ಆ್ಯಪ್ನಗರ

ಕಾಞಂಗಾಡು ಕ್ಷೇತ್ರ: ಮೊದಲ ಹಂತದಲ್ಲಿ 6247 ಕೋಟಿರೂ. ಯೋಜನೆ

ಕಾಞಂಗಾಡನ್ನು ಪರಂಪರೆ ನಗರವನ್ನಾಗಿ ಅಭಿವೃದ್ಧಿಗೊಳಿಸಲಿರುವ ಯೋಜನೆಗಳನ್ನು ಚುರುಕುಗೊಳಿಸಲು ಕಂದಾಯ-ವಸತಿ ನಿರ್ಮಾಣ ಇಲಾಖೆ ಸಚಿವ ಇ. ಚಂದ್ರಶೇಖರನ್‌ ಅವರ ಅಧ್ಯಕ್ಷ ತೆಯಲ್ಲಿ ಕಾಞಂಗಾಡು ಲೋಕೋಪಯೋಗಿ ವಿಶ್ರಾಂತಿ ಗೃಹದಲ್ಲಿ ನಡೆದ ಸಬೆಯಲ್ಲಿ ತೀರ್ಮಾನಿಸಲಾಯಿತು.

Vijaya Karnataka 14 Jul 2019, 5:00 am
ಕಾಸರಗೋಡು: ಕಾಞಂಗಾಡನ್ನು ಪರಂಪರೆ ನಗರವನ್ನಾಗಿ ಅಭಿವೃದ್ಧಿಗೊಳಿಸಲಿರುವ ಯೋಜನೆಗಳನ್ನು ಚುರುಕುಗೊಳಿಸಲು ಕಂದಾಯ-ವಸತಿ ನಿರ್ಮಾಣ ಇಲಾಖೆ ಸಚಿವ ಇ. ಚಂದ್ರಶೇಖರನ್‌ ಅವರ ಅಧ್ಯಕ್ಷ ತೆಯಲ್ಲಿ ಕಾಞಂಗಾಡು ಲೋಕೋಪಯೋಗಿ ವಿಶ್ರಾಂತಿ ಗೃಹದಲ್ಲಿ ನಡೆದ ಸಬೆಯಲ್ಲಿ ತೀರ್ಮಾನಿಸಲಾಯಿತು.
Vijaya Karnataka Web kanhgada khshtra 6247 crore plan
ಕಾಞಂಗಾಡು ಕ್ಷೇತ್ರ: ಮೊದಲ ಹಂತದಲ್ಲಿ 6247 ಕೋಟಿರೂ. ಯೋಜನೆ


ಕಾಞಂಗಾಡು ಸೌತ್‌ನಿಂದ ಅಜಾನೂರು ಇಕ್ಬಾಲ್‌ ಜಂಕ್ಷ ನ್‌ವರೆಗೆ 4 ಕಿಲೋಮೀಟರ್‌ ಫ್ಲೈ ಓವರ್‌ಗೆ 400 ಕೋಟಿ ರೂ.ನ ಯೋಜನೆ ತಯಾರಿಸಲಾಗಿದೆ. ಕಿಫ್‌ಬಿಯಲ್ಲಿ ಒಳಪಡಿಸಿ ಯೋಜನೆ ಸಾಕ್ಷಾತ್ಕರಿಸುವ ಕುರಿತು ಪರಿಗಣಿಸಲಾಗುವುದು ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್‌ ಹೇಳಿದ್ದಾರೆ.

ಕಾಞಂಗಾಡು ಪದ್ಮ ಕ್ಲಿನಿಕ್‌ನಿಂದ ದುರ್ಗ ಪ್ರೌಢಶಾಲೆ (ಕೈಲಾಸ್‌) ರಸ್ತೆ ವರೆಗೆ 1120 ಮೀಟರ್‌ ಫ್ಲೈಓವರ್‌ ನಿರ್ಮಿಸಲು ರೋಡ್ಸ್‌ ಆಂಡ್‌ ಬ್ರಿಡ್ಜಸ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ತಯಾರಿಸಿದ ಪ್ರಾಥಮಿಕ ಸರ್ವೆ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು.

ವ್ಯಾಪಾರಿ, ವ್ಯವಸಾಯಿಗಳ, ನಾಗರಿಕರ ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಲಾಯಿತು. ಜು. 18ರಂದು ಉಪಜಿಲ್ಲಾಧಿಕಾರಿ ಅರುಣ್‌ ಕೆ. ವಿಜಯನ್‌, ಆರ್‌ಬಿಡಿಸಿ ಅಧಿಕಾರಿಗಳು, ನಾನಾ ಸಂಘಟನಾ ಪ್ರತಿನಿಧಿಗಳೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಗುವುದು.

ಫ್ಲೈ ಓವರ್‌ ಹಾಗೂ ಸರ್ವಿಸ್‌ ರಸ್ತೆಯನ್ನು ಒಳಗೊಂಡ ಯೋಜನೆ ಇದಾಗಿದೆ. 2017-18ನೇ ಮುಂಗಡ ಪತ್ರದಲ್ಲಿ ರಾಜ್ಯ ಹಣಕಾಸು ಸಚಿವರು ಈ ಯೋಜನೆಗೆ 40 ಕೋಟಿ ರೂ. ಮೀಸಲಿರಿಸಿದ್ದರು. ಪಟ್ಟಣದ ಸಂಚಾರ ದಟ್ಟಣೆಗೆ ಶಾಶ್ವತ ಪರಿಹರ ಕಲ್ಪಿಸಲು ಸಹಾಯಕವಾಗುವ ಯೋಜನೆ ಇದಾಗಿದೆ. ಹೊಸದುರ್ಗ ಹೆರಿಟೇಜ್‌ ಸ್ಟ್ರೀಟ್‌ ಪ್ರಾಜೆಕ್ಟ್ ಸಭೆಯಲ್ಲಿ ಮಂಡಿಸಲಾಯಿತು.

ಹೊಸದುರ್ಗ ನೆಹರೂ ಮಂಟಪದಿಂದ ಗಾಂಧಿ ಸ್ಮೃತಿ ಮಂಟಪವರೆಗೆ ಈ ಯೋಜನೆ ಜಾರಿಗೊಳಿಸಲಾಗುವುದು. ಇದಕ್ಕೆ ಅಗತ್ಯವಾದ ಸ್ಥಳ ಲೋಕೋಪಯೋಗಿ ತೀರದಲ್ಲಿ, ಕಟ್ಟಡ ವಿಭಾಗಗಳಿಂದ ಪ್ರವಾಸೋದ್ಯಮ ಇಲಾಖೆಗೆ ಬಿಟ್ಟು ಲಭಿಸಲು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಸಾವಿರ ಮಂದಿಗೆ ಕುಳಿತುಕೊಳ್ಳಬಹುದಾದ ಯೋಗಸ್ಥಳ ಜಾಗಿಂಗ್‌ ಸ್ಟ್ರೀಟ್‌, ಫುಡ್‌ ಸ್ಟ್ರೀಟ್‌, ಸೈಕ್ಲಿಂಗ್‌ಪಾತ್‌, ಅಂಗಡಿಗಳು ಮೊದಲಾದವುಗಳನ್ನೊಳಗೊಂಡ ಪ್ರಾಜೆಕ್ಟ್ ಇದಾಗಿದೆ. ಕಾಞಂಗಾಡು ಟೌನ್‌ ಸ್ಕೈಯರ್‌ ಅಭಿವೃದ್ಧಿ ಯೋಜನೆಯನ್ನು ಸಭೆಯಲ್ಲಿ ಚರ್ಚಿಸಲಾಯಿತು. 62.75 ಸೆಂಟ್ಸ್‌ ಸ್ಥಳವನ್ನು ಇಲಾಖೆ ಈ ಯೋಜನೆಗಾಗಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿರುವುದಾಗಿ ಸಚಿವರು ಹೇಳಿದ್ದಾರೆ.

7.53 ಕೋಟಿ ರೂ. ಟೌನ್‌ ಸ್ಕೈಯರ್‌ ಪ್ರಾಜೆಕ್ಟ್, ಶಾಫ್ಸ್‌ ಚಿಲ್‌ಡ್ರನ್ಸ್‌ ಪ್ಲೇ ಏರಿಯಾ, ವೃದ್ಧರಿಗೆ ವಿಶ್ರಾಂತಿ ಸ್ಥಳ, ಕಲಾಕೃತಿಗಳು, ಚರಿತ್ರ ಟವರ್‌, ಗ್ರೀನ್‌ ಪಾರ್ಕ್‌, ಕಾರ್‌ ಪಾರ್ಕಿಂಗ್‌ ಏರಿಯಾಗಳನ್ನು ಒಳಗೊಂಡ ಯೋಜನೆ ಇದಾಗಿದೆ.

ಹೊಸದುರ್ಗ ಹೆರಿಟೇಜ್‌ ಸ್ಟ್ರೀಟ್‌ 14.94 ಕೋಟಿ ರೂ.ನ ಯೋಜನೆಯಾಗಿದೆ. ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಿರುವ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಸಚಿವರು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬುವಿಗೆ ನಿರ್ದೇಶನ ನೀಡಲಾಗಿದೆ. ಕಾಞಂಗಾಡು ಜಿಲ್ಲಾ ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿಗೊಳಿಸಲು 168 ಕೋಟಿ ರೂ.ನ ಯೋಜನೆ ಪರಿಗಣನೆಯಲ್ಲಿ ಇರುವುದಾಗಿ ಸಚಿವರು ಹೇಳಿದ್ದಾರೆ. ಪಡನ್ನಕ್ಕಾಡು ಕೂಲೋಂ ರಸ್ತೆ ಮೂಲಕ ವೆಳ್ಳರಿಕುಂಡಿಗಿರುವ 60 ಕೋಟಿ ರೂ.ನ ರಸ್ತೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಕಾಞಂಗಾಡು ನಗರಸಭಾ ಅಧ್ಯಕ್ಷ ವಿ. ವಿ. ರಮೇಶನ್‌, ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು, ಉಪಜಿಲ್ಲಾಧಿಕಾರಿ ಅರುಣ್‌ ಕೆ. ವಿಜಯನ್‌, ತಹಸೀಲ್ದಾರ್‌ ಶಶಿಧರನ್‌ ಪಿಳ್ಳೆ, ನ್ಯಾಯವಾದಿ ಗೋವಿಂದನ್‌ ಪಳ್ಳಿಕ್ಕಾಪಿಲ್‌, ಆರ್ಕಿಟೆಕ್ಟ್ ರೆಜಿ ಪ್ಲಾನುವಲ್‌, ಲೋಕೋಪಯೋಗಿ ಕಟ್ಟಡ ವಿಭಾಗ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸಿ. ರಾಜೇಶ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ವಿನೋದ್‌ ಕುಮಾರ್‌, ಹಣಕಾಸು ಅಧಿಕಾರಿ ಕೆ. ಸತೀಶನ್‌, ಡಿಎಂಒ ಡಾ. ಎ. ಪಿ. ದಿನೇಶ್‌ ಕುಮಾರ್‌, ಕೆಎಸ್‌ಟಿಪಿ ಪ್ರತಿನಿಧಿ ಪಿ. ಮಧು, ಎಕ್ಸಸ್‌ ಇ. ಶೀಲ ಚೀರನ್‌, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗ ರಾಧಾಕೃಷ್ಣನ್‌, ಎಚ್‌. ಶ್ರೀಧರನ್‌, ಡಿಟಿಪಿಸಿ ಕಾರ್ಯದರ್ಶಿ ಬಿಜು ಆರ್‌., ಡಿಟಿಪಿಸಿ ಮೇನೇಜರ್‌ ಸುನಿಲ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಆರ್‌ಬಿಡಿಸಿ ಪ್ರತಿನಿಧಿ ವತ್ಸರಾಜ್‌ ಸಭೆಯಲ್ಲಿ ಕಾಞಂಗಾಡು ಫ್ಲೈ ಓವರ್‌ ಸಂಬಂಧಿಸಿದ ಪ್ರಾಥಮಿಕ ಸರ್ವೇ ವರದಿ ಮಂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ