ಆ್ಯಪ್ನಗರ

ಜೇನುನೋಣ ದಾಳಿ: ಮಹಿಳೆ ಮೃತ್ಯು

ಅಡೂರು ಎಡಪರಂಬ ಬಳಿ ಜೇನು ನೋಣಗಳ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆ ಮೃತಟ್ಟಿದ್ದಾರೆ.

Vijaya Karnataka 17 Aug 2018, 5:00 am
ಕಾಸರಗೋಡು: ಅಡೂರು ಎಡಪರಂಬ ಬಳಿ ಜೇನು ನೋಣಗಳ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆ ಮೃತಟ್ಟಿದ್ದಾರೆ.
Vijaya Karnataka Web honey bee attack women death
ಜೇನುನೋಣ ದಾಳಿ: ಮಹಿಳೆ ಮೃತ್ಯು


ಅಡೂರು ಎಡಪರಂಬ ಚೀನಪ್ಪಾಡಿ ನಿವಾಸಿ ರಾಮ ಎಂಬವರ ಪತ್ನಿ ಸುಶೀಲ (60) ಮೃತರು.

ಬುಧವಾರ ಮಧ್ಯಾಹ್ನ ಮನೆ ಬಳಿಯ ತೋಟದಲ್ಲಿ ಹುಲ್ಲು ಸಂಗ್ರಹಿಸುತ್ತಿದ್ದಾಗ ಜೇನುನೋಣ ದಾಳಿ ನಡೆಸಿದೆ. ಬೊಬ್ಬೆ ಕೇಳಿ ತಲುಪಿದ ಊರವರು ಕೂಡಲೇ ಸುಶೀಲ ಅವರನ್ನು ಕಾಸರಗೋಡಿನ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ, ರಾತ್ರಿ ವೇಳೆ ಮೃತಪಟ್ಟರು. ಮೃತದೇಹವನ್ನು ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಚೀನಪ್ಪಾಡಿಯಲ್ಲಿ ಸಂಸ್ಕಾರ ಮಾಡಲಾಯಿತು. ಅವರಿಗೆ ಪತಿ, ನಾಲ್ವರು ಪುತ್ರಿಯರು ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ