ಆ್ಯಪ್ನಗರ

ಪೆರಿಯದಲ್ಲಿ ತಾಯಿ-ಸಹೋದರಿಯರ ಸಂಗಮ

ಮಹಿಳಾ ಕಾಂಗ್ರೆಸ್‌ ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಲ್ಯೋಟ್‌ನಲ್ಲಿ ನಡೆದ ತಾಯಿ-ಸಹೋದರಿಯರ ಸಂಗಮದ ಪೂರ್ವಭಾವಿಯಾಗಿ ಹುತಾತ್ಮರ ಬಲಿಕುಠೀರದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು.

Vijaya Karnataka 7 Mar 2019, 5:00 am
ಕಾಸರಗೋಡು: ಮಹಿಳಾ ಕಾಂಗ್ರೆಸ್‌ ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಲ್ಯೋಟ್‌ನಲ್ಲಿ ನಡೆದ ತಾಯಿ-ಸಹೋದರಿಯರ ಸಂಗಮದ ಪೂರ್ವಭಾವಿಯಾಗಿ ಹುತಾತ್ಮರ ಬಲಿಕುಠೀರದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು.
Vijaya Karnataka Web mother sister gather at periya
ಪೆರಿಯದಲ್ಲಿ ತಾಯಿ-ಸಹೋದರಿಯರ ಸಂಗಮ


ಆರ್‌ಎಂಪಿ ನೇತಾರ, ಕೊಲೆಗೀಡಾದ ಟಿ. ಪಿ. ಚಂದ್ರಶೇಖರನ್‌ ಅವರ ಧರ್ಮಪತ್ನಿ ಕೆ.ಕೆ. ರಮ, ಕಣ್ಣೂರು ಎಡಯನ್ನೂರಿನಲ್ಲಿ ಕೊಲೆಯಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತ ಶುಹೈಬ್‌ನ ಸಹೋದರಿ ಮಹಿಳಾ ಕಾಂಗ್ರೆಸ್‌ ಅಖಿಲ ಭಾರತ ಕಾರ್ಯದರ್ಶಿ ತಮನ್‌ ಫರ್ಹಾನ, ರಾಜ್ಯಾಧ್ಯಕ್ಷೆ ಲತಿಕಾ ಸುಭಾಶ್‌, ಕೊಚ್ಚಿ ಮೇಯರ್‌ ಸೌಮಿನಿ, ಜೇಮ್ಸ್‌, ಶಾನಿಮೋಲ್‌ ಉಸ್ಮಾನ್‌, ಲಾಲಿ ವಿನ್ಸೆಂಟ್‌, ಸುಮಾ ಬಾಲಕೃಷ್ಣನ್‌, ರಾಜ್ಯ ಕೋಶಾಧಿಕಾರಿ ಲೀಲಾಮ್ಮ ಜೋಸ್‌ ಮೊದಲಾದವರು ಉಪಸ್ಥಿತರಿದ್ದರು.

ಶವಕುಠೀರಗಳ ಪುಷ್ಪಾರ್ಚನೆಯ ಬಳಿಕ ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಲತಿಕಾ ಸುಭಾಶ್‌ ಅವರ ಅಧ್ಯಕ್ಷ ತೆಯಲ್ಲಿ ಅಖಿಲಭಾರತ ಕಾರ್ಯದರ್ಶಿ ತಮನ್‌ ಫರ್ಹಾನ ಸಂಗಮವನ್ನು ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯದರ್ಶಿ ಮೀನಾಕ್ಷಿ ಬಾಲಕೃಷ್ಣನ್‌, ಸುಧಾ ಕುರ‍್ಯನ್‌, ರಾಜಲಕ್ಷ್ಮೀ ಟೀಚರ್‌, ಎರ್ನಾಕುಳಂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಸನಲ್‌, ಶಾಂತಮ್ಮ ಫಿಲಿಪ್‌, ನ್ಯಾಯವಾದಿ ರೊಸ್‌ ಉಪಸ್ಥಿತರಿದ್ದರು.

ಕಾಂಗ್ರೆಸ್‌ನ ಹಾಗೂ ಮಹಿಳಾ ಕಾಂಗ್ರೆಸ್‌ನ ನೇತಾರರು ಅಲ್ಲದೆ ಯುಡಿಎಫ್‌ ನೇತಾರರು ತ್ರಿಸ್ತರ ಪಂಚಾಯಿತಿ, ನಗರಸಭಾ, ಕಾರ್ಪೊರೇಶನ್‌ ಮಹಿಳಾ ಜನಪ್ರತಿನಿಧಿಗಳು ಸಂಗಮಕ್ಕೆ ನೇತೃತ್ವ ನೀಡಿದರು. ಸಂಗಮ ವೇದಿಕೆಗೆ ಶರತ್‌ಲಾಲ್‌ನ ಹಾಗೂ ಕೃಪೇಶ್‌ನ ತಂದೆ ತಾಯಿಯಂದಿರು, ಸಹೋದರಿಯರು ಮೊದಲಾದ ಸಂಬಂಧಿಕರು ತಲುಪಿದರು. ಹಲವಾರು ಹುತಾತ್ಮರ ಕುಟುಂಬ ಸದಸ್ಯರು ಸಂಗಮದಲ್ಲಿ ಭಾಗವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ