Please enable javascript.34 ಸ್ಥಳೀಯಾಡಳಿತ ಸಂಸ್ಥೆಗಳ ತಿದ್ದುಪಡಿ ಯೋಜನೆಗಳ ಅಂಗೀಕಾರ - local bodies - Vijay Karnataka

34 ಸ್ಥಳೀಯಾಡಳಿತ ಸಂಸ್ಥೆಗಳ ತಿದ್ದುಪಡಿ ಯೋಜನೆಗಳ ಅಂಗೀಕಾರ

ವಿಕ ಸುದ್ದಿಲೋಕ 28 Mar 2017, 9:00 am
Subscribe

ಜಿಲ್ಲೆಯ 34 ಸ್ಥಳೀಯಾಡಳಿತ ಸಂಸ್ಥೆಗಳ ತಿದ್ದುಪಡಿ ಯೋಜನೆಗಳಿಗೆ ಜಿಲ್ಲಾ ಯೋಜನಾ ಸಮಿತಿ ಸಭೆ ಸೋಮವಾರ ಅಂಗೀಕಾರ ನೀಡಿದೆ...

local bodies
34 ಸ್ಥಳೀಯಾಡಳಿತ ಸಂಸ್ಥೆಗಳ ತಿದ್ದುಪಡಿ ಯೋಜನೆಗಳ ಅಂಗೀಕಾರ

ಕಾಸರಗೋಡು: ಜಿಲ್ಲೆಯ 34 ಸ್ಥಳೀಯಾಡಳಿತ ಸಂಸ್ಥೆಗಳ ತಿದ್ದುಪಡಿ ಯೋಜನೆಗಳಿಗೆ ಜಿಲ್ಲಾ ಯೋಜನಾ ಸಮಿತಿ ಸಭೆ ಸೋಮವಾರ ಅಂಗೀಕಾರ ನೀಡಿದೆ.

ಕಾಸರಗೋಡು, ಕಾಞಂಗಾಡು, ನೀಲೇಶ್ವರ ಬ್ಲಾಕ್‌ ಪಂಚಾಯಿತಿಗಳು, ಕಾಞಂಗಾಡು, ನೀಲೇಶ್ವರ ನಗರಸಭೆಗಳು, ಅಜನೂರು, ಬದಿಯಡ್ಕ, ಬಳಾಲ್‌, ಬೇಡಡ್ಕ, ಬೆಳ್ಳೂರು, ಚೆಮ್ನಾಡು, ದೇಲಂಪಾಡಿ, ಎಣ್ಮಕಜೆ, ಕಳ್ಳಾರ್‌, ಕಾರಡ್ಕ, ಕಯ್ಯೂರು-ಚಿಮೇನಿ, ಕಿನಾನ್ನೂರು-ಕರಿಂದಳಂ, ಕೋಟಾ-ಬೆಳ್ಳೂರು, ಕುಂಬ್ಡಾಜೆ, ಕುಂಬಳೆ, ಮಡಿಕೈ, ಮಂಗಲ್ಪಾಡಿ, ಮೀಂಜ, ಮೊಗ್ರಾಲ್‌ಪುತ್ತೂರು, ಮುಳಿಯಾರು, ಪಡನ್ನ, ಪಳ್ಳಿಕೆರೆ, ಪನತ್ತಡಿ, ಪುಲ್ಲೂರು-ಪೆರಿಯಾ, ಪುತ್ತಿಗೆ, ತೃಕ್ಕರೀಪುರ, ಉದುಮ, ವರ್ಕಾಡಿ, ವೆಸ್ಟ್‌ ಎಳೇರಿ ಮೊದಲಾದ ಗ್ರಾಮ ಪಂಚಾಯಿತಿಗಳ ತಿದ್ದುಪಡಿ ಯೋಜನೆಗಳನ್ನು ಅಂಗೀಕರಿಸಿದೆ.

2016-17ನೇ ವರ್ಷದ ಯೋಜನೆಗಳ ಪ್ರಗತಿಯನ್ನು ಸಭೆಯಲ್ಲಿ ಅವಲೋಕನ ನಡೆಸಲಾಯಿತು. ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಜಿಸಿ ಬಶೀರ್‌ ಅಧ್ಯಕ್ಷ ತೆ ವಹಿಸಿದ್ದÜರು. 13ನೇ ಪಂಚ ವಾರ್ಷಿಕ ಯೋಜನೆಗಳಲ್ಲಿ ಮಾರ್ಗ ನಿರ್ದೇಶನಗಳನ್ನು ಸೇರಿಸುವುದಕ್ಕಾಗಿ ಈ ಕುರಿತಾಗಿ ಕಿಲಾ ವಿಸ್ತೀರ್ಣಾಧಿಕಾರಿ ಫ್ಯಾಕಲ್ಟಿ ಸದಸ್ಯ ಪಪ್ಪನ್‌, ವಿಶ್ವ ಬ್ಯಾಂಕ್‌ ಯೋಜನೆಗಳ ಯೋಜನೆಗಳ ಕುರಿತು ಕೆ.ಎಲ್‌.ಜಿ.ಎಸ್‌. ಡಿಪಿ ಸಂಯೋಜಕ ಬೇಬಿ ಬಾಲಕೃಷ್ಣನ್‌ ಮೊದಲಾದವರು ಮಾತನಾಡಿದರು. ಜಿಲ್ಲಾ ಯೋಜನಾಧಿಕಾರಿ ಕೆ.ಎಂ. ಸುರೇಶ್‌, ಯೋಜನಾ ಸಮಿತಿ ಸದಸ್ಯರು, ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಕಾರ‍್ಯದರ್ಶಿ, ಅಧ್ಯಕ್ಷ ರುಗಳು ಭಾಗವಹಿಸಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ