ಆ್ಯಪ್ನಗರ

ಫೇಸ್‌ಬುಕ್‌ ಮೂಲಕ ಮಧ್ಯೆ ರಾತ್ರಿ ಶಾಲೆ ರಜೆ ಘೋಷಿಸಿದ ಡಿಸಿ !

ವಿದ್ಯಾರ್ಥಿಗಳನ್ನು ಮತ್ತು ಹೆತ್ತವರನ್ನು ಸಂಕಷ್ಟಕ್ಕೆ ಸಿಲುಕಿದ ಕಣ್ಣೂರು ಜಿಲ್ಲಾಧಿಕಾರಿಯವರ ಶುಕ್ರವಾರದ ಶಾಲೆ ರಜೆ ಘೋಷಣೆ ಗೊಂದಲ ಉಂಟು ಮಡಿತು.

Vijaya Karnataka 21 Jul 2018, 5:00 am
ಕಾಸರಗೋಡು: ವಿದ್ಯಾರ್ಥಿಗಳನ್ನು ಮತ್ತು ಹೆತ್ತವರನ್ನು ಸಂಕಷ್ಟಕ್ಕೆ ಸಿಲುಕಿದ ಕಣ್ಣೂರು ಜಿಲ್ಲಾಧಿಕಾರಿಯವರ ಶುಕ್ರವಾರದ ಶಾಲೆ ರಜೆ ಘೋಷಣೆ ಗೊಂದಲ ಉಂಟು ಮಡಿತು.
Vijaya Karnataka Web midnight school holiday announce
ಫೇಸ್‌ಬುಕ್‌ ಮೂಲಕ ಮಧ್ಯೆ ರಾತ್ರಿ ಶಾಲೆ ರಜೆ ಘೋಷಿಸಿದ ಡಿಸಿ !


ಭಾರೀ ಮಳೆಯ ಹಿನ್ನೆಲೆಯಲ್ಲಿ ಕಣ್ಣೂರು ಶಿಕ್ಷ ಣ ಸಂಸ್ಥೆಗಳಿಗೆ ಶುಕ್ರವಾರ ರಜೆ ಇರುವುದಾಗಿ ಗುರುವಾರ ಮಧ್ಯೆರಾತ್ರಿ 11.50ಕ್ಕೆ ಘೋಷಿಸಿದರು. ಹಲವರಿಗೆ ಈ ವಿಷಯ ತಿಳಿಯದೇ ಭಾರಿ ಮಳೆಯಲ್ಲೂ ಶಾಲೆಗೆ ಆಗಮಿಸಿದ್ದರು. ಕಣ್ಣೂರು ವಿವಿಯ ಪರೀಕ್ಷೆಗಳನ್ನು ಸಹ ಶುಕ್ರವಾರ ಬೆಳಗ್ಗೆ ಮಾತ್ರ ಮುಂದೂಡಿರುವುದಾಗಿ ಘೋಷಿಸಿರುವುದು. ಕಳೆದರಡು ದಿನ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದರೂ ರಜೆ ಘೋಷಿಸಲು ಜಿಲ್ಲಾಧಿಕಾರಿ ಮಧ್ಯೆ ರಾತ್ರಿ ತನಕ ಕಾದು ಕುಳಿತಿರುವುದು ಏಕೆ? ಎಂಬುದು ಮಕ್ಕಳ ಹಾಗೂ ಹೆತ್ತವರ ಪ್ರಶ್ನೆ.

ಮಧ್ಯೆರಾತ್ರಿ ಫೇಸ್‌ಬುಕ್‌ ಮೂಲಕ ರಜೆ ಘೋಷಿಸಿರುವುದು ಮಳೆಯ ತೀವ್ರತೆಯನ್ನು ಅಳತೆ ಮಾಡಿ ಎಂಬುದು ವಿಶೇಷತೆಯಾಗಿದೆ. ಫೇಸ್‌ಬುಕ್‌ ಮೂಲಕ ಡಿಸಿ ನಿಮ್ಮ ಊರಲ್ಲಿ ಮಳೆಯೋ ಅಥವಾ ಅಲ್ಪ ಮಳೆಯೋ ಎಂಬುದಾಗಿತ್ತು ಡಿಸಿಯ ಪ್ರಶ್ನೆ. ಮತದಾನದಲ್ಲಿ ಭಾಗವಹಿಸಿದ ಶೇ.86ರಷ್ಟು ಮಂದಿ ಭಾರಿ ಮಳೆಯಾಗಿರುವುದಾಗಿ ನಮೂದಿಸಲಾಗಿತ್ತು. ಇದರ ಆಧಾರದಲ್ಲಿ ಗುರುವಾರ ರಾತ್ರಿ 11.50ಕ್ಕೆ ಜಿಲ್ಲಾಧಿಕಾರಿ ಫೇಸ್‌ಬುಕ್‌ ಮೂಲಕ ರಜೆ ಘೋಷಿಸಿರುವುದು.

ಆದರೆ, ಹೆಚ್ಚಿನ ವಿದ್ಯಾರ್ಥಿಗಳು, ಅಧ್ಯಾಪಕರು ರಜೆ ಘೋಷಿಸಿರುವುದು ತಿಳಿಯದೇ ಶಾಲೆಗೆ ಆಗಮಿಸಿದ್ದು, ಬಳಿಕ ಭಾರಿ ಮಳೆಯ ನಡುವೆಯು ತಿರುಗಿ ಮನೆಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದು ಸಹ ಫೇಸ್‌ಬುಕ್‌ ಮೂಲಕ ಭಾರಿ ಚರ್ಚೆಗೆ ಗ್ರಾಸವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ