ಆ್ಯಪ್ನಗರ

ಕಾಸರಗೋಡು-ಮಂಗಳೂರು ಗಡಿ ಸಮಸ್ಯೆ ಪರಿಹರಿಸಲು ಸಿಎಂಗೆ ಪತ್ರ

ಕಾಸರಗೋಡಿನ ಜನಸಾಮಾನ್ಯರ ಅಗತ್ಯಗಳಿಗೆ ದಕ್ಷಿಣ ಕನ್ನಡಕ್ಕೆ ಸಂಚರಿಸಲು ಮತ್ತು ಮರಳಲು ಅನುವು ಮಾಡಿಕೊಡುವಂತೆ ಆಗ್ರಹಿಸಿ ಕರ್ನಾಟಕ ಜಾನಪದ ಪರಿಷತ್‌ ಕೇರಳ ಗಡಿನಾಡ ಘಟಕವು ಕರ್ನಾಟಕದ ಮುಖ್ಯಮಂತ್ರಿಗೆ ಮನವಿ ಮಾಡಿದೆ.

Vijaya Karnataka Web 14 May 2020, 11:21 am
ಕಾಸರಗೋಡು: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ 51 ದಿನಗಳಿಂದ ಮುಚ್ಚಲ್ಪಟ್ಟ ಅಂತಾರಾಜ್ಯ ಗಡಿ ತಲಪಾಡಿಯ ಪೂರ್ಣ ನಿಯಂತ್ರಣದಿಂದಾಗಿ ಕಾಸರಗೋಡು ಜಿಲ್ಲೆಯ ನಾನಾ ಪ್ರದೇಶಗಳ ನೂರಾರು ಜನರಿಗೆ ಮಂಗಳೂರಿನ ಸಂಪರ್ಕ ಕಡಿತಗೊಂಡು ವ್ಯಾಪಕ ಸಮಸ್ಯೆಗಳಿಗೆ ಕಾರಣವಾಗಿದೆ.
Vijaya Karnataka Web kasaragod- mangalore border


ಮಂಗಳೂರು ಸಹಿತ ದಕ್ಷಿಣ ಕನ್ನಡದ ಹಲವು ಪ್ರದೇಶಗಳಲ್ಲಿ ಕಾಸರಗೋಡಿನ ಸಾವಿರಕ್ಕೂ ಮಿಕ್ಕಿ ಜನರು ನಿತ್ಯ ಉದ್ಯೋಗ, ವ್ಯಾಪಾರ ಅಗತ್ಯಗಳಿಗೆ ಮಂಗಳೂರನ್ನು ಆಶ್ರಯಿಸಿದ್ದಾರೆ.

ಪ್ರಸ್ತುತ ಹೆದ್ದಾರಿ ಸಹಿತ ಎಲ್ಲಗಡಿಗಳನ್ನೂ ಮುಚ್ಚಿರುವುದರಿಂದ ಮಂಗಳೂರಿಗೆ ತೆರಳಲು ಗತ್ಯಂತರವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದು, ಹಲವು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲೂಇದ್ದಾರೆ.

ಕಾಸರಗೋಡಿನ ಮಂಜೇಶ್ವರಕ್ಕೆ ಕನ್ನಡ ಭಾಷಾ ಅಲ್ಪ ಸಂಖ್ಯಾತ ಸ್ಥಾನಮಾನ!

ಈ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್‌ ಕೇರಳ ಗಡಿನಾಡ ಘಟಕವು ಕಾಸರಗೋಡಿನ ಜನಸಾಮಾನ್ಯರ ಅಗತ್ಯಗಳಿಗೆ ದಕ್ಷಿಣ ಕನ್ನಡಕ್ಕೆ ಸಂಚರಿಸಲು ಮತ್ತು ಮರಳಲು ಅನುವು ಮಾಡಿಕೊಡುವಂತೆ ಆಗ್ರಹಿಸಿ ನಿತ್ಯ ಪಾಸ್‌ ಅಥವಾ ವಾರದ ಪಾಸ್‌ ವ್ಯವಸ್ಥೆಗೊಳಿಸುವಂತೆ ಕರ್ನಾಟಕದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು, ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಡಾ. ಕೆ.ವಿ.ಆರ್‌. ಠಾಗೂರ್‌, ಕರ್ನಾಟಕ ಜಾನಪದ ಪರಿಷತ್‌ ಕೇಂದ್ರಾಧ್ಯಕ್ಷ ಡಾ. ಟಿ. ತಿಮ್ಮೇಗೌಡ ಮತ್ತಿತರರಿಗೆ ಮನವಿ ಪತ್ರ ಸಲ್ಲಿಸಿದೆ.

ಕೊರೊನಾ ಭಯಕ್ಕಿಂತ ಹಸಿವಿನಿಂದ ಸಾಯೋ ಭಯ ಕಾಡ್ತಿದೆ! ಮಂಗಳೂರಿನ ಕಾರ್ಮಿಕರ ನೋವಿನ ಕಥೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ