ಆ್ಯಪ್ನಗರ

ರಾಜ್ಯದಲ್ಲಿ ಬರಲಿದೆ ಇಂಟಗ್ರೇಟೆಡ್‌ ಡಿಜಿಟಲ್‌ ಟ್ರಾಫಿಕ್‌ ವ್ಯವಸ್ಥೆ

ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರಿಗೆ ಎಚ್ಚರ! ಪೊಲೀಸರ ಕಣ್ಣಿಗೆ ಬೀಳದೆ ಪಾರಾಗಬಹುದು ಎಂದುಕೊಳ್ಳಬೇಡಿ. ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿ ಬೀಳುವಿರಿ ಜಾಗ್ರತೆ. ದಂಡ ಕೂಡಾ ತೆರವೇಕಾದೀತು.

Vijaya Karnataka 14 Oct 2018, 3:38 pm
ಕಾಸರಗೋಡು : ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರಿಗೆ ಎಚ್ಚರ! ಪೊಲೀಸರ ಕಣ್ಣಿಗೆ ಬೀಳದೆ ಪಾರಾಗಬಹುದು ಎಂದುಕೊಳ್ಳಬೇಡಿ. ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿ ಬೀಳುವಿರಿ ಜಾಗ್ರತೆ. ದಂಡ ಕೂಡಾ ತೆರವೇಕಾದೀತು.
Vijaya Karnataka Web intagrated digital traffic system at kerala
ರಾಜ್ಯದಲ್ಲಿ ಬರಲಿದೆ ಇಂಟಗ್ರೇಟೆಡ್‌ ಡಿಜಿಟಲ್‌ ಟ್ರಾಫಿಕ್‌ ವ್ಯವಸ್ಥೆ


ಸಂಪೂರ್ಣವಾಗಿ ತಂತ್ರಜ್ಞಾನದ ಸಹಾಯದೊಂದಿಗೆ ಟ್ರಾಫಿಕ್‌ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚುವ ಇಂಟಗ್ರೇಟೆಡ್‌ ಡಿಜಿಟಲ್‌ ಟ್ರಾಫಿಕ್‌ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. 180 ಕೋಟಿ ರೂ.ನ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಜಾರಿಗೊಳಿಸಲಾಗುವುದು.

ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದರ ಅಂಗವಾಗಿ ಮಟಗ್ರೇಟೆಡ್‌ ಡಿಜಿಟಲ್‌ ಟ್ರಾಫಿಕ್‌ ವ್ಯವಸ್ಥೆಯನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿ ಟ್ರಾಫಿಕ್‌ ಐಜಿ ಅವರ ನೇತೃತ್ವದಲ್ಲಿ ರಚಿಸಿದ ಏಳು ಮಂದಿ ಸದಸ್ಯರಿರುವ ತಂಡದ ವರದಿಯನ್ನು ಪರಿಗಣಿಸಿ ಯೋಜನೆಗೆ ಇಲಾಖೆ ಅನುಮತಿ ನೀಡಿದೆ. ವರದಿಯನ್ನು ರಾಜ್ಯ ಪೊಲೀಸ್‌ ಮುಖ್ಯಸ್ಥರು ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಅಪಘಾತ ಕಡಿಮೆ ಮಾಡುವುದರೊಂದಿಗೆ ಕಾನೂನು ಉಲ್ಲಂಘಿಸುವವರಿಂದ ದಂಡ ವಸೂಲಿಯನ್ನು ಹೆಚ್ಚಿಸಿ ಸರಕಾರದ ಕಂದಾಯ ಆದಾಯ ಹೆಚ್ಚಿಸಲು ಈ ವ್ಯವಸ್ಥೆಯಿಂದ ಸಾಧ್ಯವಾಗಲಿದೆ. ನಗರ ಪ್ರದೇಶಗಳ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಗಳು ಸಂಪೂರ್ಣವಾಗಿ ಕ್ಯಾಮೆರಾ ನಿರೀಕ್ಷಣೆಯಲ್ಲಿರುವವು. ಅಪಾಯ ಹಾಗೂ ಅತಿಯಾದ ವೇಗದ ಸಾಧ್ಯತೆ ಇರುವ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ರೆಡ್‌ಲೈಟ್‌ ಕ್ಯಾಮೆರಾ ಇನ್ನೊಂದು ಪ್ರತ್ಯೇಕತೆಯಾಗಿದೆ. ರೆಡ್‌ಲೈಟ್‌ ಸಿಗ್ನಲ್‌ ಉಲ್ಲಂಘಿಸಿದರೆ ಶೀಘ್ರ ಕ್ಯಾಮೆರಾ ಮಾಹಿತಿ ನೀಡಲಿದೆ. ಅಮಿತ ವೇಗ, ರೆಡ್‌ಲೈಟ್‌ ಸಿಗ್ನಲ್‌ ಉಲ್ಲಂಘನೆ, ಹೆಲ್ಮೆಟ್‌ ಇಲ್ಲದ ದ್ವಿಚಕ್ರವಾಹನ ಪ್ರಯಾಣ ಕ್ಯಾಮೆರಾದಲ್ಲಿ ಸೆರೆಯಾದರೆ ಕೇಂದ್ರೀಕೃತ ನಿಯಂತ್ರಣ ಕೊಠಡಿಗೆ ತಲುಪಲಿದೆ. ಇಲ್ಲಿಂದ ಕಾನೂನು ಉಲ್ಲಂಘಿಸಿದ ವಾಹನ ಮಾಲೀಕರಿಗೆ ದಂಡ ನೊಟೀಸ್‌ ಕಳುಹಿಸಲಾಗುವುದು. ದಂಡ ಪಾವತಿಸಲು ಏಕೀಕೃತ ಚಲಾನ್‌ ವ್ಯವಸ್ಥೆಯನ್ನು ಮಾಡಲಾಗುವುದು. ಯೋಜನೆ ಜಾರಿಗೆ ಶೀಘ್ರ ಜಾಗತಿಕ ಟೆಂಡರ್‌ ಆಹ್ವಾನಿಸಲಾಗುವುದು.

ರಾಜ್ಯದಲ್ಲಿ ವಾಹನ ಅಪಘಾತಗಳು, ಸಾರಿಗೆ ನಿಯಮ ಉಲ್ಲಂಘನೆಗಳು ಹೆಚ್ಚಿದ ಹಿನ್ನ್ನೆಲೆಯಲ್ಲಿ ಕಾನೂನು ಉಲ್ಲಂಘಣೆಯ ಪತ್ತೆಯನ್ನು ಸಂಪೂರ್ಣವಾಗಿ ಡಿಜಿಟಲ್‌ ರೂಪಕ್ಕೆ ಮಾರ್ಪಾಡುಗೊಳಿಸಲಿರುವ ಪ್ರಯತ್ನವನ್ನು ಇಲಾಖೆ ಆರಂಭಿಸಿದೆ.

ಇದೀಗ ಪೊಲೀಸರು ನಡೆಸುವ ತಪಾಸಣೆಯಿಂದ ಮಾತ್ರವೇ ಮುಖ್ಯವಾಗಿ ಕಾನೂನು ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡಲಾಗುತ್ತಿದೆ. ವಾಹನ ತಪಾಸಣೆಯ ವಿರುದ್ಧ ಇದೀಗ ಪ್ರತಿಭಟನೆ ಮೂಡಿದ್ದರಿಂದ ಪೊಲೀಸರಿಗೆ ನಿಖರವಾದ ತಪಾಸಣೆ ನಡೆಸಲಾಗಲಿ, ಕ್ರಮ ಕೈಗೊಳ್ಳಲಾಗಲಿ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಸಂಪೂರ್ಣವಾಗಿ ಮಾನವೀಯ ಮಧ್ಯಸ್ಥಿಕೆಗಳಿಲ್ಲದೆ ವಾಹನ ತಪಾಸಣೆ ಜಾರಿಗೊಳಿಸಲು ರಾಜ್ಯ ಸಜ್ಜಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ