ಆ್ಯಪ್ನಗರ

ಎರಡು ವರ್ಷಗಳಲ್ಲಿ ಮಲೆನಾಡು ಹೆದ್ದಾರಿ ಪೂರ್ಣ: ಸಚಿವ ಸುಧಾಕರನ್‌

ಎಲ್ಲರಿಗೂ ಉಪಯುಕ್ತವಾಗುವಂತಹ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಿ ಆ ಮೂಲಕ ಕೇರಳೀಯ ಸಮೂಹದ ಆಧುನೀಕರಣವನ್ನು ಸರಕಾರ ಉದ್ದೇಶಿಸಿದೆ ಎಂದ ಲೋಕೋಪಯೋಗಿ, ರಿಜಿಸ್ಪ್ರೇಶನ್‌ ಇಲಾಖೆ ಸಚಿವ ಜಿ. ಸುಧಾಕರನ್‌ ಹೇಳಿದರು.

Vijaya Karnataka 17 Dec 2018, 5:00 am
ಕಾಸರಗೋಡು: ಎಲ್ಲರಿಗೂ ಉಪಯುಕ್ತವಾಗುವಂತಹ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಿ ಆ ಮೂಲಕ ಕೇರಳೀಯ ಸಮೂಹದ ಆಧುನೀಕರಣವನ್ನು ಸರಕಾರ ಉದ್ದೇಶಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕಂಡುಬರುವ ನಾನಾ ಸಾಮಾಜಿಕ-ರಾಜಕೀಯ ಸಮಸ್ಯೆಗಳು ತಾತ್ಕಾಲಿಕವಾಗಿದ್ದು, ಜನರಿಗೆ ಉಪಯುಕ್ತವಾಗುವಂತಹ ಅಭಿವೃದ್ಧಿ ಯೋಜನೆಗಳ ಮೂಲಕ ಮಾತ್ರವೇ ಶಾಶ್ವತ ಅಭಿವೃದ್ಧಿ ಸಾಧ್ಯ ಸುತ್ತಿರುವುದಾಗಿ ಲೋಕೋಪಯೋಗಿ, ರಿಜಿಸ್ಪ್ರೇಶನ್‌ ಇಲಾಖೆ ಸಚಿವ ಜಿ. ಸುಧಾಕರನ್‌ ಹೇಳಿದರು.
Vijaya Karnataka Web in two yaers malnadu highway complete sudhakaran
ಎರಡು ವರ್ಷಗಳಲ್ಲಿ ಮಲೆನಾಡು ಹೆದ್ದಾರಿ ಪೂರ್ಣ: ಸಚಿವ ಸುಧಾಕರನ್‌


ಮಲೆನಾಡು ಹೆದ್ದಾರಿಯ ಉತ್ತರದಲ್ಲಿರುವ ಕಾಸರಗೋಡು ಜಿಲ್ಲೆಯ ನಂದರಪದವಿನಿಂದ ಚೇವಾರು ವರೆಗಿನ ಕಾಮಗಾರಿಯ ನಿರ್ಮಾಣೋದ್ಘಾಟನೆಯನ್ನು ಭಾನುವಾರ ಪೈವಳಿಕೆಯಲ್ಲಿ ನೆರವೇರಿಸಿ ಮಾತನಾಡಿದರು.

ಮಲೆನಾಡು ವಲಯದಲ್ಲಿ ನಾನಾ ಪ್ರದೇಶಗಳನ್ನು ಜೋಡಿಸುವ ಮಲೆನಾಡು ಹೆದ್ದಾರಿ ನಮ್ಮ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವ್ಯವಹಾರಗಳನ್ನು ವಿಫುಲಗೊಳಿಸಲು ನೆರವಾಗಲಿದೆ. 45 ಹಂತಗಳಲ್ಲಿ ನಿರ್ಮಾಣ ನಡೆಯಲಿರುವ ಮಲೆನಾಡು ಹೆದ್ದಾರಿಯ ಮೊದಲ 18 ಹಂತಗಳ ಪ್ರಾರಂಭಿಕ ಪ್ರಕ್ರಿಯೆಗಳು ಡಿಸೆಂಬರ್‌ನೊಳಗೆ ಪೂರ್ತಿಯಾಗಲಿವೆ. ಉಳಿದ ಸ್ಥÜಳಗಳ ನಿರ್ಮಾಣ ಕಾಮಗಾರಿಗಳು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳ ಬಿಟ್ಟುಕೊಟ್ಟರೆ ಶೀಘ್ರ ಆರಂಭಿಸಲಾಗುವುದು ಎಂದರು.

ಕೇರಳದ ಉತ್ತರ ಹಾಗೂ ದಕ್ಷಿಣ ಭಾಗವನ್ನು ಸಂಯೋಜಿಸಲು ಕರಾವಳಿ ಹೆದ್ದಾರಿ, ಇದೇ ಸಂದರ್ಭ ರಾ‚ಟ್ರೀಯ ಹೆದ್ದಾರಿಯ ಕಾಮಗಾರಿಗಳು ಅಭಿವೃದ್ಧಿ ಹಂತದಲ್ಲಿವೆ. ಪ್ರಾರಂಭಿಕ ಪ್ರಕ್ರಿಯೆಗಳೆಲ್ಲ ಪೂರ್ತಿಗೊಳಿಸಿದ ರಾಷ್ಟ್ರೀಯ ಹೆದ್ದಾರಿಯ ಕಾಸರಗೋಡು ಜಿಲ್ಲೆಯ ಟೆಂಡರ್‌ ಪ್ರಕ್ರಿಯೆಗಳು ಕೇಂದ್ರ ಸರಕಾರದ ಮಂದಗತಿ ನೀತಿಯಿಂದ ವಿಳಂಬಗೊಳ್ಳುತ್ತಿದೆ. ನವೆಂಬರ್‌ನಲ್ಲಿ ತಲಶ್ಯೇರಿ-ಮಾಹಿ ಬೈಪಾಸ್‌ ಉದ್ಘಾಟನೆಗೆ ತಲುಪಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ ಪ್ರಕಾರ ಜನವರಿಯಲ್ಲಿ ಟೆಂಡರ್‌ ತೆರೆಯುವ ನಿರೀಕ್ಷೆಯಿದೆ ಎಂದರು.

ಪೈವಳಿಕೆ ಪಂಚಾಯಿತಿ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್‌ ಪಂಚಾಯಿತಿ ಅಧ್ಯಕ್ಷ ಎ. ಕೆ. ಎಂ. ಅಶ್ರಫ್‌, ಮಾಜಿ ಶಾಸಕ ಸಿ.ಎಚ್‌. ಕುಞಂಬು, ಚೀಫ್‌ ಎಂಜಿನಿಯರ್‌ ವಿ.ವಿ. ಬಿನು, ಪೈವಳಿಕೆ ಪಂಚಾಯಿತಿ ಉಪಾಧ್ಯಕ್ಷೆ ಸುನಿತ ವಲ್ಟಿ ಡಿಸೋಜ ಮಂಜೇಶ್ವರ ಬ್ಲಾಕ್‌ ಪಂಚಾಯಿತಿ ಸದಸ್ಯ ಕೆ. ಆರ್‌. ಜಯಾನಂದ, ಪೈವಳಿಕೆ ಪಂಚಾಯಿತಿ ಸದಸ್ಯೆ ರಾಬಿಯ ಟೀಚರ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಕೆ. ವಿ. ವಿನೋದ್‌ ಕುಮಾರ್‌ ಮತ್ತಿತರರು ಮಾತನಾಡಿದರು,

ಜಿಲ್ಲೆಯ ಅಭಿವೃದ್ಧಿಗೆ ಬರುತ್ತಿದೆ ಮಲೆನಾಡು ಹೈವೆ: ವರ್ಷಗಳಿಂದ ಮುಂದುವರಿಯುತ್ತಿರುವ ಸಾಮಾಜಿಕ-ಆರ್ಥಿಕ ಹಿಂದುಳಿದಾವಸ್ಥೆಯಿಂದ ಜಿಲ್ಲೆಯ ಉತ್ತರ ವಲಯವನ್ನು ಅಭಿವೃದ್ಧಿಗೇರಿಸಲು ಮಲೆನಾಡು ಹೆದ್ದಾರಿ ಬರುತ್ತಿದೆ. ಕಾಸರಗೋಡು-ನಂದರಪದವಿನಿಂದ ತಿರುವನಂತಪುರ ಪಾರಶಾಲೆ ವರೆಗೆ 1251 ಕಿಲೋಮೀಟರ್‌ ದೀರ್ಘವಿರುವ ಮಲೆನಾಡು ಹೆದ್ದಾರಿ ತುಳುನಾಡಿನ ಜನತೆಗೆ ಅನಂತವಾದ ಅಭಿವೃದ್ಧಿ ನಿರೀಕ್ಷೆಗಳನ್ನು ನೀಡುತ್ತಿದೆ. ಸಾಮಾಜಿಕ-ಆರ್ಥಿಕ ವ್ಯವಹಾರಗಳಿಗಾಗಿ ಬೇರೆ ಪ್ರದೇಶಗಳಿಗೆ ತಲುಪಲು ಸಂಚಾರದಟ್ಟಣೆಯಿರುವ ರಾಷ್ಟ್ರೀಯ ಹೆದ್ದಾರಿ ಆಶ್ರಯಿಸುವ ಬದಲು ಬಹುಭಾಷಾ ಪ್ರದೇಶಕ್ಕೆ ಮಲೆನಾಡು ಹೆದ್ದಾರಿ ಹೊಸ ದಾರಿಯನ್ನು ತೆರೆಯಲಿದೆ.

ಕೇರಳ ಸರಕಾರದ ಸಕಾಲಿಕ ಪ್ರಾಧನ್ಯತೆಯಿರುವ, 2017-18ರ ಮುಂಗಡಪತ್ರದಲ್ಲಿ ಘೋಷಿಸಿ ಆದೇಶ ಹೊರಡಿಸಿದ ಈ ಯೋಜನೆಗೆ 3500 ಕೋಟಿ ರೂ. ಮೀಸಲಿರಿಸಲಾಗಿದೆ. ಮಂಜೇಶ್ವರ ವಿಧಾನಸಭೆಯಲ್ಲಿ ನಂದರಪದವಿನಿಂದ ಆರಂಭಗೊಂಡು ಚೇವಾರಿನಲ್ಲಿ ಕೊನೆಗೊರ್ಳಳುವ ಮಲೆನಾಡು ಹೆದ್ದಾರಿಯ ಈ ಭಾಗಕ್ಕಿರುವ ರಸ್ತೆ ನಿರ್ಮಾಣಕ್ಕೆ ಕೇರಳ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ ಬೋರ್ಡ್‌(ಕಿಫ್‌ಬಿ) 54.76ಕೋಟಿ ರೂ.ವನ್ನು ಮೀಸಲಿರಿಸಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ವರ್ಕಾಡಿ, ಮೀಂಜ, ಪೈವಳಿಕೆ ಎಂಬೀ ಮೂರು ಪಂಚಾಯಿತಿಗಳ ಮೂಲಕ ಮಲೆನಾಡು ಹೆದ್ದಾರಿ ಹಾದುಹೋಗಲಿದೆ. 7 ಮೀಟರ್‌ ವಾಹನ ಹೆದ್ದಾರಿ, ಇಕ್ಕೆಲಗಳಲ್ಲಿ ತಲಾ ಒಂದು ಮೀಟರ್‌ ಫುಟ್‌ಪಾತ್‌ ಸಹಿತ 9 ಮಿಟರ್‌ ಅಗಲದಲ್ಲಿ ಮಲೆನಾಡು ಹೆದ್ದಾರಿ ನಿರ್ಮಿಸಲಾಗುವುದು. ಚೇವಾರು ವರೆಗಿನ 23 ಕಿಲೋ ಮೀಟರ್‌ನಲ್ಲಿ 43 ಕಲ್ವರ್ಟರ್‌ಗಳನ್ನು ನವೀಕರಿಸಿ ನಿರ್ಮಿಸಲಿದ್ದು, ಎಂಟು ಕಲ್ವರ್ಟರ್‌ಗಳನ್ನು ಹೊಸದಾಗಿ ನಿರ್ಮಿಸಲಾಗುವುದು ಎಂದು ಲೋಕೋಪಯೋಗಿ(ರಸ್ತೆ) ಸಹಾಯಕ ಎಂಜಿನಿಯರ್‌ ಎಂ. ಪ್ರೇಮ್‌ಕುಮಾರ್‌ ಹೇಳಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ