ಆ್ಯಪ್ನಗರ

2020ರ ವೇಳೆಗೆ ಕಾಸರಗೋಡು ಕ್ಷ ಯರೋಗ ಮುಕ್ತ ಜಿಲ್ಲೆ: ಜಿಲ್ಲಾಧಿಕಾರಿ

ರಾಜ್ಯದ ಪ್ರಥಮ ಕ್ಷ ಯ ರೋಗ ಮುಕ್ತ ಜಿಲ್ಲೆಯಾಗಿ 2020ರ ವೇಳೆಗೆ ಕಾಸರಗೋಡು ಜಿಲ್ಲೆಯನ್ನು ಬದಲಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka 24 Mar 2019, 5:00 am
ಕಾಸರಗೋಡು: ರಾಜ್ಯದ ಪ್ರಥಮ ಕ್ಷ ಯ ರೋಗ ಮುಕ್ತ ಜಿಲ್ಲೆಯಾಗಿ 2020ರ ವೇಳೆಗೆ ಕಾಸರಗೋಡು ಜಿಲ್ಲೆಯನ್ನು ಬದಲಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web kasaragodu district tb free before 2020
2020ರ ವೇಳೆಗೆ ಕಾಸರಗೋಡು ಕ್ಷ ಯರೋಗ ಮುಕ್ತ ಜಿಲ್ಲೆ: ಜಿಲ್ಲಾಧಿಕಾರಿ


ವಿಶ್ವ ಕ್ಷ ಯ ರೋಗ ನಿಯಂತ್ರಣ ದಿನಾಚರಣೆ ಅಂಗವಾಗಿ ಶನಿವಾರ ಜನರಲ್‌ ಆಸ್ಪತ್ರೆ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇದು ಬಲು ದೊಡ್ಡ ಸಾಮಾಜಿಕ ದೌತ್ಯವಾಗಿದ್ದು, ಗುರಿ ಸಾಧಿಸುವಲ್ಲಿ ಒಟ್ಟಂದದ ಯತ್ನ ಬೇಕು ಎಂದು ಅವರು ಆಗ್ರಹಿಸಿದರು.

ಭಾರತದ ಚಿನ್ನದ ಜಿಂಕೆ, ಒಲಿಂಪಿಕ್ಸ್‌ ತಾರೆ ಡಾ. ಪಿ.ಟಿ. ಉಷಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕ್ಷ ಯ ಎಂಬ ರೋಗ ಯಾವಾಗ, ಯಾರಿಗೆ ಬೇಕಿದ್ದರೂ ತಗುಲಬಹುದಾಗಿದ್ದು, ಸೂಕ್ತ ಮುಂಜಾಗರೂಕತೆ ಮತ್ತು ಚಿಕಿತ್ಸೆಯಿಂದ ಇದನ್ನು ಗುಣಪಡಿಸಲು ಸಾಧ್ಯ. ಕ್ಷ ಯ ರೋಗ ನಿಯಂತ್ರಣ ಯಜ್ಞ ಯೋಜನೆಗೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು. ಕ್ಷ ಯರೋಗ ವಿರುದ್ಧ ಜಾಗೃತಿ ಪ್ರತಿಜ್ಞೆ ಕೈಗೊಳ್ಳುವ ಕಾರ್ಯಕ್ರಮ ಜರುಗಿದ್ದು, ಪಿ.ಟಿ. ಉಷಾ ನೇತೃತ್ವ ವಹಿಸಿದ್ದರು.

ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ಪಿ. ದಿನೇಶ್‌ ಕುಮಾರ್‌ ಅಧ್ಯಕ್ಷ ತೆ ವಹಿಸಿದ್ದರು. ಹಿರಿಯ ವೈದ್ಯ ಡಾ.ಬಿ.ಎಸ್‌. ರಾವ್‌ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್‌ ಎಂ., ಜಿಲ್ಲಾ ಸಮಾಜ ನೀತಿ ಅಧಿಕಾರಿ ಬಿ. ಭಾಸ್ಕರನ್‌, ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ. ರಾಮನ್‌ ಸ್ವಾತಿ ವಾಮನ್‌, ಜನರಲ್‌ ಆಸ್ಪತ್ರೆ ವರಿಷ್ಠಾಧಿಕಾರಿ ಡಾ. ಕೆ.ಕೆ. ರಾಜಾರಾಂ, ಸಹಾಯಕ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ. ಎ.ಟಿ. ಮನೋಜ್‌, ಡಾ. ಕೆ.ಕೆ. ಶಾಂಟಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕ್ಷ ಯರೋಗ ನಿಯಂತ್ರಣಾಧಿಕಾರಿ ಡಾ. ಟಿ.ಪಿ. ಆಮಿನಾ ಸ್ವಾಗತಿಸಿದರು. ಚಿಕಿತ್ಸೆ ವ್ಯವಸ್ಥಾಪಕ ಪಿ.ವಿ. ರಾಜೇಂದ್ರನ್‌ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ನೂತನ ಬಸ್‌ ನಿಲ್ದಾಣ ಬಳಿಯಿಂದ ಜನರಲ್‌ ಆಸ್ಪತ್ರೆಯವರೆಗೆ ಕ್ಷ ಯರೋಗ ನಿಯಂತ್ರಣ ರಾರ‍ಯಲಿ ಮತ್ತು ಸಾಮೂಹಿಕ ಓಟ ಜರುಗಿತು. ಜಿಲ್ಲಾ ಎಸ್‌ಪಿ ಜೇಮ್ಸ್‌ ಜೋಸೆಫ್‌ ಹಸಿರು ನಿಶಾನೆ ತೋರಿಸಿದರು. ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು ಮತ್ತು ಪಿ.ಟಿ. ಉಷಾ ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ