ಆ್ಯಪ್ನಗರ

ಫ್ರೆಂಚ್‌ ತಂತ್ರಜ್ಞಾನದ ಧ್ವನಿ ಬೆಳಕಿನಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ ಕೇರಳದ ಐತಿಹಾಸಿಕ ತಾಣ ಬೇಕಲಕೋಟೆ..!

ದೇಶದ ಶತಮಾನಗಳ ಇತಿಹಾಸ ಹೊಂದಿರುವ ಸಂಸ್ಕೃತಿ, ಪರಂಪರೆ ಮತ್ತು ಜೀವನ ವಿಧಾನವನ್ನು ಸೂರ್ಯಾಸ್ತಮಾನದ ಬಳಿಕ ಕೋಟೆಗೆ ಆಗಮಿಸುವ ಪ್ರವಾಸಿಗರ ಮುಂದೆ ಅನಾವರಣಗೊಳ್ಳಲಿದೆ. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಸಹಯೋಗದೊಂದಿಗೆ ಜಾರಿಗೆ ತರುವ ಈ ಯೋಜನೆ ಇದೀಗ ಲೋಕಾರ್ಪಣೆಗೊಂಡಿದೆ.

Vijaya Karnataka Web 22 Oct 2020, 9:08 am
ಕಾಸರಗೋಡು: ಉತ್ತರ ಕೇರಳದ ಅತಿ ದೊಡ್ಡ ಪ್ರವಾಸಿ ಕೇಂದ್ರವಾದ ಬೇಕಲಕೋಟೆ ಇದೀಗ ಮತ್ತೊಂದು ಹಿರಿಮೆಯನ್ನು ಹೊಂದಿದೆ. ಬೇಕಲದ ಸೌಂದರ್ಯವನ್ನು ದ್ವಿಗುಣಗೊಳಿಸುವ ಬೆಳಕು ಮತ್ತು ಧ್ವನಿ ಪ್ರದರ್ಶನಕ್ಕೆ ಚಾಲನೆ ಲಭಿಸಿದೆ.
Vijaya Karnataka Web bekal fort kerala


ಸುಮಾರು 400 ವರ್ಷಕ್ಕಿಂತಲೂ ಹಳೆಯದಾದ ಕೇರಳದ ಅತಿ ದೊಡ್ಡ ಸಂರಕ್ಷಿತ ಸ್ಮಾರಕವಾದ ಬೇಕಲಕೋಟೆ, ಕೋಟೆಗೆ ಹೊಂದಿಕೊಂಡಿರುವ ಬೀಚ್‌, ಜತೆಗೆ ರೆಸಾರ್ಟ್‌ಗಳು, ಹೋಂ ಸ್ಟೇಗಳನ್ನು ಹೊಂದಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕೇರಳದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಬೇಕಲಕೋಟೆಯಲ್ಲಿ4 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪ್ರವಾಸೋದ್ಯಮ ಯೋಜನೆಯಾಗಿದೆ ಬೆಳಕು ಮತ್ತು ಧ್ವನಿ ಪ್ರದರ್ಶನ.

ಹರಿದು ಎಸೆದ ಲಾಟರಿ ಟಿಕೆಟ್‌ಗೊಲಿದಿತ್ತು 5 ಲಕ್ಷ ರೂಪಾಯಿ ಬಹುಮಾನ..!

ಬೇಕಲಕೋಟೆಯ ಇತಿಹಾಸ, ಕೋಟೆಗೆ ಪ್ರತಿದಿನ ಭೇಟಿ ನೀಡುವ ಪ್ರವಾಸಿಗರು ಮತ್ತು ಇತಿಹಾಸ ಅಧ್ಯಯನ ನಡೆಸುವವರಿಗೆ ನೂತನ ತಾಂತ್ರಿಕತೆಯೊಂದಿಗೆ ಕೂಡಿದ ಧ್ವನಿ-ಬೆಳಕು ವ್ಯವಸ್ಥೆಯೊಂದಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಿದ್ಧಪಡಿಸಿದೆ. ಇದಕ್ಕಾಗಿ ಫ್ರೆಂಚ್‌ ತಂತ್ರಜ್ಞಾನ ‘ಜೋನ್‌ ಅಟ್‌ ಲುಮಿಯರ್‌’ ವ್ಯವಸ್ಥೆ ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕಂಪ್ಯೂಟರ್‌ ಆಧರಿತ ಲೇಸರ್‌ ಕಿರಣಗಳ ಆಡಿಯೋ-ವಿಡಿಯೋ ಮೂಲಕ ಕೋಟೆಯ ಹಿನ್ನೆಲೆ ಮತ್ತು ಒಳಗಿನ ಮರಗಳನ್ನು ಕಥೆಯ ಪಾತ್ರಗಳನ್ನಾಗಿಸಿ ಪ್ರತಿದಿನ ಸಂಜೆ ಪ್ರಾರಂಭವಾಗುವ ಬೆಳಕು ಮತ್ತು ಧ್ವನಿ ಪ್ರದರ್ಶನವು ಪ್ರವಾಸಿಗರಿಗೆ ಕುತೂಹಲ ಹುಟ್ಟು ಹಾಕಲಿದೆ.

ಬೆಳ್ಳೂರು ಗ್ರಾಪಂ ರಸ್ತೆಗಳೆಲ್ಲ ಶಿಥಿಲ; ಅಂತಾರಾಜ್ಯ ಸಂಪರ್ಕ ರಸ್ತೆಯಲ್ಲಿ ಸಂಚಾರ ದುಸ್ತರ..!

ದೇಶದ ಶತಮಾನಗಳ ಇತಿಹಾಸ ಹೊಂದಿರುವ ಸಂಸ್ಕೃತಿ, ಪರಂಪರೆ ಮತ್ತು ಜೀವನ ವಿಧಾನವನ್ನು ಸೂರ್ಯಾಸ್ತಮಾನದ ಬಳಿಕ ಕೋಟೆಗೆ ಆಗಮಿಸುವ ಪ್ರವಾಸಿಗರ ಮುಂದೆ ಅನಾವರಣಗೊಳ್ಳಲಿದೆ. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಸಹಯೋಗದೊಂದಿಗೆ ಜಾರಿಗೆ ತರುವ ಈ ಯೋಜನೆ ಇದೀಗ ಲೋಕಾರ್ಪಣೆಗೊಂಡಿದೆ. ಸೂರ್ಯಾಸ್ತದ ಬಳಿಕ ಬೇಕಲ ಕೋಟೆ ಮುಚ್ಚುತ್ತದೆ ಎಂಬ ಬಹುಕಾಲದ ದೂರಿಗೆ ಪರಿಹಾರವಾಗಲಿದೆ.

ಪ್ರಸಿದ್ಧ ಪಣೋಲಿಬೈಲು ಕಲ್ಲುಟ್ಟಿ ದೈವಸ್ಥಾನದ ಅನುವಂಶಿಕ ಅರ್ಚಕ ರಮೇಶ್ ಮೂಲ್ಯ ನಿಧನ..!

ವಿಶ್ವವೇ ಕೊರೊನಾದಿಂ ಭಯಭೀತವಾಗಿದೆ. ಕೇರಳಕ್ಕೆ ವಿದೇಶಿ ವಿನಿಮಯ ಗಳಿಸಿ ಕೊಡುವ ಪ್ರವಾಸೋದ್ಯಮ ಕ್ಷೇತ್ರವು ಇದೀಗ ಕೊರೊನಾದಿಂದ ದೊಡ್ಡ ಬಿಕ್ಕಟ್ಟಿಗೆ ಸಿಲುಕಿದೆ. ಕೇರಳವು ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಲುವಾಗಿ ಅವಕಾಶವನ್ನು ಸದುಪಯೋಗಪಡಿಸಲು ಪ್ರವಾಸೋದ್ಯಮಕ್ಕೆ ಮರಳುವುದು ಮತ್ತು ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವುದಕ್ಕೆ ಇದು ಪೂರಕವಾಗಲಿದೆ.

ಧ್ವನಿ ಬೆಳಕು ಪ್ರದರ್ಶನಕ್ಕೆ ಚಾಲನೆ: ಬೇಕಲಕೋಟೆಯಲ್ಲಿ ನೂತನವಾಗಿ ಫ್ರೆಂಚ್‌ ತಂತ್ರಜ್ಞಾನದೊಂದಿಗೆ ಸಿದ್ಧಪಡಿಸಿದ ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ ರಾಜ್ಯ ಪ್ರವಾಸೋದ್ಯಮ ಸಚಿವ ಕಡಗಂಪಳ್ಳಿ ಸುರೇಂದ್ರನ್‌ ಚಾಲನೆ ನೀಡಿದರು. ಕೇರಳದ ವಿವಿಧ ಪ್ರವಾಸಿ ತಾಣಗಳಲ್ಲಿಅಸ್ತಿತ್ವದಲ್ಲಿರುವ ಬೆಳಕು ಮತ್ತು ಧ್ವನಿ ಪ್ರದರ್ಶನಗಳಿಗಿಂತ ಭಿನ್ನವಾಗಿ ನಿರ್ಮಾಣಗೊಂಡ ಮೊದಲ ತಾಣವಾಗಿದೆ ಬೇಕಲ ಕೋಟೆ. ಸೂರ್ಯಾಸ್ತಮಾನದ ಬಳಿಕ ಪ್ರದರ್ಶನಗೊಳ್ಳುವ ಇದನ್ನು ಸವಿಯಲು ಆಗಮಿಸುವರಿಗೆ ಮೂಲ ಸೌಕರ‍್ಯ ಒದಗಿಸುವುದಕ್ಕಾಗಿ ಕೋಟೆಯ ಮುಖ್ಯ ದ್ವಾರದಿಂದ ರಸ್ತೆ ನವೀಕರಣ ಹಾಗೂ ಬೀದಿದೀಪಗಳನ್ನು ಅಳವಡಿಸಲಾಗಿದೆ ಎಂದರು.

ಉದುಮ ಶಾಸಕ ಕೆ. ಕುಂಞಿರಾಮನ್‌ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌, ಜಿಪಂ ಅಧ್ಯಕ್ಷ ಎಜಿಸಿ ಬಶೀರ್‌ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು, ಪುರಾತತ್ವ ಸರ್ವೇಕ್ಷಣಾ ಭಾರತ ತ್ರಿಶೂರ್‌ ವಲಯ ಅಧೀಕ್ಷಕ ಕೆ.ಪಿ. ಮೋಹನ್‌ದಾಸ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ