ಆ್ಯಪ್ನಗರ

ಕುಂಬಳೆ ಉದ್ವಿಗ್ನ: ಸಿಪಿಎಂ ನೇತಾರರ ಮನೆ ಮೇಲೆ ದಾಳಿ

ಶಬರಿಮಲೆ ಕ್ಷೇತ್ರದಲ್ಲಿ ಯುವತಿಯರ ಪ್ರವೇಶಕ್ಕೆ ಆಸ್ಪದ ನೀಡಿದ ಸರಕಾರದ ಕ್ರಮವನ್ನು ಖಂಡಿಸಿ ಅಯ್ಯಪ್ಪ ಧರ್ಮ ಸೇನಾ ಮತ್ತು ಶಬರಿಮಲೆ ಕರ್ಮ ಸಮಿತಿ ಸೇರಿದಂತೆ ನಾನಾ ಹಿಂದೂ ಪರ ಸಂಘಟನೆಗಳು ಹಮ್ಮಿಕೊಂಡ ಹರತಾಳದಲ್ಲಿ ರಸ್ತೆ ತಡೆ, ಅಂಗಡಿ ಮುಂಗಟ್ಟು ಮುಚ್ಚುವಿಕೆ, ಕಾವೇರಿದ ಪ್ರತಿಭಟನೆ ಸಹಿತ ವ್ಯಾಪಕ ಹಿಂಸಾಚಾರ ನಡೆದು ನಗರ ಉದ್ವಿಗ್ನಗೊಂಡಿದೆ.

Vijaya Karnataka Web 4 Jan 2019, 2:56 pm
ಕುಂಬಳೆ: ಶಬರಿಮಲೆ ಕ್ಷೇತ್ರದಲ್ಲಿ ಯುವತಿಯರ ಪ್ರವೇಶಕ್ಕೆ ಆಸ್ಪದ ನೀಡಿದ ಸರಕಾರದ ಕ್ರಮವನ್ನು ಖಂಡಿಸಿ ಅಯ್ಯಪ್ಪ ಧರ್ಮ ಸೇನಾ ಮತ್ತು ಶಬರಿಮಲೆ ಕರ್ಮ ಸಮಿತಿ ಸೇರಿದಂತೆ ನಾನಾ ಹಿಂದೂ ಪರ ಸಂಘಟನೆಗಳು ಹಮ್ಮಿಕೊಂಡ ಹರತಾಳದಲ್ಲಿ ರಸ್ತೆ ತಡೆ, ಅಂಗಡಿ ಮುಂಗಟ್ಟು ಮುಚ್ಚುವಿಕೆ, ಕಾವೇರಿದ ಪ್ರತಿಭಟನೆ ಸಹಿತ ವ್ಯಾಪಕ ಹಿಂಸಾಚಾರ ನಡೆದು ನಗರ ಉದ್ವಿಗ್ನಗೊಂಡಿದೆ.
Vijaya Karnataka Web kumbale tense cpm leaders house attack
ಕುಂಬಳೆ ಉದ್ವಿಗ್ನ: ಸಿಪಿಎಂ ನೇತಾರರ ಮನೆ ಮೇಲೆ ದಾಳಿ


ಕರ್ಮ ಸಮಿತಿ ಕಾರ‍್ಯಕರ್ತನೊಬ್ಬ ಪತ್ತನಂತಿಟ್ಟದಲ್ಲಿ ಕಲ್ಲೇಟಿನಿಂದ ಮೃತಪಟ್ಟ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ‍್ಯಕರ್ತರು ನಗರ ಹಾಗೂ ಹೊರ ವಲಯದ ಸಿಪಿಎಂ ನೇತಾರರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ನೀಲೇಶ್ವರದ ಸಿಪಿಎಂ ಕಚೇರಿಯನ್ನು ಹಾನಿಗೊಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ತಲಪಾಡಿ, ಮಂಜೇಶ್ವರ, ಬಂದ್ಯೋಡುಗಳಲ್ಲಿ ರಸ್ತೆ ಅಡ್ಡಗಟ್ಟಿ ವಾಹನಗಳನ್ನು ತಡೆದ ಘಟನೆ ನಡೆದಿದೆ.

ಕುಂಬಳೆ ಪೇಟೆ ಪ್ರದೇಶದಲ್ಲಿ ಹರತಾಳದ ವೇಳೆ ರಸ್ತೆ ಮಧ್ಯೆ ಕಲ್ಲುಗಳನ್ನಿಟ್ಟು, ಘೋಷಣೆ ಕೂಗಿಕಾರ‍್ಯಕರ್ತರು ಪ್ರತಿಭಟನೆ ನಡೆಸಿದರು. ಒಳ ಪ್ರದೇಶಗಳಾದ ಕೈಕಂಬ ಬಾಯಾರುಪದವು ರಸ್ತೆಯ ಜೋಡುಕಲ್ಲು, ಬಾಯಾರುಪದವು, ಮುಳಿಗದ್ದೆ ಪ್ರದೇಶಗಳಲ್ಲಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು, ವಾಹನಗಳ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇಬ್ಬರಿಗೆ ಗಾಯ: ಜೋಡುಕಲ್ಲು ಪ್ರದೇಶದಲ್ಲಿ ಒಟ್ಟು ಸೇರಿದ ಪ್ರತಿಭಟನಾಕಾರರು ರಸ್ತೆ ಮಧ್ಯೆ ಕುಳಿತು ಅಯ್ಯಪ್ಪ ನಾಮಜಪ ಹಮ್ಮಿಕೊಂಡರು. ಬಾಯಾರುಪದವು ಪ್ರದೇಶದಲ್ಲಿ ಸಿಪಿಎಂ-ಸಂಘ ಪರಿವಾರದ ಕಾರ‍್ಯಕರ್ತರ ಮಧ್ಯೆ ಜಟಾಪಟಿ ನಡೆದಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಬದಿಯಡ್ಕ ಪ್ರದೇಶದಲ್ಲಿ ಡಿವೈಎಫ್‌ಐ ಕಚೇರಿಗೆ ಕರಿ ಆಯಿಲ್‌ ಸಿಂಪಡಿಸಲಾಗಿದೆ. ಪೆರ್ಮುದೆ ಜಂಕ್ಷ ನ್‌ ಬಳಿ ರಸ್ತೆ ತಡೆ ನಡೆಸಿದ ಕಾರ‍್ಯಕರ್ತರ ಮೇಲೆ ಪೋಲಿಸರು ಲಾಠಿ ಪ್ರಯೋಗಿಸಿದ ಘಟನೆ ನಡೆದಿದೆ. ಅನಂತರ ರಸ್ತೆ ತೆರವುಗೊಳಿಸಲಾಯಿತು. ಸೀತಾಂಗೋಳಿ ಮತ್ತು ಬೇಳ ಚರ್ಚ್‌ ಮುಂದುಗಡೆ ಸಾಗುವ ರಸ್ತೆಯಲ್ಲಿ ಬುಧವಾರ ರಾತ್ರಿ ವೇಳೆ ಕಟ್ಟಿಗೆ ಜೋಡಿಸಿ, ಟಯರ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ