ಆ್ಯಪ್ನಗರ

ಕುವೈಟ್‌ ಸಂತ್ರಸ್ತರಲ್ಲಿ ಮಂಜೇಶ್ವರ ಯುವಕರು

ನಕಲಿ ಏಜೆಂಟನ ಉದ್ಯೋಗ ಭರವಸೆ ನಂಬಿ ಕುವೈಟ್‌ ದೇಶಕ್ಕೆ ತೆರಳಿ ಉದ್ಯೋಗ ಲಭಿಸದೆ ಸಂಕಷ್ಟದಲ್ಲಿರುವ ಯುವಕರ ಸಮೂಹದಲ್ಲಿ ಮಂಜೇಶ್ವರ ಯುವಕರು ಇದ್ದಾರೆ ಎಂಬ ಸುದ್ದಿ ತಡವಾಗಿ ಬೆಳಕಿಗೆಬಂದಿದೆ.

Vijaya Karnataka 30 May 2019, 9:52 pm
ಮಂಜೇಶ್ವರ: ನಕಲಿ ಏಜೆಂಟನ ಉದ್ಯೋಗ ಭರವಸೆ ನಂಬಿ ಕುವೈಟ್‌ ದೇಶಕ್ಕೆ ತೆರಳಿ ಉದ್ಯೋಗ ಲಭಿಸದೆ ಸಂಕಷ್ಟದಲ್ಲಿರುವ ಯುವಕರ ಸಮೂಹದಲ್ಲಿ ಮಂಜೇಶ್ವರ ಯುವಕರು ಇದ್ದಾರೆ ಎಂಬ ಸುದ್ದಿ ತಡವಾಗಿ ಬೆಳಕಿಗೆಬಂದಿದೆ.
Vijaya Karnataka Web manjeswara youts in kuvait
ಕುವೈಟ್‌ ಸಂತ್ರಸ್ತರಲ್ಲಿ ಮಂಜೇಶ್ವರ ಯುವಕರು


ಸಂಕಷ್ಟದಲ್ಲಿರುವ ಯುವಕರ ವಾಪಸಾತಿಗೆ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಕುವೈಟ್‌ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ಪೈಕಿ 35 ಯುವಕರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಅದರಲ್ಲಿ 3 ಮಂದಿ ಮಂಜೇಶ್ವರದವರಿದ್ದಾರೆ ಎಂದು ಮಂಗಳವಾರ ಮಂಗಳೂರು ಶಾಸಕ ವೇದವ್ಯಾಸ ಕಾಮತ್‌ ಮಂಜೇಶ್ವರ ಬಿಜೆಪಿ ನೇತಾರ ಆದರ್ಶ ಬಿ.ಎಂ.ಗೆ ಮಾಹಿತಿ ನೀಡಿದ್ದಾರೆ. ಸಂಕಷ್ಟದಲ್ಲಿರುವ ಯುವಕರಿಗೆ ಸಹಾಯವಾಗಿ ಸುಷ್ಮಾ ಸ್ವರಾಜ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌ರ ಮುತುವರ್ಜಿಯಿಂದ ಈಗಾಗಲೇ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿ, ಬಟ್ಟೆಬರೆ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಒಂದು ತಿಂಗಳ ಒಳಗಾಗಿ ಯುವಕರನ್ನು ಭಾರತಕ್ಕೆ ಕರೆತರಲಾಗುವುದಾಗಿ ಹೇಳಲಾಗಿದೆ. ನಕಲಿ ಏಜೆಂಟ್‌ ಬಲೆಗೆ ಬಿದ್ದು, ಕೆಲಸ ದಕ್ಕದೆ ಹತಾಶರಾಗಿರುವ ಯುವಕರ ಮನೆ ಮಂದಿ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ನಕಲಿ ಏಜೆಂಟ್‌ ಮೇಲೆ ಕೂಡ ಕೇಸು ದಾಖಲಿಸಲಾಗಿದೆ ಎಂದು ಮೋಹನ್‌ದಾಸ ಪೈ ಹೇಳಿದ್ದಾರೆ.

ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್‌, ಮಂಜೇಶ್ವರದ ಅರಿಬ್‌ ನೌಷಾದ್‌, ಬೆರಿಪದವಿನ ಮನೋಜ್‌ ಸಂಕಷ್ಟದಲ್ಲಿರುವ ಯುವಕರ ಪೈಕಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ