ಆ್ಯಪ್ನಗರ

ಕಯ್ಯಾರರ ಸಾಧನೆ ಗೌರವಿಸಬೇಕಾದುದು ನಮ್ಮ ಕರ್ತವ್ಯ: ಪ್ರೊ. ಶ್ರೀನಾಥ್‌

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ವತಿಯಿಂದ ನಾಡೋಜ ಕಯ್ಯಾರ ಕಿಂಞ್ಞಣ್ಣ ರೈ ಅವರ 104ನೇ ಜನ್ಮ ದಿನಾಚರಣೆಯನ್ನು ಬದಿಯಡ್ಕ ಕವಿತಾ ಕುಠೀರಕ್ಕೆ ತೆರಳಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಶುಕ್ರವಾರ ಆಚರಿಸಲಾಯಿತು.

Vijaya Karnataka 9 Jun 2018, 5:00 am
ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ವತಿಯಿಂದ ನಾಡೋಜ ಕಯ್ಯಾರ ಕಿಂಞ್ಞಣ್ಣ ರೈ ಅವರ 104ನೇ ಜನ್ಮ ದಿನಾಚರಣೆಯನ್ನು ಬದಿಯಡ್ಕ ಕವಿತಾ ಕುಠೀರಕ್ಕೆ ತೆರಳಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಶುಕ್ರವಾರ ಆಚರಿಸಲಾಯಿತು.
Vijaya Karnataka Web kayyara birthday
ಕಯ್ಯಾರರ ಸಾಧನೆ ಗೌರವಿಸಬೇಕಾದುದು ನಮ್ಮ ಕರ್ತವ್ಯ: ಪ್ರೊ. ಶ್ರೀನಾಥ್‌


ಈ ಸಂದರ್ಭದಲ್ಲಿ ಕಿಂಞ್ಞಣ್ಣ ರೈ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸಿದ ಅಕಾಡೆಮಿ ಉಪಾಧ್ಯಕ್ಷ ಪ್ರೊ.ಶ್ರೀನಾಥ್‌ ಮಾತನಾಡಿ, ಕನ್ನಡಾಂಬೆಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಕಯ್ಯಾರರ ಕೊಡುಗೆ ಅನನ್ಯವಾದುದು. ಸ್ವಾತಂತ್ರ್ಯ ಹೋರಾಟಗಾರರಾಗಿ, ಹಿರಿಯ ಧುರೀಣರಾಗಿ ಬಾಳಿದ ನಾಡೋಜ ಕಯ್ಯಾರರ ಸಾಧನೆ ಮಾತಿಗೆ ನಿಲುಕದ ಇಂತಹ ಮಹನೀಯರ ಸಾಧನೆ ಹಾಗೂ ವ್ಯಕ್ತಿತ್ವವನ್ನು ನೆನಪಿಸಿ ಗೌರವಿಸಬೇಕಾದುದು ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್‌ ನಗುಮುಗಂ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕಯ್ಯಾರರಂತಹ ಮಹಾನ್‌ ವ್ಯಕ್ತಿ ಕೇರಳ ಕರ್ನಾಟಕದ ಗಡಿಭಾಗವಾದ ನಮ್ಮ ಕಾಸರಗೋಡಲ್ಲಿ ಬೆಳೆದು ಎರಡು ರಾಜ್ಯಗಳ ನಡುವೆ ಸೇತುವೆಯಾಗಿ ಬದುಕಿದವರು. ಕನ್ನಡದ ಸಂರಕ್ಷ ಣೆಗಾಗಿ ಹಗಲಿರುಳು ಹೋರಾಡಿದವರು. ಆದುದರಿಂದಲೇ ಅವರ ಜನ್ಮದಿನವನ್ನು ನೆನಪಿಟ್ಟು ಅಕಾಡೆಮಿ ವತಿಯಿಂದ ಅವರ ಮನೆಗೆ ಆಗಮಿಸಿ ಅವರಿಗೆ ಗೌರವ ಸಲ್ಲಿಸಿರುತ್ತೇವೆ. ಆದರೆ ಮಲೆಯಾಳೀಕರಣದ ಹಿಡಿತದಲ್ಲಿ ಕನ್ನಡಿಗರು ಇಂದು ನರಳುವ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸ ಎಂದರು.

ನವಜೀವನ ಪ್ರೌಢಶಾಲೆ ಬದಿಯಡ್ಕ ರಕ್ಷ ಕ ಶಿಕ್ಷ ಕ ಸಂಘದ ಅಧ್ಯಕ್ಷ ಆಶ್ರಫ್‌ ಮುನಿಯೂರು, ಶ್ರೀಧರ ಮಣಿಯಾಣಿ ಬದಿಯಡ್ಕ, ಕಿಂಞ್ಞಣ್ಣ ರೈ ಅವರ ಪುತ್ರ ಪ್ರದೀಪ್‌ ರೈ, ಅರತಿ ಪ್ರದೀಪ್‌ ರೈ, ನವಜೀವನ ಶಾಲಾ ಶಿಕ್ಷ ಕಿ ಪ್ರಭಾವತಿ ಕೆದಿಲಾಯ, ಮಾಸ್ಟರ್‌ ಮೈಂಡ್‌ನ ಮುಖ್ಯಶಿಕ್ಷ ಕಿ ಶಶಿಕಲಾ ರೈ ಮಾಯಿಪ್ಪಾಡಿ, ಮೀಡಿಯಾ ಕ್ಲಾಸಿಕಲ್‌ ಸದಸ್ಯ ನಿತಿನ್‌ ಕುಮಾರ್‌ ಸ್ವಾಗತಿಸಿ, ಆಶ್ವಿನ್‌ ಯಾದವ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ