ಆ್ಯಪ್ನಗರ

ಕೇರಳದಲ್ಲಿ ಅಸ್ತವ್ಯಸ್ತಗೊಂಡ ರೈಲು, ರಸ್ತೆ, ವಿಮಾನ ಸಾರಿಗೆ

ಬಿರುಸಿನ ಮಳೆ, ಗುಡ್ಡಕುಸಿತ, ಪ್ರವಾಹ ಕಾರಣ ರಾಜ್ಯದಲ್ಲಿ ರೈಲು, ರಸ್ತೆ, ವಿಮಾನ ಸಾರಿಗೆ ಅಸ್ತವ್ಯಸ್ತಗೊಂಡಿದೆ.

Vijaya Karnataka 11 Aug 2019, 5:00 am
ಕಾಸರಗೋಡು: ಬಿರುಸಿನ ಮಳೆ, ಗುಡ್ಡಕುಸಿತ, ಪ್ರವಾಹ ಕಾರಣ ರಾಜ್ಯದಲ್ಲಿ ರೈಲು, ರಸ್ತೆ, ವಿಮಾನ ಸಾರಿಗೆ ಅಸ್ತವ್ಯಸ್ತಗೊಂಡಿದೆ.
Vijaya Karnataka Web kerala train road aeroplane sevice disrupted
ಕೇರಳದಲ್ಲಿ ಅಸ್ತವ್ಯಸ್ತಗೊಂಡ ರೈಲು, ರಸ್ತೆ, ವಿಮಾನ ಸಾರಿಗೆ


ರೈಲ್ವೇ ಹಳಿಗಳಲ್ಲಿ ನೀರು ನುಗ್ಗಿರುವುದು, ಮಣ್ಣು ಕುಸಿದಿರುವುದು, ಮರಗಳು ಬಿದ್ದಿರುವ ಕಾರಣ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಾಯಿಸಿ ಸರ್ವಿಸ್‌ ನಡೆಸಲಾಗುತ್ತಿದೆ.

ಕೊಚ್ಚಿ ವಿಮಾನ ನಿಲ್ದಾಣವನ್ನು ಮುಚ್ಚುಗಡೆಗೊಳಿಸಿರುವುದರಿಂದ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ರೈಲು, ವಿಮಾನ ಸಾರಿಗೆ ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಸರ್ವಿಸ್‌ಗಳನ್ನು ನಡೆಸಿದೆ. ಆದರೆ ಅಪಾಯಕಾರಿ ಪ್ರದೇಶಗಳಿಗಿರುವ ಸರ್ವಿಸ್‌ಗಳನ್ನು ಕೆಎಸ್‌ಆರ್‌ಟಿಸಿ ಕೂಡ ನಿಲ್ಲಿಸಬೇಕಿದೆ.

ಹಲವು ಸ್ಥಳಗಳಲ್ಲಾಗಿ ಸಿಲುಕಿಗೊಂಡ ಪ್ರಯಾಣಿಕರನ್ನು ಉದ್ದೇಶಿತ ಸ್ಥÜಳಗಳಿಗೆ ತಲುಪಿಸಲು ಕೆಎಸ್‌ಆರ್‌ಟಿಸಿ ನಾನಾ ವ್ಯವಸ್ಥೆಗಳನ್ನು ಏರ್ಪಡಿಸಿದೆ. ವಿಮಾನಗಳಲ್ಲಿ ಬರುವವ ಪ್ರಯಾಣಿಕರಿಗೆ ಸಹಾಯ ಮಾಡುವುದಕ್ಕಾಗಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಸಹಾಯಕ ಸಾರಿಗೆ ಅಧಿಕಾರಿಯ ನೇತೃತ್ವದಲ್ಲಿ ಅಧಿಕಾರಿಗಳನ್ನು ನಿಯೋಜಿಸಿ ಹೆಲ್ಪ್‌ ಡೆಸ್ಕ್‌ ಕಾರ್ಯಾರಂಭಗೊಂಡಿದೆ.

ಎಲ್ಲ ವಿಮಾನ ಪ್ರಯಾಣಿಕರನ್ನು ಸುರಕ್ಷಿತವಾಗಿ ಉದ್ದೇಶಿತ ಸ್ಥಳಗಳಿಗೆ ತಲುಪಿಸಲು ಬಸ್‌ ವ್ಯವಸ್ಥೆ ಮಾಡಲಾಗಿದೆ. ತಿರುವನಂತಪುರದಿಂದ ಹೊರಡುವ ರೈಲುಗಳನ್ನು ರದ್ದುಗೊಳಿಸಿರುವುದರಿಂದ ರೈಲು ಪ್ರಯಾಣಿಕರ ಸಹಾಯಕ್ಕಾಗಿ ತಿರುವನಂತಪುರ ರೈಲು ನಿಲ್ದಾಣದಲ್ಲಿ ಹೆಲ್ಪ್‌ ಮಾಸ್ಕ್‌ ಆರಂಭಗೊಂಡಿದೆ. ಆಲಪ್ಪುಯ ಮೂಲಕವಿರುವ ರೈಲು ಸಾರಿಗೆ ಸ್ಥಗಿತಗೊಂಡಿರುವುದರಿಂದ ಆ ಮಾರ್ಗನಲ್ಲೂ ವಿಶೇಷ ಸರ್ವಿಸ್‌ ಆರಂಭಿಸಲಾಗಿದೆ.

ರೈಲ್ವೇ ಹಳಿಗಳಲ್ಲಿ ನೀರು ನುಗ್ಗುವುದು, ಮಣ್ಣು ಕುಸಿಯುವುದು, ಮರ ಬೀಳುವುದು ಈ ಎಲ್ಲ ಕಾರಣಗಳಿಂದ ರೈಲು ಸಾರಿಗೆಗೆ ಅಡ್ಡಿಯಾಗುತ್ತಿರುವುದರಿಂದ ರೈಲು ಸರ್ವಿಸ್‌ಗಳನ್ನು ದಕ್ಷಿಣ ರೈಲ್ವೇ ಸಾಮೂಹಿಕವಾಗಿ ರದ್ದುಗೊಳಿಸಿದೆ. ಹಳಿಗೆ ಮರ ಬಿದ್ದು ನಿರಂತರ ಅಡೆತಡೆಗಳು ಸೃಷ್ಟಿಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತೆ ನೆಲೆಯಲ್ಲಿ ಆಲಪ್ಪುಯ ಮೂಲಕವಿರುವ ರೈಲು ಸಾರಿಗೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ದೀರ್ಘಕಾಲ ರೈಲುಗಳು ಮುಂದಿನ ಬರುವವರೆಗೆ ಕೋಟ್ಟಯಂ ಮೂಲಕ ಸರ್ವಿಸ್‌ ನಡೆಸಲಿವೆ. ಕೆಲ ರೈಲುಗಳನ್ನು ರದ್ದುಗೊಳಿಸಲಾಗುವುದು. ಕೆಲ ಪ್ಯಾಸೆಂಜರ್‌ ರೈಲುಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಕಾಯಂಕುಳಂ-ಎರ್ನಾಕುಳಂ ಮಾರ್ಗದಲ್ಲಿ ತಾತ್ಕಾಲಿಕವಾಗಿ ಕೋಟ್ಟಯಂ ಮೂಲಕ ಮಾತ್ರ ರೈಲುಗಳು ಸಂಚರಿಸಲಿವೆ.

ಕೋಝಿಕ್ಕೋಡು-ಪಾಲಕ್ಕಾಡು-ಎರ್ನಾಕುಳಂ ಮಾರ್ಗದಲ್ಲಿ, ಪಾಲಕ್ಕಾಡು-ಒಟ್ಟಪಾಲಂ, ಶೋರ್ನೂರು-ಕುಟ್ಟಿಪುರ, ಫರೂಖ್‌-ಕಲ್ಲಾಯಿ ಮಾರ್ಗಗಳ ರೈಲುಗಳನ್ನು ಶುಕ್ರವಾರ ಮಧ್ಯಾಹ್ನ 12.45ರಿಂದ ನಿಲ್ಲಿಸಲಾಗಿದೆ. ಹಳಿಗಳ ಮೂಲಕ ಸಂಚಾರ ಸುರಕ್ಷಿತವಲ್ಲ ಎಂಬ ಕಾರಣದಿಂದ ಆಲಪ್ಪುಯ ಮೂಲಕ ಹಾದು ಹೋಗುವ ಎಲ್ಲ ರೈಲುಗಳನ್ನು ನಿಲ್ಲಿಸಲಾಗಿದೆ. ಕಾಯಂಕ್ಕುಳಂ-ಎರ್ನಾಕುಳಂ ಮಾರ್ಗದಲ್ಲಿ ಹಲವೆಡೆ ಮರಗಳು ಬಿದ್ದಿರುವುದರಿಂದ ಎರಡು ದಿನಗಳಿಂದ ಈ ದಾರಿ ಮೂಲಕ ತಡವಾಗಿ ಓಡುತ್ತಿವೆ. ಪಾಲಕ್ಕಾಡು-ಶೋರ್ನೂರು ರೂಟ್‌ನಲ್ಲಿ ಹಲವೆಡೆ ಮಣ್ಣುಕುಸಿತ ಉಂಟಾಗಿರುವುದರಿಂದ ಆತಂಕ ಸೃಷ್ಟಿಸಿದೆ. ಒಟ್ಟಪ್ಪಾಲ-ಪರಳಿ ಮಧ್ಯೆ ರೈಲು ಹಳಿಗೆ ನೀರು ನುಗ್ಗಿದೆ. ಪಾಲಕ್ಕಾಡು-ಎರ್ನಾಕುಳಂ, ಪಾಲಕ್ಕಾಡು-ಶೋರ್ನೂರು, ಶೋರ್ನೂರು-ಕೋಝಿಕ್ಕೋಡು ರೂಟುಗಳಲ್ಲಿ ಪ್ರಸ್ತುತ ರೈಲು ಸಂಚಾರಕ್ಕೆ ತಡೆಯುಂಟಾಗಿದೆ.

ಸಂಪೂರ್ಣವಾಗಿ ರದ್ದುಗೊಂಡ ರೈಲುಗಳು: ಕೊಚ್ಚುವೇಳಿ-ಯಶವಂñಪುರ ಎಕ್ಸ್‌ಪ್ರೆಸ್‌, ಮಂಗಳೂರು-ತಿರುವನಂತಪುರ ಮಾವೇಲಿ ಎಕ್ಸ್‌ಪ್ರೆಸ್‌, ಚೆನ್ನೈ ಸೆಂಟ್ರಲ್‌-ತಿರುವನಂತಪುರ ಎಕ್ಸ್‌ಪ್ರೆಸ್‌, ಕೊಚ್ಚುವೇಳಿ-ಮಂಗಳೂರು ಎಕ್ಸ್‌ಪ್ರೆಸ್‌, ಮಂಗಳೂರು-ಕೊಚ್ಚುವೇಳಿ ಎಕ್ಸ್‌ಪ್ರೆಸ್‌, ಎರ್ನಾಕುಳಂ-ಕಾಯಂಕುಳಂ ಪ್ಯಾಸೆಂಜರ್‌, ಕಾಯಂಕುಳಂ-ಎರ್ನಾಕುಳಂ ಪ್ಯಾಸೆಂಜರ್‌, ಕೋಟ್ಟಯಂ-ನಿಲಂಬೂರು ರಸ್ತೆ ಕೋಟ್ಟಯಂ ಪ್ಯಾಸೆಂಜರ್‌, ಕೋಟ್ಟಯಂ-ಕೊಲ್ಲಂ ಪ್ಯಾಸೆಂಜರ್‌, ಕೊಲಂ-ಎರ್ನಾಕುಳಂ ಮೆಮು, ಎರ್ನಾಕುಳಂ-ಕೊಲ್ಲಂ ಮೆಮು, ಕೊಲ್ಲಂ ಎರ್ನಾಕುಳಂ ಮೆಮು, ಎರ್ನಾಕುಳಂ-ಗುರುವಾಯೂರು ಪ್ಯಾಸೆಂಜರ್‌, ಗುರುವಾಯೂರು-ಪುನಲೂರು ಪ್ಯಾಸೆಂಜರ್‌, ಪುನಲೂರು-ಗುರುವಾಯೂರು ಪ್ಯಾಸೆಂಜರ್‌, ಎರ್ನಾಕುಳಂ-ಕಾಯಂಕುಳಂ ಪ್ಯಾಸೆಂಜರ್‌, ಕಾಯಂಕುಳಂ-ಎರ್ನಾಕುಳಂ ಪ್ಯಾಸೆಂಜರ್‌, ಎರ್ನಾಕುಳಂ-ಆಲಪ್ಪುಯ-ಪ್ಯಾಸೆಂಜರ್‌, ಆಲಪ್ಪುಯ-ಕೊಲ್ಲಂ ಪ್ಯಾಸೆಂಜರ್‌, ಕೊಲ್ಲಂ-ಆಲಪ್ಪುಯ ಪ್ಯಾಸೆಂಜರ್‌, ಆಲಪ್ಪ್ಪುಯ- ಎರ್ನಾಕುಳಂ ಪ್ಯಾಸೆಂಜರ್‌, ತಿರುವನಂತಪುರ-ಗುರುವಾಯೂರು ಎಕ್ಸ್‌ಪ್ರೆಸ್‌, ಗುರುವಾಯೂರು-ತಿರುವನಂತಪುರ ಎಕ್ಸ್‌ಪ್ರೆಸ್‌, ತಿರುವನಂತಪುರ-ಕೋಝಿಕ್ಕೊಡು ಜನಶತಾಬ್ದಿ ಎಕ್ಸ್‌ಪ್ರೆಸ್‌, ಕೋಝಿಕ್ಕೋಡು-ತಿರುವನಂತಪುರ ಜನಶತಾಬ್ದಿ ಎಕ್ಸ್‌ಪ್ರೆಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ