ಆ್ಯಪ್ನಗರ

ಕೆಎಸ್‌ಆರ್‌ಟಿಸಿ ಎಂಪ್ಯಾನಲ್‌ ನೌಕರರ ಪ್ರತಿಭಟನೆ ಮುಕ್ತಾಯ

ಹೈಕೋರ್ಟ್‌ನ ತೀರ್ಪಿನ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ವಜಾ ಮಾಡಿದ ಎಂಪ್ಯಾನಲ್‌ ನೌಕರರು ತಿರುವನಂತಪುರ ಸೆಕ್ರೆಟರಿಯೇಟ್‌ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆ ಕೊನೆಗೊಂಡಿದೆ.

Vijaya Karnataka 11 Mar 2019, 5:00 am
ಕಾಸರಗೋಡು: ಹೈಕೋರ್ಟ್‌ನ ತೀರ್ಪಿನ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ವಜಾ ಮಾಡಿದ ಎಂಪ್ಯಾನಲ್‌ ನೌಕರರು ತಿರುವನಂತಪುರ ಸೆಕ್ರೆಟರಿಯೇಟ್‌ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆ ಕೊನೆಗೊಂಡಿದೆ. ಹೋರಾಟಗಾರರ ಪ್ರತಿನಿಧಿಗಳು ಸಾರಿಗೆ ಸಚಿವ ಎ.ಕೆ. ಶಶೀಂದ್ರನ್‌ ಅವರೊಂದಿಗೆ ನಡೆಸಿದ ಚರ್ಚೆಯ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಎರಡು ತಿಂಗಳುಗಳಿಂದ ನಡೆಸಿದ ಹೋರಾಟ ಈ ಮೂಲಕ ಕೊನೆಗೊಂಡಿದೆ.
Vijaya Karnataka Web ksrtc empanel employees protest end
ಕೆಎಸ್‌ಆರ್‌ಟಿಸಿ ಎಂಪ್ಯಾನಲ್‌ ನೌಕರರ ಪ್ರತಿಭಟನೆ ಮುಕ್ತಾಯ


ಕನಿಷ್ಠ ಐದು ವರ್ಷ ನೌಕರಿ ನಿರ್ವಹಿಸಿದವರಿಗೆ, ನಿರ್ವಾಹಕ ಪರವಾನಗಿ ಇರುವವರಿಗೆ ಲೀವ್‌ ವೇಕನ್ಸಿಯಲ್ಲಿ ನೌಕರಿ ನೀಡಬಹುದು ಎಂದು ಸಚಿವರು ಭರವಸೆ ನೀಡಿರುವುದಾಗಿ ಹೋರಾಟಗಾರರು ಹೇಳಿದ್ದಾರೆ. ಕಾರ್ಪೊರೇಶನ್‌ನ ಖಾಯಂ ನೌಕರರು ರಜೆ ತೆಗೆಯುವ ದಿನಗಳಲ್ಲಿ ಎಂಪ್ಯಾನಲ್‌ ನೌಕರರನ್ನು ನಿಯೋಜಿಸಲಾಗುವುದು ಎಂದು ಇದಕ್ಕಾಗಿ ಕೆಎಸ್‌ಆರ್‌ಟಿಸಿಯ ಝೋನ್‌ಗಳನ್ನು ಕೇಂದ್ರೀಕರಿಸಿ ನಿರ್ವಾಹಕರ ಪಟ್ಟಿ ತಯಾರಿಸಲು ಆಡಳಿತ ನಿರ್ದೇಶಕರಿಗೆ ನಿರ್ದೇಶನ ನೀಡಿರುವುದಾಗಿ ಸಚಿವರ ಕಚೇರಿ ತಿಳಿಸಿದೆ. ನೌಕರಿ ನಿರ್ವಹಿಸುವ ದಿನ ಅವರಿಗೆ ವೇತನ ಲಭಿಸುವ ರೀತಿಯಲ್ಲಿ ನಿಯೋಜಿಸಲಾಗುವುದು.

ರಾಜ್ಯದ ನಾನಾ ಕೆಎಸ್‌ಆರ್‌ಟಿಸಿ ಡಿಪೊ್ಪೕಗಳಲ್ಲಿ ನೌಕರಿ ನಿರ್ವಹಿಸುವ 3.861 ತಾತ್ಕಾಲಿಕ ನಿರ್ವಾಹಕರನ್ನು ಡಿಸೆಂಬರ್‌ನಲ್ಲಿ ಸಾಮೂಹಿಕವಾಗಿ ವಜಾ ಮಾಡಲಾಗಿತ್ತು. ವಜಾ ಮಾಡಲಾದ ಎಂಪ್ಯಾನಲ್‌ ನಿರ್ವಾಹಕರ ವಿಷಯದಲ್ಲಿ ಸರಕಾರದ ತೀರ್ಮಾನ ವಿಳಂಬಗೊಳ್ಳುತ್ತಿರುವುದನ್ನು ಪ್ರತಿಭಟಿಸಿ ಜ.21ರಿಂದ ನೌಕರರು ಹೋರಾಟದೊಂದಿಗೆ ರಂಗಕ್ಕಿಳಿದಿದ್ದರು. ಈ ಮಧ್ಯೆ ಇವರು ಹಲವು ಬಾರಿ ಸೆಕ್ರೆಟರಿಯೇಟ್‌ನ ಮುಂಭಾಗದಲ್ಲಿ ಆತ್ಮಹತ್ಯೆ ಭೀತಿ ಉಂಟಾಗಿತ್ತು. ಕಳೆದ ದಿನದಿಂದ ಇವರು ಅನಿರ್ದಿಷ್ಟಾವಧಿ ನಿರಾಹಾರ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ