ಆ್ಯಪ್ನಗರ

ಕಡಂಬಾರು ಶ್ರೀಕ್ಷೇತ್ರ ಪುನರ್‌ನಿರ್ಮಾಣಕ್ಕೆ ಶಿಲಾಕಲ್ಲು ಮೆರವಣಿಗೆ

ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಜಿರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಶಿಲಾಮಯ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪ ನಿರ್ಮಾಣಕ್ಕಾಗಿರುವ ಪ್ರಥಮ ಹಂತದ ...

Vijaya Karnataka 12 Feb 2019, 5:00 am
ಉಪ್ಪಳ: ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಜಿರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಶಿಲಾಮಯ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪ ನಿರ್ಮಾಣಕ್ಕಾಗಿರುವ ಪ್ರಥಮ ಹಂತದ ಶಿಲಾಕಲ್ಲನ್ನು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ವಾದ್ಯಘೋಷ ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ತರಲಾಯಿತು. ಕಾರ್ಯಕ್ರಮದ ಅಂಗವಾಗಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ತಿರುಮಲೇಶ ಆಚಾರ್ಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೇಸರ ಎಸ್‌.ಎನ್‌. ಭಟ್‌ ಕಡಂಬಾರ್‌ ತೆಂಗಿನಕಾಯಿ ಒಡೆಯುವ ಮೂಲಕ ಶಿಲಾಕಲ್ಲಿನ ಮೆರವಣಿಗೆಗೆ ಚಾಲನೆ ನೀಡಿದರು.
Vijaya Karnataka Web kadambaru temple shilakallu procession
ಕಡಂಬಾರು ಶ್ರೀಕ್ಷೇತ್ರ ಪುನರ್‌ನಿರ್ಮಾಣಕ್ಕೆ ಶಿಲಾಕಲ್ಲು ಮೆರವಣಿಗೆ


ಈ ವೇಳೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರಧಾನ ಕಾರ‍್ಯದರ್ಶಿ ಆದರ್ಶ್‌ ಬಿ.ಎಂ. ಹಾಗೂ ಧಾರ್ಮಿಕ ಮುಖಂಡರುಗಳು, ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಸೇವಾ ಸ್ಥೂರ್ತಿ, ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡರು. ಶೋಭಾಯಾತ್ರೆಯಲ್ಲಿ ವಾದ್ಯಘೋಷ, ಚೆಂಡೆ ವಾದನ, ನಾಸಿಕ್‌ ಬಾಂಡ್‌ ಮೆರಗು ನೀಡಿತು. ಗ್ರಾಮಸ್ಥರು ಪುಷ್ಪ ಸರ್ಮಪಣೆ ಮಾಡಿದರು. ಶಿಲಾಮಯ ಮೆರವಣಿಗೆ ಕ್ಷೇತ್ರಕ್ಕೆ ತಲುಪಿದಾಗ ಕ್ಷೇತ್ರದ ತಂತ್ರಿವರ್ಯರಾದ ವರ್ಕಾಡಿ ದಿನೇಶ್‌ ಕೃಷ್ಣ ತಂತ್ರಿ ಶಿಲಾಮಯ ಕಲ್ಲಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶ ದಿನಾಚರಣೆ ಮತ್ತು ವರ್ಷಾವಧಿ ಉತ್ಸವ ಫೆ.13 ಹಾಗೂ 14ರಂದು ನಾನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ