ಆ್ಯಪ್ನಗರ

ಲೋಕಸಭೆ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ

ಲೋಕಸಭೆ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರಕ್ಕೆ ನಡೆಯುವ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ ಸಮಾಪ್ತಿಗೊಂಡಿತು. ಸೋಮವಾರ ಅಭ್ಯರ್ಥಿಗಳು ಮೌನ ಪ್ರಚಾರ ಕೈಗೊಳ್ಳಲಿದ್ದು, ಮಂಗಳವಾರ ಮತದಾನ ನಡೆಯಲಿದೆ.

Vijaya Karnataka 22 Apr 2019, 5:00 am
ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರಕ್ಕೆ ನಡೆಯುವ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ ಸಮಾಪ್ತಿಗೊಂಡಿತು. ಸೋಮವಾರ ಅಭ್ಯರ್ಥಿಗಳು ಮೌನ ಪ್ರಚಾರ ಕೈಗೊಳ್ಳಲಿದ್ದು, ಮಂಗಳವಾರ ಮತದಾನ ನಡೆಯಲಿದೆ.
Vijaya Karnataka Web lokasabha election propoganda end
ಲೋಕಸಭೆ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ


ಜಿಲ್ಲೆಯಲ್ಲಿ ಯುಡಿಎಫ್‌, ಬಿಜೆಪಿ, ಎಲ್‌ಡಿಎಫ್‌ ಅಭ್ಯರ್ಥಿಗಳು ಭಾನುವಾರ ಬೆಳಗ್ಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದ್ದರು. ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಚುನಾವಣಾ ಪ್ರಚಾರ ಸಮಾಪ್ತಿ ಭಾನುವಾರ ಸಂಜೆ ಕರಂದಕ್ಕಾಡಿನಲ್ಲಿ ನಡೆಯಿತು. ಇದಕ್ಕೆ ಮುನ್ನ ಕಡಪ್ಪುರದಿಂದ ಕೇಂದ್ರ ರಕ್ಷ ಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭಾಗವಹಿಸುವ ಬೃಹತ್‌ ರಾರ‍ಯಲಿ ನಡೆಯಿತು. ಕರ್ನಾಟಕದ ಸಂಸದರು, ಶಾಸಕರು ಸಹಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಬ್ಯಾಂಡ್‌ ವಾದ್ಯಗಳೊಂದಿಗೆ ಕಾರ್ಯಕರ್ತರು ರಾರ‍ಯಲಿಯಲ್ಲಿ ಭಾಗವಹಿಸಿದ್ದರು.

ಎಲ್‌ಡಿಎಫ್‌ನ ಚುನಾವಣಾ ಪ್ರಚಾರ ರಾರ‍ಯಲಿಯು ನಗರದ ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತ್ತು. ಬೈಕ್‌ ರಾರ‍ಯಲಿಯೊಂದಿಗೆ ಬ್ಯಾಂಡ್‌ ವಾದ್ಯಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಆ ಬಳಿಕ ನಗರದ ಹೊಸ ಬಸ್‌ ನಿಲ್ದಾಣ ವೃತ್ತದಲ್ಲೂ ಕಾರ್ಯಕರ್ತರ ಆವೇಶದ ರಾರ‍ಯಲಿ ನಡೆಯಿತು.

ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರ ಚುನಾವಣಾ ಪ್ರಚಾರ ನಗರದ ಹಳೆ ಬಸ್‌ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು. ನಗರದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಕಾರ್ಯಕರ್ತ ಬೈಕ್‌ ರಾರ‍ಯಲಿ ನಡೆಯಿತು. ಬೈಕ್‌ ರಾರ‍ಯಲಿಯಲ್ಲಿ ಕಾಂಗ್ರೆಸ್‌, ಪೋಷಕ ಸಂಘಟನೆ, ಮುಸ್ಲಿಂ ಲೀಗ್‌ ಕಾರ್ಯಕರ್ತರು ಭಾಗವಹಿಸಿದ್ದÜರು.

ಬಹಿರಂಗ ಪ್ರಚಾರ ಅಂತ್ಯ: ಭಾನುವಾರ ಸಂಜೆ ಬಹಿರಂಗ ಚುನಾವಣಾ ಪ್ರಚಾರ ಅಂತ್ಯಗೊಂಡಿತ್ತು. ಏ. 23ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ. ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ತಿಂಗಳ ಬಳಿಕ ಮೇ 23ರಂದು ಮತ ಎಣಿಕೆ ನಡೆಯಲಿದೆ. ಎಲ್ಲ ಪಕ್ಷ ಗಳು ಬಿರುಸಿನ ಪ್ರಚಾರ ನಡೆಸಿದ ಕ್ಷೇತ್ರಗಳ ಪರ್ಯಟನೆ ನಡೆಸಿ ಕೊನೆ ಹಂತದಲ್ಲಿದ್ದಾರೆ.

ಬಿಗಿ ಬಂದೋಬಸ್ತ್‌: ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದಂತೆ ನೀತಿ ಸಂಹಿತೆ ಬಿಗಿಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಭಾನುವಾರ ಸಂಜೆ ನಡೆದ ಪಕ್ಷ ಗಳ ಬಹಿರಂಗ ಬೈಕ್‌ ರಾರ‍ಯಲಿ ಸಹಿತ ಸಭೆಗಳ ಬಗ್ಗೆ ಚುನಾವಣಾ ವೀಕ್ಷ ಕ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ವೀಡಿಯೋ, ಫೋಟೋ ಗ್ರಫಿಗಳನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಸೂಕ್ಷ ್ಮ ಪ್ರದೇಶಗಳಲ್ಲಿ ಈಗಾಗಲೇ ಪೊಲೀಸರನ್ನು ನಿಯೋಜಿಸಲಾಗಿದೆ.

ವಾಹನ ಸಂಚಾರ ಅಸ್ತವ್ಯಸ್ತ: ನಗರದಲ್ಲಿ ಯುಡಿಎಫ್‌ ಎನ್‌ಡಿಎ ಹಾಗೂ ಎಲ್‌ಡಿಎಫ್‌ಗಳ ಬಹಿರಂಗ ಪ್ರಚಾರ ಹಿನ್ನೆಲೆಯಲ್ಲಿ ಸಂಜೆ 5ರಿಂದ 6ರ ತನಕ ಒಂದು ತಾಸುಗಳ ತಾಸುಗಳ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ನಗರದ ಹೊಸ ಬಸ್‌ ನಿಲ್ದಾಣ ಪರಿಸರದ ಒಂದು ಕಡೆಯಲ್ಲಿ ಎಲ್‌ಡಿಎಫ್‌ ಪ್ರಚಾರ ರಾರ‍ಯಲಿ ಹಾಗೂ ಇನ್ನೊಂದೆಡೆ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಯುಡಿಎಫ್‌ ಅಭ್ಯರ್ಥಿಯ ರಾರ‍ಯಲಿ ಹಾಗೂ ಕರಂದಕ್ಕಾಡ್‌ ಬಳಿ ಎನ್‌ಡಿಎ ಕಾರ್ಯಕರ್ತರ ಪ್ರಚಾರ ರಾರ‍ಯಲಿಯಿಂದಾಗಿ ವಾಹನ ಸಂಚಾರದಲ್ಲಿ ತೊಡಕು ಉಂಟಾಯಿತು. ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಹಾಸ ಪಡಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ