇಕಾಗುತ್ತಿದೆ.
- ಸಿ. ಜಾಫರ್ ಸಾದಿಕ್, ಬಸ್ ನಿಲ್ದಾಣ ನಿರ್ಮಿಸಿದ ಸಿ. ಅಬ್ದುಲ್ಲ ಅವರ ಪುತ್ರ