ಆ್ಯಪ್ನಗರ

ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಂದ ಮರುವಾಯಿ ಕೃಷಿ

ಕವ್ವಾಯಿ ಹಿನ್ನೀರು ಪ್ರದೇಶದಲ್ಲಿ ಕಪ್ಪು ಮರುವಾಯಿ ಕೃಷಿ ನಡೆಸಿ ವಿದ್ಯಾರ್ಥಿಗಳು. ಪಡನ್ನಕಡಪ್ಪ್ಪುರ ಸರಕಾರಿ ಫಿಶರೀಸ್‌ ಹೈಯರ್‌ ಸೆಕೆಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ವಿದ್ಯಾರ್ಥಿಗಳು ಕಪ್ಪು ಮರುವಾಯಿ ಕೃಷಿಯೊಂದಿಗೆ ಕವ್ವಾಯಿ ಹಿನ್ನೀರು ಪ್ರದೇಶಕ್ಕೆ ಇಳಿದಿದ್ದಾರೆ.

Vijaya Karnataka 13 Dec 2018, 10:16 pm
ಕಾಸರಗೋಡು: ಕವ್ವಾಯಿ ಹಿನ್ನೀರು ಪ್ರದೇಶದಲ್ಲಿ ಕಪ್ಪು ಮರುವಾಯಿ ಕೃಷಿ ನಡೆಸಿ ವಿದ್ಯಾರ್ಥಿಗಳು. ಪಡನ್ನಕಡಪ್ಪ್ಪುರ ಸರಕಾರಿ ಫಿಶರೀಸ್‌ ಹೈಯರ್‌ ಸೆಕೆಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ವಿದ್ಯಾರ್ಥಿಗಳು ಕಪ್ಪು ಮರುವಾಯಿ ಕೃಷಿಯೊಂದಿಗೆ ಕವ್ವಾಯಿ ಹಿನ್ನೀರು ಪ್ರದೇಶಕ್ಕೆ ಇಳಿದಿದ್ದಾರೆ. ಕವ್ವಾಯಿ ಹಿನ್ನೀರಿನಲ್ಲಿ ಇತ್ತೀಚೆಗೆ ಕಂಡುಬಂದ ಕಪ್ಪ್ಪು ಮರುವಾಯಿ ಕೃಷಿ ವೈಭವ ವಿದ್ಯಾರ್ಥಿಗಳನ್ನು ಕಪ್ಪು ಮರುವಾಯಿ ಕೃಷಿಯತ್ತ ಆಕರ್ಷಿಸಿದೆ.
Vijaya Karnataka Web maruvayi krishi from nss studnts
ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಂದ ಮರುವಾಯಿ ಕೃಷಿ


ಕಳೆದ ವರ್ಷ ಕಪ್ಪು ಮರುವಾಯಿ ಕೃಷಿ ನಡೆಸಲು ವಿದ್ಯಾರ್ಥಿಗಳು ಯೋಚಿಸಿದ್ದರೂ ಕೂಡಾ ಕಪ್ಪು ಮರುವಾಯಿ ಬೀಜದ ಗರಿಷ್ಟ ಬೆಲೆ ಕಾರಣ ದೂರ ಸರಿದಿದ್ದರು. ಸೋಮವಾರ ಮಾವಿಲಕಡಪ್ಪುರ ಭಾಗಗಳಿಂದ ಹತ್ತರಷ್ಟು ಗೋಣಿಗಳೊಂದಿಗೆ ವಿದ್ಯಾರ್ಥಿಗಳು ಹಿನ್ನೀರಿಗಿಳಿದು ಕಪ್ಪು ಮರುವಾಯಿ ಚಿಪ್ಪುಗಳನ್ನು ಸಂಗ್ರಹಿಸಿದರು. ಕೃಷಿ ನಡೆಸಲು ಅಗತ್ಯವಿರುವ ವ್ಯವಸ್ಥೆಗಳನ್ನು ಅವರು ಈಗಾಗಲೇ ಮಾಡಿದ್ದಾರೆ. ಇಡಯಿಲಕ್ಕಾಡು ಪರಿಸರದ ಹಿನ್ನೀರಿನಲ್ಲಿ ವಿದ್ಯಾರ್ಥಿಗಳು ಕೃಷಿಗೆ ಬೇಕಾದ ಸ್ಥಳ ಗುರುತಿಸಿದ್ದಾರೆ. ಉತ್ತಮ ಫಸಲು ಲಭಿಸಬಹುದು ಎಂಬ ನಿರೀಕ್ಷೆಯೊಂದಿಗೆ ಇವರು ಕೃಷಿಯಲ್ಲಿ ಪ್ರವೇಶಿಸಿದ್ದಾರೆ. ಇಡಯಿಲಕ್ಕಾಡಿನ ಕಪ್ಪು ಮರುವಾಯಿ ಕೃಷಿಕರ ಹಾಗೂ ರಕ್ಷ ಕರ ಸಹಾಯ ವಿದ್ಯಾರ್ಥಿಗಳಿಗಿದೆ.

ಕೃಷಿಗೆ ಬೇಕಾದ ಬಿದಿರನ್ನು ಕಟ್ಟುವ ಕಾಮಗಾರಿಗಳನ್ನು ಇಡಯಿಲಕ್ಕಾಡು ಪ್ರದೇಶ ನಿವಾಸಿಗಳು, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ರಕ್ಷ ಕರು ಸೇರಿ ನಡೆಸಿದ್ದಾರೆ. ವಲಿಯಪರಂಬ ಪಂಚಾಯಿತಿ ಅಧ್ಯಕ್ಷ ಎಂ.ಟಿ. ಅಬ್ದುಲ್‌ ಜಬ್ಬಾರ್‌, ಶಾಲಾ ರಕ್ಷ ಕ-ಶಿಕ್ಷ ಕ ಸಂಘದ ಅಧ್ಯಕ್ಷ ಮುಹಮ್ಮದ್‌ ಕುಂಞಿ, ಎನ್‌ಎಸ್‌ಎಸ್‌ ಯೋಜನಾಧಿಕಾರಿ ಎನ್‌.ಸುಗತ, ಪ್ರಭಾರ ಪ್ರಿನ್ಸಿಪಾಲ್‌ ಎಂ. ರಾಧಾ, ಪಿಎಸಿ ಸದಸ್ಯ ಮುಹಮ್ಮದ್‌ ಶರೀಫ್‌, ವಿ. ಪ್ರಿಯ, ರಂಜಿನಿ ನಾಯರ್‌, ಎನ್‌ಎಸ್‌ಎಸ್‌ ಸ್ವಯಂಸೇವಕರಾದ ಆದಿರ, ಹಿಶಾಂ, ನಂದನ ಕೃಷಿ ನಡೆಸಲು ನೇತೃತ್ವ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ