ಆ್ಯಪ್ನಗರ

ಪ್ರಕೃತಿ ವಿಕೋಪ ಎದುರಿಸಲು ಮುಂದಾಗಬೇಕು

ಕೇರಳ ಇದೀಗ ಎದುರಿಸುತ್ತಿರುವ ಗಂಭೀರ ಪ್ರಕೃತಿ ವಿಕೋಪವನ್ನು ಎದುರಿಸಲು ನಾವು ಸಮರ್ಥರಾಗಬೇಕು ಮತ್ತು ಸಂಗ್ಧಾವಸ್ಥೆಯನ್ನು ನಿವಾರಿಸಲು ಎಲ್ಲರೂ ಮುಂದೆ ಬರಬೇಕು ಎಂದು ಕೇರಳ ರಾಜ್ಯ ಕಂದಾಯ ಮತ್ತು ವಸತಿ ಖಾತೆ ಸಚಿವ ಇ. ಚಂದ್ರಶೇಖರನ್‌ ಹೇಳಿದರು.

Vijaya Karnataka 16 Aug 2019, 5:00 am
ಕಾಸರಗೋಡು: ಕೇರಳ ಇದೀಗ ಎದುರಿಸುತ್ತಿರುವ ಗಂಭೀರ ಪ್ರಕೃತಿ ವಿಕೋಪವನ್ನು ಎದುರಿಸಲು ನಾವು ಸಮರ್ಥರಾಗಬೇಕು ಮತ್ತು ಸಂಗ್ಧಾವಸ್ಥೆಯನ್ನು ನಿವಾರಿಸಲು ಎಲ್ಲರೂ ಮುಂದೆ ಬರಬೇಕು ಎಂದು ಕೇರಳ ರಾಜ್ಯ ಕಂದಾಯ ಮತ್ತು ವಸತಿ ಖಾತೆ ಸಚಿವ ಇ. ಚಂದ್ರಶೇಖರನ್‌ ಹೇಳಿದರು.
Vijaya Karnataka Web natural calamity
ಪ್ರಕೃತಿ ವಿಕೋಪ ಎದುರಿಸಲು ಮುಂದಾಗಬೇಕು


ಕಾಸರಗೋಡು ಮುನ್ಸಿಫಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜರೋಹಣ ಮಾಡಿ ಮಾತನಾಡಿದರು. ಈ ಪ್ರಕೃತಿ ವಿಕೋಪವನ್ನು ನಮಗೆ ಹೇಗೆ ಎದುರಿಸಬಹುದು ಮತ್ತು ಸಂಕಷ್ಟದಲ್ಲಿರುವ ನಮ್ಮ ಸಹೋದರರಿಗೆ ನಾವು ಹೇಗೆ ಸಹಾಯ ಮಾಡಬಹುದು ಎಂಬ ಮನಸ್ಸು ನಮ್ಮಲ್ಲಿರಬೇಕು.

ಭವಿಷ್ಯದಲ್ಲಿ ಅದಕ್ಕಾಗಿ ನಾವು ಕೆಲಸ ಮಾಡಬೇಕು. ದೇಶದ ಅನೇಕ ಭಾಗಗಳಲ್ಲಿ ಪ್ರವಾಹದಿಂದಾಗಿ ಹಾನಿಗೊಳಗಾಗಿದೆ. ಮುಂಗಾರು ಮಳೆಯಿಂದಾಗಿ ನೂರಕ್ಕಿಂತಲೂ ಹೆಚ್ಚು ಜನರ ಪ್ರಾಣ ಹಾನಿಯಾಗಿದೆ. ಕಳೆದ ವರ್ಷದ ಪ್ರವಾಹದಲ್ಲಿ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ನಿರೀಕ್ಷಿಸದಷ್ಟು ಹಾನಿ ಉಂಟಾಗಿತ್ತು.

ಮಹಾ ಪ್ರವಾಹವನ್ನು ಎದುರಿಸಲು ನಾವು ಒಟ್ಟಾಗಿ ಶ್ರಮಿಸಬೇಕು. ಇಡೀ ದೇಶವೇ ಸಹಾಯ ಮಾಡುತ್ತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅನೇಕ ಪ್ರಕೃತಿ ವಿಕೋಪಗಳು ನಡೆಯುತ್ತಿದೆ. 1993ರ ಮಹಾರಾಷ್ಟ್ರದ ಭೂಕಂಪ, 1999ರ ಒರಿಸ್ಸಾ ಚಂಡಮಾರುತ, 2001ರ ಗುಜರಾತ್‌ ಭೂಕಂಪ, 2004ರ ಸುನಾಮಿ, 2013ರ ಉತ್ತರಾಖಂಡದ ನೆರೆ, 2014ರ ಕಾಶ್ಮೀರ ಪ್ರವಾಹ ಪ್ರಕೃತಿ ವಿಕೋಪವನ್ನು ನಾವು ಎದುರಿಸುತ್ತಿದ್ದೇವೆ. ಕೇರಳ ಎದುರಿಸುತ್ತಿರುವ ಪ್ರಕೃತಿ ವಿಕೋಪವನ್ನು ಎದುರಿಸಲು ನಮಗೆ ಸಾಧ್ಯವಾಗುವುದು ಎಂಬುದಾಗಿ ಸಚಿವರು ಹೇಳಿದರು.

ಸ್ವಾತಂತ್ರ್ಯ ಹೋರಾಟವು ನಮ್ಮ ರಾಷ್ಟ್ರೀಯತೆಯ ಶಕ್ತಿ ಮತ್ತು ವೈವಿಧ್ಯತೆಯ ಸಂಕೇತ ಎಂಬುದನ್ನು ಭಾರತೀಯರಿಗೆ ಕಲಿಸಿತು. ಈ ವೈವಿಧ್ಯತೆಯಲ್ಲಿ ಏಕತೆಯ ಹಾದಿಯನ್ನು ಸಂಚರಿಸಿ ಆಧುನಿಕ ಲೋಕಕ್ಕೆ ಮಾದರಿಯಾಗಲು ಭಾರತಕ್ಕೆ ಸಹಾಯವಾಗಿತ್ತು.

ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವವನ್ನು ಮುಡಿಪಾಗಿಟ್ಟ ಧೀರ ದೇಶ ಭಕ್ತರು ಕಂಡುಕೊಂಡಿದ್ದ ಯಾತ್ರೆಯಲ್ಲಿ ಭಾರತದ ಜನರು ಒಟ್ಟಾಗಿ ಹೋರಾಡಿದ್ದಾರೆ. ಈ ಸಂದರ್ಭದಲ್ಲೂ ನಮ್ಮ ಜಾತ್ಯತೀತ ರಾಷ್ಟ್ರೀಯತೆ ಜಗತ್ತಿಗೆ ಒಂದು ಮಾದರಿಯಾಗಿದೆ. ಬಿಕ್ಕಟ್ಟು ಸಮಯಗಳಲ್ಲಿ ನಮ್ಮ ಏಕತೆಯು ಇತರ ಸಮಯಗಳಲ್ಲೂ ಅದು ವಿಸ್ತಾರವಾಗಿದೆ. ಅಲ್ಪ ಸಮಯದಲ್ಲೇ ಭಾರತ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿದೆ ಎಂದು ಸಚಿವರು ಹೇಳಿದರು.

ಶತಮಾನಗಳ ವಿದೇಶಿ ಪ್ರಾಬಲ್ಯವನ್ನು ಕೊನೆಗೊಳಿಸುವ ಮೂಲಕ ಸಾಧಿಸಿದ ಸ್ವಾತಂತ್ರ್ಯದ 73ನೇ ವಾರ್ಷಿಕವಾಗಿದೆ. 1947ರಲ್ಲಿ ಸ್ವಾತಂತ್ರ್ಯ ಸಾಧ್ಯವಾಗಲು ರಾಷ್ಟ್ರೀಯ ಪ್ರಜ್ಞೆ ಮತ್ತು ಸಂವಿಧಾನದ ಬಲವನ್ನು ಆಧರಿಸಿ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವಾಗಿದೆ. ಒಂದೇ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಅನುಭವಿಸಿಕೊಂಡು ಭಾರತವು ಮಾನವೀಯತೆಯ ಪ್ರಕಾಶಮಾನವಾದ ರಾಷ್ಟ್ರೀಯತೆಯಾಗಿ ಹೊರ ಹೊಮ್ಮಿದೆ. ಧಾರ್ಮಿಕ, ಜನಾಂಗೀಯ ಮತ್ತು ಪ್ರಾದೇಶಿಕ ಸಮಾನತೆ, ರಾಷ್ಟ್ರೀಯ ಚಳವಳಿಯಿಂದ ಉತ್ತೇಜಿಸಲಾದ ಸಹೋದರತ್ವವನ್ನು ಆಧರಿಸಿದೆ. ಅಲ್ಲಿಂದಲೇ ದೇಶದ ಎಲ್ಲರೂ ಒಗ್ಗೂಡಿ ಬೃಹತ್‌ ಸಮುದ್ರದ ಅಲೆಗಳಂತೆ ವಿದೇಶಿ ಆಡಳಿತ ಮೇಲೆ ಹೋರಾಟ ನಡೆಸಲು ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ