ಆ್ಯಪ್ನಗರ

ಬದುಕು ಎಂಬುದು ಭಾಗ್ಯದ ಪಾತ್ರೆ

ಸಂಘಟನೆಯ ಶಕ್ತಿ ಜನರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಎಂಬುದು ಅನೇಕ ಮಕ್ಕಳ ತಾಯಿಯಂತೆ. ಮಕ್ಕಳ ಸುಖ ಶಾಂತಿ ನೆಮ್ಮದಿಯೇ ಯೋಜನೆಯ ಆಶಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

Vijaya Karnataka 19 Jan 2020, 5:00 am
ಕುಂಬಳೆ: ಸಂಘಟನೆಯ ಶಕ್ತಿ ಜನರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಎಂಬುದು ಅನೇಕ ಮಕ್ಕಳ ತಾಯಿಯಂತೆ. ಮಕ್ಕಳ ಸುಖ ಶಾಂತಿ ನೆಮ್ಮದಿಯೇ ಯೋಜನೆಯ ಆಶಯ. ಒಗ್ಗಟ್ಟಿನಿಂದ ಸಂಘಟನೆಯನ್ನು ಬೆಳೆಸಿಕೊಳ್ಳುವ ಜನತೆಯಲ್ಲಿಬದುಕನ್ನು ಸುಂದರಗೊಳಿಸಬೇಕು. ಭವಿಷ್ಯದ ಕಲ್ಪನೆಯನ್ನು ಮಾಡಿಕೊಂಡು ಹಂತ ಹಂತವಾಗಿ ಒಂದೊಂದೇ ಮೆಟ್ಟಿಲುಗಳನ್ನು ಹತ್ತುವ ಮೂಲಕ ಸಾರ್ಥಕ ಬದುಕನ್ನು ಸಂಘಟನೆಯಿಂದ ಸಾಧ್ಯವಾಗಿದ್ದು ಸದುಪಯೋಗಪ ಪಡಿಸಿಕೊಳ್ಳಿ. ಬದುಕು ಭಾಗ್ಯದ ಪಾತ್ರೆಯಾಗಿದೆ. ಆದರೆ ಆ ಪಾತ್ರೆಯಲ್ಲಿತೂತಾಗದಂತೆ ಜಾಗೃತೆ ವಹಿಸಿ. ದುಶ್ಚಟಗಳಿಂದ ವಿಮುಕ್ತರಾಗಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
Vijaya Karnataka Web heggade


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಕಾಸರಗೋಡು ಜಿಲ್ಲೆಇದರ ನೇತೃತ್ವದಲ್ಲಿಜಿಲ್ಲಾಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಜಿಲ್ಲಾಜನಜಾಗೃತಿ ವೇದಿಕೆ ಮತ್ತು ಸ್ವಾಗತ ಸಮಿತಿ ಆಶ್ರಯದಲ್ಲಿಶನಿವಾರ ಅನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪರಿಸರದಲ್ಲಿನಡೆದ ಕಾಸರಗೋಡು ಜಿಲ್ಲೆಯ 2701ನೇ ಸ್ವಸಹಾಯ ಸಂಘದ ಉದ್ಘಾಟನೆ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕೇರಳದ ಕುಟುಂಬ ಶ್ರೀ ಪದ್ಧತಿ ದೇಶದಾದ್ಯಂತ ಜನಜನಿತವಾಗಿದೆ. ಕೇರಳದಲ್ಲಿಕುಟುಂಬಶ್ರೀ ಪದ್ಧತಿ ಯಶಸ್ವಿಯಾಗಿರವ ಮೂಲಕ ಕಾರಣ ಸ್ತ್ರೀ ಶಕ್ತಿ. ಕುಟುಂಬವನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವ ಸಾಮರ್ಥ್ಯ ಮಹಿಳೆಗೆ ಬಂದಾಗ ಕುಟುಂಬ ಸುಸೂತ್ರವಾಗಿರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಭವಿಷ್ಯದ ಬಗ್ಗೆ ಕನಸು ಕಾಣುತ್ತಾ, ಗೌರವಯುತವಾಗಿ ಜೀವನ ನಡೆಸಲು ಸಹಕರಿಸುವ ಗ್ರಾಮಾಭಿವೃದ್ಧಿ ಯೋಜನೆಯನ್ನು ಸದ್ವಿನಿಯೋಗಪಡಿಸಿಕೊಂಡು ಜೀವನದ ಗುರಿಯನ್ನು ತಲುಪಿ ಎಂದು ಹಾರೈಸಿದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ ಮತ ಭೇದಗಳನ್ನು ಮರೆತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ. ಪ್ರೀತಿ, ವಿಶ್ವಾಸಗಳನ್ನು ಸಂಘಟನೆಯ ಮೂಲಕ ಸ್ವಾಧೀನಪಡಿಸಿಕೊಳ್ಳಬಹುದು. ಸಮಾಜದಲ್ಲಿದುಷ್ಕೃತ್ಯ ಎಸಗುವ ಮಂದಿಯ ವಿರುದ್ಧ ಬೃಹತ್‌ ಸಂಘಟನೆಗಳು ಕಾರ್ಯ ಪ್ರವೃತ್ತರಾಗಬೇಕು. ಸಮಾಜವನ್ನು ಒಟ್ಟುಗೂಡಿಸುವ ಕೆಲಸ ಸಂಘಟನೆಗಳಿಂದ ಸಾಧ್ಯ ಎಂದು ತಿಳಿಸಿದರು.

ಇದೇ ಸಂದರ್ಭ ಸ್ವಸಹಾಯ ಸಂಘದ ಸದಸ್ಯರಿಗೆ ದಾಖಲಾತಿ ವಿತರಣೆಯನ್ನು ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ವಿತರಿಸಿದರು. ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರ ಅವರು ನವಜೀವನ ಸಮಿತಿ ಸದಸ್ಯರಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಕೇರಳ ಸರಕಾರದ ಪ್ರವಾಸೋದ್ಯಮ ಇಲಖೆಯ ಸಮಿತಿ ಸದಸ್ಯ ಸಿ.ಎಚ್‌.ಕುಂಞಂಬು ಸುಜ್ಞಾನನಿಧಿ ವಿತರಿಸಿದರು. ಬಿಜೆಪಿ ಮುಖಂಡ ರವೀಶ ತಂತ್ರಿ ಕುಂಟಾರು ಕೃಷಿ ಅನುದಾನವನ್ನು ವಿತರಿಸಿದರು. ಸಿಂಡಿಕೇಟ್‌ ಬ್ಯಾಂಕ್‌ ಕಾಸರಗೋಡು ವಿಭಾಗದ ಪ್ರಾದೇಶಿಕ ನಿರ್ದೇಶಕ ರಿಜಿ ಆರ್‌.ಆರ್‌. ಮೈಕ್ರೋಬಜಾತ್‌ಬಾಂಡ್‌ ವಿತರಿಸಿದರು. ಮುಖ್ಯ ಅತಿಥಿಯಾಗಿ ಪುತ್ತಿಗೆ ಪಂಚಾಯಿತಿ ಅಧ್ಯಕ್ಷೆ ಅರುಣ, ಕ್ಷೇತ್ರದ ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿ, ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಧ್ಯಕ್ಷ ಮಹಾಲಿಂಗೇಶ್ವರ ಭಟ್‌, ವೆಂಕಟರಮಣ ಹೊಳ್ಳ ಉಪಸ್ಥಿತರಿದ್ದು ಶುಭ ಹಾರೈಸಿದರು.

ಬಳಿಕ ಜಿಲ್ಲೆಯ 2701ನೇ ಸ್ವಸಹಾಯ ಸಂಘವಾದ ಚಂದ್ರಗಿರಿ ವಲಯದ ಜಗದಂಬ ಅಡ್ಕತ್ತಬೈಲು ಸಂಘವನ್ನು ಉದ್ಘಾಟಿಸಲಾಯಿತು. ಹರಿದಾಸ ಜಯಾನಂದ ಹೊಸದುರ್ಗ ಪ್ರಾರ್ಥನೆ ಹಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾನಿರ್ದೇಶಕ ಸತೀಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದೇವಿಪಪ್ರಸಾದ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ