ಆ್ಯಪ್ನಗರ

ಬ್ಯಾಂಕ್‌ ಲಾಕರ್‌ನಿಂದ ನಾಪತ್ತೆಯಾದ ಚಿನ್ನ ಕಸದ ಬುಟ್ಟಿಯಲ್ಲಿ ಪತ್ತೆ !

ನಗರದ ಹಳೆ ಬಸ್‌ನಿಲ್ದಾಣ ಸಮೀಪದ ಬ್ಯಾಂಕ್‌ನಿಂದ ನಾಪತ್ತೆಯಾದ 80ಪವನ್‌ ಚಿನ್ನಾಭರಣ ಬ್ಯಾಂಕ್‌ನ ಕಸದ ಬುಟ್ಟಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಚಿನ್ನವನ್ನು ಅದರ ವಾರೀಸುದಾರ ಆಲಂಪಾಡಿಯ ಸೈನಾಬ ಎಂಬವರಿಗೆ ನಗರ ಠಾಣಾ ಪೊಲೀಸರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ.

Vijaya Karnataka 10 Jul 2019, 8:36 pm
ಕಾಸರಗೋಡು: ನಗರದ ಹಳೆ ಬಸ್‌ನಿಲ್ದಾಣ ಸಮೀಪದ ಬ್ಯಾಂಕ್‌ನಿಂದ ನಾಪತ್ತೆಯಾದ 80ಪವನ್‌ ಚಿನ್ನಾಭರಣ ಬ್ಯಾಂಕ್‌ನ ಕಸದ ಬುಟ್ಟಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಚಿನ್ನವನ್ನು ಅದರ ವಾರೀಸುದಾರ ಆಲಂಪಾಡಿಯ ಸೈನಾಬ ಎಂಬವರಿಗೆ ನಗರ ಠಾಣಾ ಪೊಲೀಸರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ.
Vijaya Karnataka Web missed gold found in dustbin
ಬ್ಯಾಂಕ್‌ ಲಾಕರ್‌ನಿಂದ ನಾಪತ್ತೆಯಾದ ಚಿನ್ನ ಕಸದ ಬುಟ್ಟಿಯಲ್ಲಿ ಪತ್ತೆ !


ಏನಿದು ಘಟನೆ : ಸೈನಬಾ ಒಂದು ವರ್ಷದ ಹಿಂದೆ ಬ್ಯಾಂಕ್‌ನ ಎರಡು ಲಾಕರ್‌ಗಳಲ್ಲಾಗಿ 115 ಪವನ್‌ ಚಿನ್ನಾಭರಣಗಳನಿರಿಸಿದ್ದರು. ಒಂದು ಲಾಕರ್‌ನಲ್ಲಿ 80 ಪವನ್‌ ಹಾಗೂ ಮತ್ತೊಂದು ಲಾಕರ್‌ನಲ್ಲಿ 35ಪವನ್‌ ಚಿನ್ನಾಭರಣ ಇಡಲಾಗಿತ್ತು. ಇದರಲ್ಲಿ 35 ಪವನ್‌ ಚಿನ್ನವನ್ನು ಕಳೆದ ಏಪ್ರಿಲ್‌ ತಿಂಗಳಲ್ಲಿ ತೆಗೆದು ಬಳಿಕ ಮತ್ತೆ ಅಲ್ಲಿಯೇ ಲಾಕರ್‌ನಲ್ಲಿರಿಸಿದರು. ಆದರೆ ಮತ್ತೊಂದು ಲಾಕರ್‌ ತೆರೆದು ನೋಡಿದಾಗ ಚಿನ್ನಾಭರಣ ಕಾಣೆಯಾಗಿತ್ತು. ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದರು. ಇದೇ ಸಂದರ್ಭ ಬ್ಯಾಂಕ್‌ನ ಅಧಿಕಾರಿಗಳು ಕೂಡ ಎರಡು ಗಂಟೆಗಳ ಕಾಲ ಹುಡುಕಾಟ ನಡೆಸಿದರೂ, ಚಿನ್ನಾಭರಣ ಪತ್ತೆಯಾಗಿಲ್ಲ. ಬಳಿಕ ಕೋಝಿಕೋಡ್‌ ಜಿಲ್ಲೆಯಿಂದ ಆಗಮಿಸಿದ ಬ್ಯಾಂಕ್‌ನ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕಸದ ಬುಟ್ಟಿಯಲ್ಲಿ ಈ ಚಿನ್ನಾಭರಣ ಪತ್ತೆಯಾಗಿತ್ತು. ಕಸದ ಬುಟ್ಟಿಯಲ್ಲಿ ಯಾರ ಹಾಕಿದ್ದಾರೆಂಬುದು ತಿಳಿದು ಬಂದಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಬ್ಯಾಂಕ್‌ನ ಅಧಿಕಾರಿಗಳು ಪೊಲೀಸರಿಗೆ ಕೋರಿದ್ದಾರೆ. ಲಾಕರ್‌ನ ಕೀಲಿಕೈ ಗ್ರಾಹಕರಿಗೆ ನೀಡುತ್ತಿದ್ದು, ಕ್ಯಾಬಿನ್‌ ಕೀಲಿಗೈ ಮಾತ್ರ ಬ್ಯಾಂಕ್‌ನಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ