ಆ್ಯಪ್ನಗರ

ಕಾಞಂಗಾಡು-ಕಾಣಿಯೂರು ರೈಲು ಮಾರ್ಗ ಕಾರ್ಯಗತಗೊಳಿಸಲು ಕ್ರಮ: ಉಣ್ಣಿತ್ತಾನ್‌

ಉತ್ತರ ಕೇರಳದ ಅಭಿವೃದ್ಧಿಗೆ ಮೈಲುಗಲ್ಲಾಗಿ ಮಾರ್ಪಾಡುಗೊಳ್ಳಲು ಸಾಧ್ಯವಿರುವ ಕಾಞಂಗಾಡು-ಪಾಣತ್ತೂರು ಕಾಣಿಯೂರು ರೈಲುಮಾರ್ಗ ಕಾರ್ಯಗತಗೊಳಿಸಲು ಅಗ್ರ ಪಂಕ್ತಿಯಲ್ಲಿ ಕಾರ್ಯವೆಸಗುವೆ ಎಂದು ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಹೇಳಿದರು.

Vijaya Karnataka 10 Jun 2019, 5:00 am
ಕಾಸರಗೋಡು: ಉತ್ತರ ಕೇರಳದ ಅಭಿವೃದ್ಧಿಗೆ ಮೈಲುಗಲ್ಲಾಗಿ ಮಾರ್ಪಾಡುಗೊಳ್ಳಲು ಸಾಧ್ಯವಿರುವ ಕಾಞಂಗಾಡು-ಪಾಣತ್ತೂರು ಕಾಣಿಯೂರು ರೈಲುಮಾರ್ಗ ಕಾರ್ಯಗತಗೊಳಿಸಲು ಅಗ್ರ ಪಂಕ್ತಿಯಲ್ಲಿ ಕಾರ್ಯವೆಸಗುವೆ ಎಂದು ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಹೇಳಿದರು.
Vijaya Karnataka Web kangangadu kaniyuru rail track
ಕಾಞಂಗಾಡು-ಕಾಣಿಯೂರು ರೈಲು ಮಾರ್ಗ ಕಾರ್ಯಗತಗೊಳಿಸಲು ಕ್ರಮ: ಉಣ್ಣಿತ್ತಾನ್‌


ಕಾಞಂಗಾಡು ನಗರ ಅಭಿವೃದ್ಧಿ ಕ್ರಿಯಾ ಸಮಿತಿ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಣಿಯೂರು ರೈಲುಮಾರ್ಗ ಯೋಜನೆಯ ಯೋಜನಾ ಅನುದಾನ ನೀಡಲು ಒಪ್ಪಿಗೆ ಸೂಚಿಸಿ ರಾಜ್ಯ ಸರಕಾರ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಪತ್ರ ನೀಡಿದೆ. ಆದರೆ ರೈಲು ಮಾರ್ಗಕ್ಕಾಗಿ ಸ್ವಾಧೀನಪಡಿಸುವ ಭೂಮಿ ಬೆಲೆಯ ಅರ್ಧದಷ್ಟು ಮಾತ್ರ ನೀಡುವುದಾಗಿ ರಾಜ್ಯ ಸರಕಾರ ವ್ಯಕ್ತಪಡಿಸಿರುವುದಾಗಿ ಉಣ್ಣಿತ್ತಾನ್‌ ಹೇಳಿದ್ದಾರೆ. ಇಂಡಿಯನ್‌ ರೈಲ್ವೆಯೊಂದಿಗೆ ರಾಜ್ಯ ಸರಕಾರ ಸಹಿ ಹಾಕಿದ ಸಂಯುಕ್ತ ಒಪ್ಪಂದದಲ್ಲಿ ಕಾಣಿಯೂರು ಒಳಪಟ್ಟಿಲ್ಲ ಎಂದು ಉಣ್ಣಿತ್ತಾನ್‌ ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರನ್ನು ಕಂಡು ಸರಕಾರದ ತೀರ್ಮಾನದಲ್ಲಿ ಸ್ಪÜಷ್ಟತೆ ತರಲಾಗುವುದು. ಜತೆಗೆ ಕರ್ನಾಟಕದ ಮುಖ್ಯಮಂತ್ರಿಯವರನ್ನು ಕಂಡು ಯೊಜನೆಯ ಅರ್ಧ ಅನುದಾನ ನೀಡಲಿರುವ ತೀರ್ಮಾನ ಕೈಗೊಳ್ಳಲು ಒತ್ತಡ ಹೇರಲಾಗುವುದು.

ದಿಲ್ಲಿಯಲ್ಲಿ ರೈಲ್ವೆ ಸಚಿವ ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷ ರು ಮತ್ತಿತರರನ್ನು ಭೇಟಿ ಮಾಡಿ ಕಾಣಿಯೂರು ರೈಲು ಮಾರ್ಗ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಣ್ಣಿತ್ತಾನ್‌ ಭರವಸೆ ನೀಡಿದರು.

ಅಂತ್ಯೋದಯ ಎಕ್ಸ್‌ಪ್ರೆಸ್‌ ಮತ್ತಿತರ ರೈಲುಗಳಿಗೆ ಕಾಞಂಗಾಡಿನಲ್ಲಿ ಸ್ಟಾಪ್‌ ಮಂಜೂರುಗೊಳಿಸುವ ಕ್ರಿಯಾ ಸಮಿತಿಯ ಬೇಡಿಕೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. ಎ ಗ್ರೇಡ್‌ ನಿಲ್ದಾಣವಾದ ಕಾಞಂಗಾಡಿನ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎ ಗ್ರೇಡ್‌ ನಿಲ್ದಾಣವನ್ನು ಎಲ್ಲ ವಿಧದಲ್ಲಿ ಸಂಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಉಣ್ಣಿತ್ತಾನ್‌ ಹೇಳಿದರು.

ಕಾಞಂಗಾಡು ರೈಲು ನಿಲ್ದಾಣದಲ್ಲಿ ಈಗ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರಗೊಳಿಸಲು ಹಸ್ತಕ್ಷೇಪ ನಡೆಸಬೇಕು ಎಂದು ಅಭಿವೃದ್ಧಿ ಸಮಿತಿ ಆಗ್ರಹಿಸಿತು.

ನಗರ ಅಭಿವೃದ್ಧಿ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕ ಸಿ. ಯೂಸಫ್‌ ಹಾಜಿ, ನ್ಯಾಯವಾದಿ ಎಂ.ಸಿ. ಜೋಸ್‌, ಎ.ವಿ. ರಾಮಕೃಷ್ಣನ್‌, ಟಿ. ಮುಹಮ್ಮದ್‌ ಅಸ್ಲಾಂ, ನಗರಸಭೆ ಕೌನ್ಸಿಲರ್‌ಗಳಾದ ಅಜಯ ಕುಮಾರ್‌ ನೆಲ್ಲಿಕ್ಕಾಡ್‌, ಕೆ. ಮುಹಮ್ಮದ್‌ ಕುಂಞಿ, ನಾನಾ ಸಂಘಟನಾ ನೇತಾರರಾದ ಎ. ಹಮೀದ್‌ ಹಾಜಿ, ಪಿ.ವಿ. ಸುರೇಶ್‌, ವಿನೋದ್‌ ಕುಮಾರ್‌ ಪಳ್ಳಿಯಿಲ್‌ವೀಡ್‌, ಸಿ. ಮುಹಮ್ಮದ್‌ ಕುಂಞಿ, ಎಂ. ಶ್ರೀಕಂಠನ್‌ ನಾಯರ್‌, ಸಿ.ಎ. ಪೀಟರ್‌, ಎ. ದಾಮೋದರನ್‌, ಎಂ.ಬಿ.ಎಂ. ಅಶ್ರಫ್‌, ಕುಂಞಿಕಣ್ಣನ್‌ ಕಕ್ಕಾನತ್‌, ಇ.ಕೆ.ಕೆ. ಪಡನ್ನಕ್ಕಾಡು, ಎಂ. ಕುಂಞಿಕೃಷ್ಣನ್‌, ಮರ್ಚೆಂಟ್ಸ್‌ ಅಸೋಸಿಯೇಶನ್‌ ಪದಾಧಿಕಾರಿಗಳಾದ ಎಂ. ವಿನೋದ್‌, ಕೆ.ವಿ. ಲಕ್ಷ ್ಮಣ್‌, ಝುಬೈರ್‌, ಸುರೇಶ್‌ ಕುಮಾರ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ