ಆ್ಯಪ್ನಗರ

ಕೇರಳ ಸಂಸದ ಬಿನೋಯ್‌ ವಿಶ್ವಂ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರ

ಕಫ್ರ್ಯೂ ಜಾರಿಯಲ್ಲಿದ್ದ ಸಂದರ್ಭದಲ್ಲೂಮಂಗಳೂರಿನ ಲಾಲ್‌ಬಾಗ್‌ ಬಳಿಯ ಗಾಂಧಿ ಪ್ರತಿಮೆ ಎದುರು ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿ ಬಂಧನಕ್ಕೊಳಗಾದ ಸಿಪಿಐ ರಾಷ್ಟ್ರೀಯ ಸಮಿತಿ ಜತೆ ಕಾರ್ಯದರ್ಶಿ, ರಾಜ್ಯಸಭೆ ಸದಸ್ಯ ಬಿನೋಯ್‌ ವಿಶ್ವಂ ಸಹಿತ 8 ಮಂದಿಯನ್ನು ದಕ್ಷಿಣ ಕನ್ನಡ ಪೊಲೀಸರು ಸಂಜೆ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Vijaya Karnataka Web 22 Dec 2019, 5:00 am
ಮಂಜೇಶ್ವರ: ಕಫ್ರ್ಯೂ ಜಾರಿಯಲ್ಲಿದ್ದ ಸಂದರ್ಭದಲ್ಲೂಮಂಗಳೂರಿನ ಲಾಲ್‌ಬಾಗ್‌ ಬಳಿಯ ಗಾಂಧಿ ಪ್ರತಿಮೆ ಎದುರು ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿ ಬಂಧನಕ್ಕೊಳಗಾದ ಸಿಪಿಐ ರಾಷ್ಟ್ರೀಯ ಸಮಿತಿ ಜತೆ ಕಾರ್ಯದರ್ಶಿ, ರಾಜ್ಯಸಭೆ ಸದಸ್ಯ ಬಿನೋಯ್‌ ವಿಶ್ವಂ ಸಹಿತ 8 ಮಂದಿಯನ್ನು ದಕ್ಷಿಣ ಕನ್ನಡ ಪೊಲೀಸರು ಸಂಜೆ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
Vijaya Karnataka Web binoy


ಪೊಲೀಸರ ಅಮಾನವೀಯ ದೌರ್ಜನ್ಯ ವಿರೋಧಿಸಿ ಬಿನೋಯ್‌ ವಿಶ್ವಂ ಅಂಬೇಡ್ಕರ್‌ ಮತ್ತು ಮಹಾತ್ಮಾ ಗಾಂಧಿ ಭಾವಚಿತ್ರದೊಂದಿಗೆ ಪ್ರತಿಭಟನೆಯಲ್ಲಿನಿರತರಾಗಿದ್ದರು. ಈ ಮಧ್ಯೆ ಪೊಲೀಸರು ಆಗಮಿಸಿ ಬಿನೋಯ್‌ ವಿಶ್ವಂ ಸೇರಿದಂತೆ ಇತರರನ್ನು ಬಂಧಿಸಿದ್ದರು. ಬಳಿಕ ಸಂಜೆ ವೇಳೆ ಮಂಜೇಶ್ವರದವರೆಗೆ ಕರೆದೊಯ್ದು, ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದರು.

ಮಂಜೇಶ್ವರದಲ್ಲಿಬಿನೋಯ್‌ ಅವರನ್ನು ಸ್ಥಳೀಯ ಎಡರಂಗ ನಾಯಕರಾದ ಬಿ.ವಿ ರಾಜನ್‌, ಗೋವಿಂದನ್‌ ಪಳ್ಳಿಕಾಪಿಲ್‌, ಅಬ್ದುಲ್‌ ರಜಾಕ್‌ ಚಿಪ್ಪಾರು, ಕೆ.ಆರ್‌. ಜಯಾನಂದ ಮತ್ತಿತರರು ಸ್ವಾಗತಿಸಿದರು.

ಈ ಸಂದರ್ಭ ಬಿನೋಯ್‌ ಮಾತನಾಡಿ, ಮಂಗಳೂರಿನಲ್ಲಿಒಂದು ನೊಣವೂ ಹಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ದೌರ್ಜನ್ಯ ಹೆಚ್ಚಾಗಿದ್ದು, ಅಮಾನವೀಯ ಘಟನೆಗಳಿಗೆ ಮಂಗಳೂರು ಸಾಕ್ಷಿಯಾಗಿದೆ. ಎಡರಂಗವು ಸಮಾನಮನಸ್ಕ ಪಕ್ಷಗಳೊಂದಿಗೆ ಜತೆಗೂಡಿ ಪ್ರತಿಭಟನೆ ನಡೆಸಲಿದೆ. ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧವಾಗಿ ದನಿ ಮೊಳಗಿಸುವ ಕಾಲ ಸನ್ನಿಹಿತವಾಗಿದೆ ಎಂದರು.

ಕರ್ನಾಟಕ ರಾಜ್ಯ ಸಿಪಿಐ ಕಾರ್ಯದರ್ಶಿ ಸ್ವಾತಿ ಸುಂದರೇಶ್‌, ಡಾ. ಕೆ.ಎಸ್‌. ಜನಾರ್ದನ ಜತೆಗಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ