ಆ್ಯಪ್ನಗರ

ಕಾಸರಗೋಡು ಸಿಪಿಸಿಆರ್‌ಐಯಲ್ಲಿ ಕೊಕ್ಕೋ ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ

ಏಷ್ಯಾ ಮತ್ತು ಪೆಸಿಫಿಕ್‌ ಖಂಡಗಳ ಕೊಕ್ಕೋ ತಳಿ ಸಂಶೋಧಕರ ಒಂದು ವಾರದ ಕಾರ್ಯಾಗಾರಕ್ಕೆ ಕಾಸರಗೋಡು ಸಿಪಿಸಿಆರ್‌ಐಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.

Vijaya Karnataka Web 21 May 2019, 3:50 pm
ಕಾಸರಗೋಡು: ಏಷ್ಯಾ ಮತ್ತು ಪೆಸಿಫಿಕ್‌ ಖಂಡಗಳ ಕೊಕ್ಕೋ ತಳಿ ಸಂಶೋಧಕರ ಒಂದು ವಾರದ ಕಾರ್ಯಾಗಾರಕ್ಕೆ ಕಾಸರಗೋಡು ಸಿಪಿಸಿಆರ್‌ಐಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.
Vijaya Karnataka Web international koko workshop held in cpcri
ಕಾಸರಗೋಡು ಸಿಪಿಸಿಆರ್‌ಐಯಲ್ಲಿ ಕೊಕ್ಕೋ ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ


ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎನ್‌. ಕುಮಾರ್‌ ಕಾರಾರ‍ಯಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಹೆಚ್ಚು ಇಳುವರಿ ನೀಡುವ ಹಾಗೂ ರೋಗ, ಕೀಟ ಪ್ರತಿರೋಧಕ ಹೈಬ್ರಿಡ್‌ಗಳ ಉತ್ಪಾದನೆ ಹಾಗೂ ಪರಸ್ಪರ ದೇಶಗಳ ಮಧ್ಯೆ ಇವುಗಳ ವಿನಿಮಯಕ್ಕಾಗಿ ಕೃಷಿಕರಿಗೆ ವಿತರಣೆಗಾಗಿ ಸ್ಥಳೀಯ ಗಿಡ ಉತ್ಪಾದಿಸುವ ಕುರಿತು ತಿಳಿಸಿದರು.

ಅಧ್ಯಕ್ಷ ತೆ ವಹಿಸಿದ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ. ವೆಂಕಟೇಶ್‌ ಹುಬ್ಬಳ್ಳಿ ಮಾತನಾಡಿ, ಅಂತಾರಾಷ್ಟ್ರೀಯ ಸಹಭಾಗಿಗಳ ಗಮನಕ್ಕೆ ಭಾರತದ ಕೊಕ್ಕೋ ಬೀಜದ ಗುಣಮಟ್ಟ ಅತ್ಯುತ್ತಮವಾಗಿದ್ದರೂ, ಸಂಸ್ಕರಣೆ ಹೆಚ್ಚಳ ಅವಶ್ಯಕವಿದ್ದು, ಕೃಷಿಕರ ತರಬೇತಿಯ ಮೂಲಕ ಸಂಸ್ಕರಿಸಲ್ಪಟ್ಟ ಬೀಜದ ಗುಣಮಟ್ಟವನ್ನೂ ಉತ್ತಮಪಡಿಸಲಾಗುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಡಾ. ಸ್ಮಿಲ್ಜಾ ಲಾಂಬಟರ್‌, ಶಂಕರನಾರಾಯಣ ಭಟ್‌, ಡಾ. ಎಚ್‌.ಪಿ. ಮಹೇಶ್ವರಪ್ಪ, ಡಾ. ಜೆ. ದಿಲೀಪ್‌ ಬಾಬು ಮತ್ತಿತರರು ಶುಭ ಹಾರೈಸಿದರು. ಕೇರಳ ಕೃಷಿ ವಿಶ್ವವಿದ್ಯಾಲಯ, ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಆಂಧ್ರ ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧಕರು, ಆಸ್ಪ್ರೇಲಿಯಾ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್‌, ವಿಯೆಟ್ನಾಂ, ಅಮೆರಿಕ, ಬೆಲ್ಜಿಯಂ ದೇಶಗಳಿಂದ 13 ಹಾಗೂ ಸಿಪಿಸಿಆರ್‌ಐ ವಿಜ್ಞಾನಿಗಳು ಭಾಗವಹಿಸುತ್ತಿದ್ದಾರೆ.

ಭೂಗೋಳಿಕವಾಗಿ ಕೊಕ್ಕೋ ವಲಯದ ಸಾಮರ್ಥ್ಯ‌ ಹಾಗೂ ದೌರ್ಬಲ್ಯಗಳ ಮೌಲ್ಯಮಾಪನಕ್ಕಾಗಿ ನಾನಾ ದೇಶಗಳ ಪ್ರಸ್ತುತ ಕಾರ್ಯಕ್ರಮಗಳ ಅವಲೋಕನ, ಕೊಕ್ಕೋಗೆ ಈಗ ಬಾಧಿಸುತ್ತಿರುವ ಕೀಟ-ರೋಗಗಳ ವಿವರಣೆ ಹಾಗೂ ಮುಂಬರುವ ಹವಾಮಾನದ ಏರುಪೇರಿನಿಂದ ರೋಗ-ಕೀಟ ಬಾಧೆಯಿಂದ ಸಂರಕ್ಷ ಣೆಗೆ ರೂಪುರೇಷೆಗಳ ತಯಾರಿ, ಸಾಮಾಜಿಕ ಹಾಗೂ ಆರ್ಥಿಕ ಸವಲತ್ತುಗಳು, ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕಾರ್ಯವೈಖರಿ, ಸಂಶೋಧನಾ ಒಡಂಬಡಿಕೆಯ ಸಾಧ್ಯತೆಗಳು ಹಾಗೂ ಭಾರತದಲ್ಲಿ ಹೆಚ್ಚುವರಿ ಪರಿಶೀಲನೆಗಳ ಪ್ರಾರಂಭ ಕುರಿತಾದ ಚರ್ಚೆ ಹಾಗೂ ವಿಟ್ಲ ಸಿಪಿಸಿಆರ್‌ಐಯ ಸಂಶೋಧನಾ ಕ್ಷೇತ್ರ, ಕಿದು ಸಿಪಿಸಿಆರ್‌ಐಯ ಕೃಷಿ ಕ್ಷೇತ್ರ ಹಾಗೂ ಕ್ಯಾಂಪ್ಕೋ ಸಂಸ್ಕರಣಾ ಕ್ಷೇತ್ರಗಳಿಗೆ ಭೇಟಿ ನೀಡಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ