ಆ್ಯಪ್ನಗರ

ಕೇಂದ್ರ ಸಚಿವ ವಿ. ಮುರಳೀಧರನ್‌ಗೆ ಕೊಲೆ ಬೆದರಿಕೆ

ಕೇಂದ್ರ ವಿದೇಶಾಂಗ ಸಹ ಸಚಿವ ಕೇರಳದ ವಿ. ಮುರಳೀಧರನ್‌ಗೆ ಕೊಲೆ ಬೆದರಿಕೆ ಬಂದಿದೆ.

Vijaya Karnataka 6 Jun 2019, 5:00 am
ಕಾಸರಗೋಡು: ಕೇಂದ್ರ ವಿದೇಶಾಂಗ ಸಹ ಸಚಿವ ಕೇರಳದ ವಿ. ಮುರಳೀಧರನ್‌ಗೆ ಕೊಲೆ ಬೆದರಿಕೆ ಬಂದಿದೆ.
Vijaya Karnataka Web life theat to central minister muraleedharan
ಕೇಂದ್ರ ಸಚಿವ ವಿ. ಮುರಳೀಧರನ್‌ಗೆ ಕೊಲೆ ಬೆದರಿಕೆ


ಘಟನೆಗೆ ಸಂಬಂಧಿಸಿದಂತೆ ಕೋಝಿಕೋಡ್‌ ಸೆಂಟ್ರಲ್‌ ಎಕ್ಸೈಸ್‌ ಇನ್ಸ್‌ಪೆಕ್ಟರ್‌ ಬಾದಲ್‌ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಕೋಝಿಕೋಡ್‌ ಸಿಟಿ ಪೊಲೀಸ್‌ ಕಮಿಷನರ್‌ಗೆ ಫೋನ್‌ ಮೂಲಕ ಕೊಲೆ ಬೆದರಿಕೆ ಸಂದೇಶ ಬಂದಿದೆ. ಕೋಝಿಕೋಡ್‌ ಕುಳತ್ತರ ನಿವಾಸಿ ಬಾದಲ್‌ನನ್ನು ಕೋಝಿಕೋಡ್‌ ಸಿಟಿ ಸ್ಪೆಷಲ್‌ ಬ್ರ್ಯಾಂಚ್‌ ವಿಚಾರಣೆ ನಡೆಸುತ್ತಿದ್ದಾರೆ.

ಬಾದಲ್‌ಗೆ ಹೊಸ ಸಿಮ್‌ ನೀಡಿದ ತಿರುವನಂತಪುರ ನಿವಾಸಿಯನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಬಾದಲ್‌ ಹಾಗೂ ತಿರುವನಂತಪುರ ನಿವಾಸಿ ನಡುವಿನ ಸಂಬಂಧದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂದೇಶ ಕಳುಹಿಸಿದ ಮೊಬೈಲ್‌ ನಂಬ್ರದ ಸಹಾಯದಿಂದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ