ಆ್ಯಪ್ನಗರ

ಪಯಸ್ವಿನಿಯಲ್ಲಿ ನೀರಿನ ಹರಿವು ಹೆಚ್ಚಳ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಯಸ್ವಿನಿ ನದಿಯ ನೀರಿನ ಹರಿವು ಹೆಚ್ಚಳವಾಗಿದೆ.

Vijaya Karnataka 22 Jul 2019, 5:00 am
ಮುಳ್ಳೇರಿಯ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಯಸ್ವಿನಿ ನದಿಯ ನೀರಿನ ಹರಿವು ಹೆಚ್ಚಳವಾಗಿದೆ.
Vijaya Karnataka Web more water flow in paswini rivere
ಪಯಸ್ವಿನಿಯಲ್ಲಿ ನೀರಿನ ಹರಿವು ಹೆಚ್ಚಳ


ಕೊಡಗು, ಸುಳ್ಯ, ಅಡೂರು, ಕುಂಟಾರು ಮೊದಲಾದ ಪಯಸ್ವಿನಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಈ ವರ್ಷದ ಮಳೆಗಾಲದಲ್ಲಿ ಮೊದಲ ಭಾರಿಗೆ ಸುರಿಯುತ್ತಿರುವ ಉತ್ತಮ ಮಳೆಯ ಪರಿಣಾಮವಾಗಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಈ ವರ್ಷ ತಡವಾಗಿ ಜೂನ್‌ ತಿಂಗಳ ಮೊದಲ ವಾರದಲ್ಲಿ ಮಳೆ ಆರಂಭಗೊಂಡಿತ್ತು. ಆದರೆ ಸುಮಾರು ಒಂದೂವರೆ ತಿಂಗಳು ಕಳೆದರೂ ಮಳೆ ರಭಸವಾಗಿ ಸುರಿಯಲæೕ ಇಲ್ಲ. ಪರಿಣಾಮ ತೋಡುಗಳು, ನದಿಗಳ ಹರಿವು ಬಲಗೊಳ್ಳಲ ಇಲ್ಲ. ಆಟಿ ತಿಂಗಳು ಬಂದರೂ ಮಳೆ ಪ್ರಮಾಣ ತುಂಬಾ ಕಡಿಮೆಯಾದ ಕಾರಣ ಈ ವರ್ಷದ ಮಳೆಗಾಲ ಇಷ್ಟೇ ಎಂದು ಆತಂಕಪಡುವಂತಾಗಿತ್ತು. ಆದರೆ ಈಗ ಬರುತ್ತಿರುವ ಸಾಧಾರಣ ಮಳೆ ಜನರ ಆತಂಕ ದೂರ ಮಾಡಿದೆ. ಬಾವಿಗಳು ತುಂಬಿವೆ, ತೋಡುಗಳ ಕಸ ಕಡ್ಡಿಗಳು ಮಾಯವಾಗಿದೆ. ನದಿಯ ನೀರೂ ಬಣ್ಣ ಬದಲಾಯಿಸಿ ಹರಿಯುತ್ತಿದೆ. ಕುಂಟಾರಿನಲ್ಲಿ ಪಯಸ್ವಿನಿಗೆ ಕಿಂಡಿ ಅಣæಕಟ್ಟು ನಿರ್ಮಾಣಸದ ಸಂದರ್ಭದಲ್ಲಿ ಹಾಕಿದ ಮಣ್ಣು ಸಮುದ್ರ ಪಾಲಾಗಿದೆ.

ಚರಂಡಿ ಇಲ್ಲದೆ ಕಂಗೆಟ್ಟಿರುವ ರಸ್ತೆಗಳು ಮಳೆಯ ಅಬ್ಬರದಿಂದಾಗಿ ತೋಡಾಗಿ ಹರಿಯುತ್ತಿದೆ. ಮುಳ್ಳೇರಿಯ ಪೇಟೆ, ಪೊವ್ವಲ್‌, ಆದೂರು, ಕುಂಟಾರು ಮೊದಲಾದ ಪ್ರದೇಶಗಳಲ್ಲಿ ಇದು ವಾಹನ ಸಂಚಾರಕ್ಕೆ ಸಮಸ್ಯೆಯೊಡ್ಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ