ಆ್ಯಪ್ನಗರ

ಕೃಪೇಶ್‌ ಕುಟುಂಬಕ್ಕೆ ಮನೆ ಹಸ್ತಾಂತರ

ಪೆರಿಯಾ ಕಲ್ಯೋಟ್‌ನಲ್ಲಿ ಸಿಪಿಎಂ ಕಾರ್ಯಕರ್ತರಿಂದ ಕೊಲೆಗೀಡಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಪೈಕಿ ಕೃಪೇಶ್‌ ಕುಟುಂಬಕ್ಕೆ ನಿರ್ಮಿಸಲಾದ ಮನೆಯ ಗೃಹ ಪ್ರವೇಶ ಶುಕ್ರವಾರ ನಡೆಯಿತು.

Vijaya Karnataka 20 Apr 2019, 5:00 am
ಕಾಸರಗೋಡು: ಪೆರಿಯಾ ಕಲ್ಯೋಟ್‌ನಲ್ಲಿ ಸಿಪಿಎಂ ಕಾರ್ಯಕರ್ತರಿಂದ ಕೊಲೆಗೀಡಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಪೈಕಿ ಕೃಪೇಶ್‌ ಕುಟುಂಬಕ್ಕೆ ನಿರ್ಮಿಸಲಾದ ಮನೆಯ ಗೃಹ ಪ್ರವೇಶ ಶುಕ್ರವಾರ ನಡೆಯಿತು.
Vijaya Karnataka Web house donated to kripesh family
ಕೃಪೇಶ್‌ ಕುಟುಂಬಕ್ಕೆ ಮನೆ ಹಸ್ತಾಂತರ


ಕಾಂಗ್ರೆಸ್‌ ಶಾಸಕ ಹೈಬಿ ಈಡನ್‌ ತಣಲ್‌ ಯೋಜನೆಯಲ್ಲಿ ನಿರ್ಮಿಸಿದ ಮನೆಯ ಪ್ರವೇಶ ನಡೆಯಿತು. ಪ್ರದೇಶವಾಸಿಗಳು ಸಾನಿಧ್ಯದಲ್ಲಿ ಶುಕ್ರವಾರ ಗೃಹ ಪ್ರವೇಶ ನಡೆಯಿತು.

ಎರ್ನಾಕುಳಂ ಲೋಕಸಭೆ ಕ್ಷೇತ್ರದ ಯುಡಿಎಫ್‌ ಅಭ್ಯರ್ಥಿ, ಶಾಸಕ ಹೈಬಿ ಈಡನ್‌, ಅವರ ಪತ್ನಿ, ಪುತ್ರಿ, ಶಾಸಕ ವಿ.ಡಿ. ಸತೀಶನ್‌, ಕಾಸರಗೋಡು ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌, ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್‌, ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೃಪೇಶ್‌ನೊಂದಿಗೆ ಕೊಲೆಯಾದ ಶರತ್‌ಲಾಲ್‌ನ ತಂದೆ ಸೂರ್ಯನಾರಾಯಣ ಉಪಸ್ಥಿತರಿದ್ದರು. ಕೃಪೇಶ್‌ ನೆನಪುಗಳು ತುಂಬಿದ ವಾತಾವರಣದಲ್ಲಿ ಗೃಹಪ್ರವೇಶ ನಡೆಯಿತು. ಕೃಪೇಶ್‌ ತಂದೆ ಕೃಷ್ಣ, ತಾಯಿ, ಸಹೋದರಿ ಕೃಷ್ಣ ಪ್ರಿಯಾ ಸಹ ಮುಖದಲ್ಲಿ ದುಃಖ ತುಂಬಿಕೊಂಡಿತ್ತು.

ಇದೇ ಸಂದರ್ಭ ಕೊಲೆಯಾದ ಕೃಪೇಶ್‌ ಹಾಗೂ ಶರತ್‌ಲಾಲ್‌ನ ಭಾವಚಿತ್ರವನ್ನು ಮನೆಯವರಿಗೆ ಹಸ್ತಾಂತರಿಸಿದರು. ಗೃಹಪ್ರವೇಶಕ್ಕಾಗಿ ಹಾಲು ಕುದಿಸಿ ವಿತರಿಸಿ, ಅಪ್ಪ ವಿತರಿಸಿ ಆಡಂಭರವಿಲ್ಲದೆ ಗೃಹಪ್ರವೇಶ ನಡೆಯಿತು. ಕೃಪೇಶ್‌ನ ಆಗ್ರಹದಂತೆ ಸುರಕ್ಷಿತ ಮನೆ ಕಟ್ಟುವ ಕನಸು ನನಸಾಗಿದೆ. ಅದರಂತೆ ಶೌಚಾಲಯ ಹೊಂದಿರುವ ಮೂರು ಬೆಡ್‌ರೂಂ, ಹಾಲ್‌, ಅಡುಗೆ ಮನೆ ಸಹ ಹೊಂದಿದೆ. ಮನೆ ನಿರ್ಮಾಣ 20 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. 1300 ಚದರಡಿಯ ಮನೆಯಾಗಿದೆ. ಶಾಸಕ ಹೈಬಿ ಈಡನ್‌ ತಣಲ್‌ ಯೋಜನೆಯಲ್ಲಿ ನಿರ್ಮಿಸುವ 30ನೇ ಮನೆ ಇದಾಗಿದೆ. ಶಾಸಕ ಹೈಬಿ ಈಡನ್‌ ಹುಟ್ಟುಹಬ್ಬವಾದ ಶುಕ್ರವಾರ ಕೃಪೇಶ್‌ ಕುಟುಂಬ ಗೃಹಪ್ರವೇಶ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ