ಆ್ಯಪ್ನಗರ

ಕಾಸರಗೋಡಿಗರಿಗಿಲ್ಲ ಸಂಚಾರ ಸ್ವಾತಂತ್ರ್ಯ: ಕಾಸರಗೋಡು ಜಿಲ್ಲಾಡಳಿತ ಪಟ್ಟು, ಕನ್ನಡಿಗರಿಗೆ ಪೆಟ್ಟು!

ಕಾಸರಗೋಡು ಜಿಲ್ಲಾಡಳಿತ ಪಟ್ಟು ಹಿಡಿದು ದಕ್ಷಿಣ ಕನ್ನಡ ಜಿಲ್ಲೆಯವರ ಸಂಚಾರಕ್ಕೆ ನಿರ್ಬಂಧ ಹೇರಿದೆ. ವ್ಯವಹಾರಿಕವಾಗಿ ಮಂಗಳೂರನ್ನು ಆಶ್ರಯಿಸಿರುವ ಅಲ್ಲಿನ ಜನರಿಗೆ ಗಡಿ ಸಂಚಾರ ನಿರ್ಬಂಧ ಸಮಸ್ಯೆಯಾಗಿದೆ.

Vijaya Karnataka Web 15 Aug 2020, 5:27 pm
ಕೆ.ಗಂಗಾಧರ್‌ ಯಾದವ್‌ ಕಾಸರಗೋಡು
Vijaya Karnataka Web Talapady


ಕಾಸರಗೋಡು ಜಿಲ್ಲೆಯವರಿಗೆ ಅಂತಾರಾಜ್ಯ ಸಂಚಾರಕ್ಕೆ ನಿಷೇಧ ಹೇರುವ ಮೂಲಕ 'ಸಂಚಾರ ಸ್ವಾತಂತ್ರ್ಯ'ವೇ ಇಲ್ಲದಾಗಿದೆ. ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಳೆದ ತಿಂಗಳೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ ಗಡಿ ರಸ್ತೆಗಳಲ್ಲಿ ಹಾಕಿದ ಮಣ್ಣು ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು. ಕರ್ನಾಟಕದಿಂದ ನಿತ್ಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲದಿದ್ದರೂ, ಕಾಸರಗೋಡು ಜಿಲ್ಲಾಡಳಿತ ಇದೀಗ ಪಟ್ಟು ಹಿಡಿದು ದ.ಕ. ಸಂಚಾರಕ್ಕೆ ನಿರ್ಬಂಧ ಹೇರಿದೆ.

ಕಾಸರಗೋಡು ಕನ್ನಡಿಗರೂ ಪ್ರಧಾನವಾಗಿ ವ್ಯವಹಾರ, ಕೃಷಿ, ಉದ್ಯೋಗ, ಶಿಕ್ಷಣ, ಆರೋಗ್ಯ ಸಹಿತ ಎಲ್ಲ ವಲಯದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಆಶ್ರಯಿಸುತ್ತಿರುವಾಗ ಗಡಿ ಸಂಚಾರ ನಿರ್ಬಂಧ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೊನಾ ಆರಂಭದಲ್ಲಿ ಕೇರಳ ಸಂಪರ್ಕ ರಸ್ತೆ ಹೊಂದಿರುವ 17 ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಿತ್ತು. ಇದನ್ನು ಪ್ರಶ್ನಿಸಿ ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಅಂತಾರಾಜ್ಯ ಗಡಿ ರಸ್ತೆ ಮುಚ್ಚುವಂತಿಲ್ಲ ಎಂಬ ಆದೇಶ ನೀಡಿತ್ತು. ಆದರೆ ಇದೀಗ ಕಾಸರಗೋಡು ಜಿಲ್ಲಾಡಳಿತವೇ ಇದೀಗ ಸಂಚಾರ ನಿರ್ಬಂಧ ಹೇರಿದೆ. ಬಿಜೆಪಿ ಕಾಸರಗೋಡು ಜಿಲ್ಲಾಸಮಿತಿ ಕೇರಳ ಹೈಕೋರ್ಟ್‌ಗೆ ಸಂಚಾರ ನಿರ್ಬಂಧ ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. ಹೈಕೋರ್ಟ್‌ ಇದೀಗ ಸರಕಾರಕ್ಕೆ ನೋಟಿಸ್‌ ನೀಡಿದ್ದರೂ, ವಿಚಾರಣೆಯನ್ನು ಒಂದು ವಾರ ಮುಂದೂಡಿದೆ.

ಕಾಸರಗೋಡಿನಲ್ಲಿ ಮಾಸ್ಕ್‌ ಧರಿಸದೇ ಇದ್ದದ್ದಕ್ಕೆ 289 ಮಂದಿಗೆ ಕೇಸು

ಪಾಸ್‌ಗಾಗಿ ಆ್ಯಂಟಿಜೆನ್‌ ಟೆಸ್ಟ್‌ ಕಡ್ಡಾಯ
: ಕರ್ನಾಟಕಕ್ಕೆ ಸಂಚಾರ ನಡೆಸಬೇಕಾದರೆ ಕೋವಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಕಡ್ಡಾಯವಾಗಿದೆ. ಸರಕಾರಿ ವ್ಯವಸ್ಥೆಯಲ್ಲಿ ಈ ತಪಾಸಣೆ ನಡೆಸುವ ನಿಟ್ಟಿನಲ್ಲಿ ಮಂಜೇಶ್ವರ, ಕಾಸರಗೋಡು, ಕಾಞಂಗಾಡು ಪ್ರದೇಶಗಳಲ್ಲಿ ತಪಾಸಣೆ ಸೌಲಭ್ಯ ಏರ್ಪಡಿಸಲಾಗಿದೆ. ಈ ಮೂಲಕ ಲಭಿಸುವ ಸರ್ಟಿಫಿಕೆಟ್‌ನೊಂದಿಗೆ ಆಗಮಿಸುವ ಪ್ರಯಾಣಿಕರಿಗೆ ಸಂಚಾರ ನಡೆಸಬಹುದು.

ಕರಾವಳಿಯಲ್ಲಿ ಜಲಾಘಾತ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು; 200ಕ್ಕೂ ಹೆಚ್ಚು ಮಂದಿ ಸ್ಥ

ಟೆಸ್ಟ್‌ನಲ್ಲಿ ಕೋವಿಡ್‌ ಪಾಸಿಟಿವ್‌ ಪತ್ತೆಯಾದಲ್ಲಿಅವರನ್ನು ಸಿಎಫ್‌ಎಲ್‌ಟಿಸಿಗೆ ದಾಖಲಿಸಲಾಗುವುದು. ನೆಗೆಟಿವ್‌ ಆಗಿದ್ದಲ್ಲಿಪ್ರಯಾಣಕ್ಕೆ ಅನುಮತಿ ನೀಡಲಾಗುವುದು. ಪ್ರತಿನಿತ್ಯ ಕಾಸರಗೋಡಿನಿಂದ ಕರ್ನಾಟಕಕ್ಕೆ ತೆರಳುವವರು ಖಾಸಗಿ ವಾಹನಗಳಲ್ಲಿಸಂಚಾರ ನಡೆಸುವುದಿದ್ದರೆ, ಆ ವಾಹನಗಳಲ್ಲಿಈ ಸಂಬಂಧ ಸ್ಟಿಕ್ಕರ್‌ ಲಗತ್ತಿಸಬೇಕಾಗಿದೆ.

ಮಗಳ ಮದುವೆಗೆ ಕೂಡಿಟ್ಟಿದ್ದ 1 ಲಕ್ಷ ಹಣವನ್ನು ಸಿಎಂ ನಿಧಿಗೆ ನೀಡಿದ ಕಾಸರಗೋಡಿನ ವ್ಯಕ್ತಿ

ಯುವಮೋರ್ಚಾದಿಂದ ಮಣ್ಣು ತೆರವು:
ಕೇರಳ-ಕರ್ನಾಟಕ ಗಡಿ ರಸ್ತೆಗಳಲ್ಲಿ ಹಾಕಿರುವ ಮಣ್ಣನ್ನು ಜಿಲ್ಲಾಡಳಿತ ತೆರವುಗೊಳಿಸದಿದ್ದರೆ ಸ್ವಾತಂತ್ರ್ಯ ದಿನದಂದು ಮಣ್ಣು ತೆರವುಗೊಳಿಸುವುದಾಗಿ ಯುವಮೋರ್ಚಾ ಜಿಲ್ಲಾ ಸಮಿತಿ ಹೇಳಿದೆ.

ಗಡಿ ಭಾಗದ ರಸ್ತೆಗಳ ಮಣ್ಣು ತೆರವಿಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ: ಕೋಟ ಶ್ರೀನಿವಾಸ ಪೂಜಾರಿ

ಕೇಂದ್ರ ಸರಕಾರ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಅನ್‌ಲಾಕ್‌-3 ಮಾರ್ಗಸೂಚಿ ಪ್ರಕಾರ, ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲಎಂದು ತಿಳಿಸಿದರೂ, ಕಾಸರಗೋಡು ಜಿಲ್ಲೆಯಲ್ಲಿಷರತ್ತುಬದ್ಧ ಅಂತಾರಾಜ್ಯ ಪ್ರಯಾಣ ಪರವಾನಗಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಯುವಮೋರ್ಚಾ ತಿಳಿಸಿದೆ. ಜತೆಗೆ 'ಗಡಿಯನ್ನು ತೆರೆಯಲು ನೀವೂ ಸ್ಪಂದಿಸಬಹುದು' ಎಂಬ ಮೆಗಾ ಸೋಷಿಯಲ್‌ ಮೀಡಿಯಾ ಅಭಿಯಾನ ಪ್ರಾರಂಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ