ಆ್ಯಪ್ನಗರ

Kasaragod News - ಕಾಸರಗೋಡಿನ ಚೆರ್ಕಳ ನಿಲ್ದಾಣಕ್ಕೆ ಪ್ರವೇಶಿಸಲೊಲ್ಲದ ಬಸ್‌ಗಳು

ಪಂಚಾಯಿತಿ ಜತೆ ಗುತ್ತಿಗೆ ಆಧಾರದಲ್ಲಿ ಬೇವಿಂಜೆಯ ಸಿ. ಅಬ್ದುಲ್ಲಅವರು ಬಸ್‌ ಸ್ಟಾತ್ರ್ಯಂಡ್‌ ಕಂ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಿದ್ದರು. ಮೂರು ಅಂತಸ್ತುಗಳಲ್ಲಿ30ಕ್ಕೂ ಹೆಚ್ಚು ಅಂಗಡಿ ಕೊಠಡಿಗಳಿರುವ ಕಟ್ಟಡ ಇದಾಗಿದೆ. 49 ವರ್ಷ ದಾಟಿದ ಬಳಿಕ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂಬುದು ಕರಾರು ವ್ಯವಸ್ಥೆ. ಅದುವರೆಗಿನ ಬಾಡಿಗೆ ಕಟ್ಟಡ ನಿರ್ಮಿಸಿದ ಅಬ್ದುಲ್ಲರಿಗೆ ಲಭಿಸಲಿದೆ. ಬ್ಯಾಂಕ್‌ಗಳಿಂದ ಸಾಲ ಪಡೆದು ಮೊದಲಾದ ಬಹುನಿರೀಕ್ಷೆಯೊಂದಿಗೆ ಬಸ್‌ ನಿಲ್ದಾಣದಲ್ಲಿವ್ಯಾಪಾರ ಆರಂಭಿಸಿದ್ದ ವ್ಯಾಪಾರಿಗಳು ಪ್ರತಿ ತಿಂಗಳ ಬಾಡಿಗೆ ಕೂಡ ನೀಡಲು ಸಾಧ್ಯವಾಗದೆ ಕುಟುಂಬದ ನಿತ್ಯ ಖರ್ಚುಗಳಿಗೆ ಕಷ್ಟಪಡುತ್ತಿದ್ದಾರೆ.

Edited byಚೇತನ್ ಓ.ಆರ್. | Vijaya Karnataka Web 29 Nov 2022, 12:02 pm
ಕಾಸರಗೋಡು: ಪ್ರದೇಶದ ಅಭಿವೃದ್ಧಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಬಿ.ಒ.ಟಿ. ಆಧಾರದಲ್ಲಿನಿರ್ಮಿಸಿರುವ ಬಸ್‌ ನಿಲ್ದಾಣ ಮೂಲೆಗುಂಪಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಚೆರ್ಕಳದಲ್ಲಿ ಕೂಗಳತೆಯಷ್ಟು ದೂರದಲ್ಲಿ ಒಂದೂವರೆ ದಶಕದ ಹಿಂದೆ ನಿರ್ಮಾಣವಾದ ಬಸ್‌ ನಿಲ್ದಾಣಕ್ಕೆ ಈ ಸ್ಥಿತಿ ಉಂಟಾಗಿದೆ. ಈಗ ಬಸ್‌ ನಿಲ್ದಾಣಕ್ಕೆ ಪ್ರವೇಶಿಸುವುದು ಶೇ. 20ಕ್ಕಿಂತ ಕಡಿಮೆ ಬಸ್‌ಗಳು ಮಾತ್ರವಾಗಿವೆ. ಎಲ್ಲ ಸೌಕರ್ಯಗಳಿರುವ ಬಸ್‌ನಿಲ್ದಾಣವನ್ನು ಬಸ್‌ಗಳು ಕೈಬಿಟ್ಟಿರುವುದರಿಂದ ಕೈಗೂಸುಗಳೊಂದಿಗೆ ತಲುಪುವ ತಾಯಿಯಂದಿರು, ವೃದ್ಧರು ಬಿಸಿಲು-ಮಳೆಗೆ ಹೆದ್ದಾರಿ ಬದಿ ಕಾದು ನಿಲ್ಲುತ್ತಾರೆ.
Vijaya Karnataka Web Cherkala bus stand


ಬ್ಯಾಂಕ್‌ಗಳಿಂದ ಸಾಲ ಪಡೆದು ಮೊದಲಾದ ಬಹುನಿರೀಕ್ಷೆಯೊಂದಿಗೆ ಬಸ್‌ ನಿಲ್ದಾಣದಲ್ಲಿವ್ಯಾಪಾರ ಆರಂಭಿಸಿದ್ದ ವ್ಯಾಪಾರಿಗಳು ಪ್ರತಿ ತಿಂಗಳ ಬಾಡಿಗೆ ಕೂಡ ನೀಡಲು ಸಾಧ್ಯವಾಗದೆ ಕುಟುಂಬದ ನಿತ್ಯ ಖರ್ಚುಗಳಿಗೆ ಕಷ್ಟಪಡುತ್ತಿದ್ದಾರೆ. ಚೆರ್ಕಳ ಅಬ್ದುಲ್ಲ ಸ್ಥಳೀಯಾಡಳಿತ ಇಲಾಖೆ ಸಚಿವರು, ಪಿ.ಬಿ. ಅಬ್ದುಲ್‌ ರಝಾಕ್‌ ಚೆಂಗಳ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಬಿಒಟಿ ಆಧಾರದಲ್ಲಿರಾಜ್ಯದಲ್ಲೇ ಮೊದಲ ಬಾರಿಗೆ ಎಲ್ಲ ಸೌಕರ್ಯಗಳನ್ನೊಳಗೊಂಡ ಬಸ್‌ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಿದ್ದರು.

Cyber Fraud - ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 7 ಲಕ್ಷ ರೂ. ಪಂಗನಾಮ!
ಪಂಚಾಯಿತಿ ಜತೆ ಗುತ್ತಿಗೆ ಆಧಾರದಲ್ಲಿ ಬೇವಿಂಜೆಯ ಸಿ. ಅಬ್ದುಲ್ಲಅವರು ಬಸ್‌ ಸ್ಟಾತ್ರ್ಯಂಡ್‌ ಕಂ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಿದ್ದರು. ಮೂರು ಅಂತಸ್ತುಗಳಲ್ಲಿ30ಕ್ಕೂ ಹೆಚ್ಚು ಅಂಗಡಿ ಕೊಠಡಿಗಳಿರುವ ಕಟ್ಟಡ ಇದಾಗಿದೆ. 49 ವರ್ಷ ದಾಟಿದ ಬಳಿಕ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂಬುದು ಕರಾರು ವ್ಯವಸ್ಥೆ. ಅದುವರೆಗಿನ ಬಾಡಿಗೆ ಕಟ್ಟಡ ನಿರ್ಮಿಸಿದ ಅಬ್ದುಲ್ಲರಿಗೆ ಲಭಿಸಲಿದೆ. 2003ರ ಜನವರಿ 6ರಂದು ಸಚಿವ ಚೆರ್ಕಳ ಅಬ್ದುಲ್ಲಶಿಲಾನ್ಯಾಸ ಮಾಡಿದ ಬಸ್‌ ನಿಲ್ದಾಣವನ್ನು 2007ರ ಆಗಸ್ಟ್‌ 11ರಂದು ಕೇಂದ್ರ ಸಚಿವರಾಗಿದ್ದ ಇ. ಅಹಮ್ಮದ್‌ ಅವರು ನಾಡಿಗೆ ಅರ್ಪಿಸಿದ್ದರು.

ಆರಂಭದ ಕೆಲವು ವರ್ಷ ಬಸ್‌ಗಳು ನಿಲ್ದಾಣಕ್ಕೆ ಪ್ರವೇಶಿಸಿದ್ದವು. ಆದರೆ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿಬಳಿಕ ಹಲವು ಬಸ್‌ಗಳು ನಿಲ್ದಾಣಕ್ಕೆ ಪ್ರವೇಶಿಸದಾದವು. ರಸ್ತೆಯನ್ನು ಸಂಚಾರಯೋಗ್ಯಗೊಳಿಸಿದರೂ ಬಸ್‌ಗಳು ನಿಲ್ದಾಣಕ್ಕೆ ಪ್ರವೇಶಿಸದೆ ಓಡಲಾರಂಭಿಸಿದ್ದವು. ಬಸ್‌ ನಿಲ್ದಾಣಕ್ಕೆ ಪ್ರವೇಶಿಸದೆ ಓಡಿದ ಬಸ್‌ಗಳನ್ನು ಹಲವು ಬಾರಿ ನಾಗರಿಕರು, ಪ್ರಯಾಣಿಕರು, ವ್ಯಾಪಾರಿಗಳು ತಡೆದಿದ್ದರು. ಪೊಲೀಸರ ಉಪಸ್ಥಿತಿ ಕಡಿಮೆಯಾಗಿರುವುದರಿಂದ ಬಸ್‌ಗಳು ಬಸ್‌ ನಿಲ್ದಾಣ ಪ್ರವೇಶದಿಂದ ದೂರವಾದವು.

Dubai Businessman: ದುಬೈ ಮಾವನಿಗೆ 107 ಕೋಟಿ ರೂ. ವಂಚಿಸಿದ ಕೇರಳದ ಅಳಿಯ!
ಕೋವಿಡ್‌ ಬಳಿಕ ಬಸ್‌ ನಿಲ್ದಾಣ ಪ್ರವೇಶಿಸುವ ಬಸ್‌ಗಳ ಸಂಖ್ಯೆಯಲ್ಲೂ ಇಳಿಕೆಯುಂಟಾಯಿತು. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲವೊಂದು ಬಸ್‌ಗಳು ಮಾತ್ರ ನಿಲ್ದಾಣಕ್ಕೆ ಪ್ರವೇಶಿಸುತ್ತವೆ. ಬದಿಯಡ್ಕ, ಕುತ್ತಿಕ್ಕೋಲ್‌, ಮುಳ್ಳೇರಿಯ ಭಾಗಗಳಿಗಿರುವ ಪ್ರಯಾಣಿಕರಿಗೆ ಹೆಚ್ಚು ಸಮಯ ಕಾಲ ಬಸ್‌ಗಾಗಿ ಕಾದು ನಿಲ್ಲಬೇಕಾಗುತ್ತದೆ. ಬಸ್‌ಗಳು ನಿಲ್ದಾಣಕ್ಕೆ ಪ್ರವೇಶಿಸುವುದು ಕಡಿಮೆಯಾಗಿರುವುದರಿಂದ ಮೀನು ವ್ಯಾಪಾರಿಗಳು ಮೀನು ವ್ಯಾಪಾರವನ್ನು ಚೆರ್ಕಳ ಪೇಟೆಯ ಪಾಡಿ ರಸ್ತೆ ಸಮೀಪ ಸ್ಥಳಾಂತರಿಸಿದ್ದರು. ಅದು ಸಂಚಾರ ದಟ್ಟಣೆಗೆ ಹಾಗೂ ಹೆದ್ದಾರಿ ಬದಿ ಮಲಿನ ನೀರು ಕಟ್ಟಿ ನಿಲ್ಲಲು ಕಾರಣವಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಬಸ್‌ ನಿಲ್ದಾಣಕ್ಕೆ ಪ್ರವೇಶಿಸದ ಬಸ್‌ಗಳನ್ನು ಗುರುತಿಸಲು ಇತ್ತೀಚೆಗೆ ಚೆರ್ಕಳ ಪೇಟೆಯಲ್ಲಿ ವ್ಯಾಪಾರಿಗಳ ನೇತೃತ್ವದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.


ಜನರ ದೂರು

ಬಸ್‌ ನಿಲ್ದಾಣಕ್ಕೆ ಪ್ರವೇಶಿಸದಿರುವುದರಿಂದ ವ್ಯಾಪಾರದಲ್ಲಿ ಗಣನೀಯವಾದ ಇಳಿಕೆ ಉಂಟಾಗಿದೆ. ಅಂಗಡಿ ಕೊಠಡಿಯ ಬಾಡಿಗೆ ಕೂಡ ಸಮರ್ಪಕವಾಗಿ ನೀಡಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಕೋವಿಡ್‌ ಹಿನ್ನೆಲೆಯಲ್ಲಿತೀವ್ರ ಆರ್ಥಿಕ ಸಂದಿಗ್ಧತೆಯನ್ನು ಎದುರಿಸುತ್ತಿರುವ ವ್ಯಾಪಾರಿಗಳಿಗೆ ಬದುಕು ಕಷ್ಟಸಾಧ್ಯವಾಗಿದೆ.


- ಸಿ.ಎ. ಬಶೀರ್‌, ತರಕಾರಿ ವ್ಯಾಪಾರಿ ಚೆರ್ಕಳ

--------------------------------------
ರಾಷ್ಟ್ರೀಯ ಹೆದ್ದಾರಿಯಿಂದ 300 ಮೀಟರ್‌ ದೂರದಲ್ಲಿರುವ ಜಿಲ್ಲೆಯಲ್ಲೇ ಅತ್ಯಂತ ಸೌಕರ್ಯಗಳಿರುವ ಬಸ್‌ ನಿಲ್ದಾಣದೊಳಗೆ ಬಸ್‌ಗಳು ಬಾರದಿರುವುದು ಪ್ರಯಾಣಿಕರಿಗೆ ಹೆಚ್ಚು ಸಮಸ್ಯೆ ಉಂಟಾಗುತ್ತಿದೆ. ಪೊಲೀಸರು, ಮೋಟಾರ್‌ ವಾಹನ ಇಲಾಖೆ ಕ್ರಮ ಕೈಗೊಂಡರೆ ಇದನ್ನು ತಡೆಗಟ್ಟಲು ಸಾಧ್ಯವಿದೆ. ಅಗತ್ಯ ಸೌಕರ್ಯಗಳಿಲ್ಲದೆ ಮಳೆ, ಬಿಸಿಲಿಗೆ ಹೆದ್ದಾರಿ ಬದಿ ಮಹಿಳೆಯರು, ಮಕ್ಕಳು ಬಸ್‌ಗಾಗಿ ಕಾದು ನಿಲ್ಲಬೇಕಾಗುತ್ತಿದೆ.

- ಸಿ. ಜಾಫರ್‌ ಸಾದಿಕ್‌, ಬಸ್‌ ನಿಲ್ದಾಣ ನಿರ್ಮಿಸಿದ ಸಿ. ಅಬ್ದುಲ್ಲ ಅವರ ಪುತ್ರ
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ