ಆ್ಯಪ್ನಗರ

ನೆಲ್ಲಿಕುಂಜೆ ಪುನ: ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನ: ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರ ಜೀರ್ಣೋದ್ಧಾರ ಪ್ರಯುಕ್ತ ಉಪದೇವತಾ ಪುನ: ಪ್ರತಿಷ್ಠೆಗೆ ಮಂಗಳವಾರ ಚಾಲನೆ ನೀಡಲಾಯಿತು.

Vijaya Karnataka Web 17 May 2018, 3:11 pm
ಕಾಸರಗೋಡು: ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನ: ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರ ಜೀರ್ಣೋದ್ಧಾರ ಪ್ರಯುಕ್ತ ಉಪದೇವತಾ ಪುನ: ಪ್ರತಿಷ್ಠೆಗೆ ಮಂಗಳವಾರ ಚಾಲನೆ ನೀಡಲಾಯಿತು.
Vijaya Karnataka Web nellikunje


ಮಂಗಳವಾರ ಹಸಿರುವಾಣಿ ಶೋಭಯಾತ್ರೆಯ ಬಳಿಕ ಧಾರ್ಮಿಕ-ಸಾಂಸ್ಕೃತಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷ ತೆಯಲ್ಲಿ ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬ್ರಹ್ಮಶ್ರೀ ಪರವೂರ್‌ ರಾಕೇಶ್‌ ತಂತ್ರಿ ಉಪಸ್ಥಿತರಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕ್ಷೇತ್ರ ಶಿಲ್ಪಿ ಪಾಂಬಾಕುಡಂ ಶಿವನ್‌ ಆಚಾರಿ, ಬಾಲಕೃಷ್ಣ ವೊರ್ಕೂಡ್ಲು, ಭಾಸ್ಕರ, ಡಾ. ಅನಂತ ಕಾಮತ್‌, ಸುರೇಶ್‌ ಕೆ., ರಾಮ್‌ ಪ್ರಸಾದ್‌, ಕೃಷ್ಣನ್‌, ಗಣಐಶ್‌ ಪಾರೆಕಟ್ಟಾ, ಜಲಜಾಕ್ಷಿ ಟೀಚರ್‌, ಆರ್‌.ಪಿ.ರಮೇಶ್‌ ಬಾಬು, ಲಕ್ಷ್ಮೀಕಾಂತ ಕೆ.ಎಲ್‌. ಕಿಶೋರ್‌ ಕುಮಾರ್‌ ಮತ್ತಿರರು ಉಪಸ್ಥಿತರಿದ್ದರು. ಸಂಜೆ ದೀಪಾರಾಧನೆ, ರಾತ್ರಿ ಸಾಂಸ್ಕೃತಿ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈವಿದ್ಯ ನಡೆಯಿತು.

ಬುಧವಾರ ಬೆಳಗ್ಗೆ ಮಹಾಗಣಪತಿ ಹೋಮ, ಉಷ:ಪೂಜೆ, ಅಂಕುರ ಪೂಜೆ, ಚತುಶುದ್ಧಿ, ಧಾರಾ, ಪಂಚಗವ್ಯ, ಪಂಚಕಂ, ಪ್ರೋಕ್ತಹೋಮ, ಸ್ಕಂದ ಹೋಮ, ಹೋಮಕಲಶಾಭಿಷೇಕ, ಭಜನೆ, ಸಂಜೆ ಸ್ಥಳಶುದ್ಧಿ, ಅಂಕುರ ಪೂಜೆ, ಭಜನೆ, ದೀಪಾರಾದನೆ, ಭಗವತೀ ಸೇವೆ, ಲಲಿತಸಹಸ್ರನಾಮಾರ್ಚನೆ, ಭಜನೆ, ಹುಲ್ಪೆ ಮೆರವಣಿಗೆ, ರಾತ್ರಿ ಭರತನಾಟ್ಯ ನಡೆಯಿತು.

ಮೇ 17ರಂದು ಬೆಳಗ್ಗೆ ಮಹಾಗಣಪತಿ ಹೋಮ, ಉಷ: ಪೂಜೆ, ಅಂಕುರ ಪೂಜೆ, ಶಾಂತಿಹೋಮ, ಅದ್ಭುತ ಶಾಂತಿಹೋಮ, ಭಜನೆ, ಹೋಮಕಲಶಾಭಿಷೇಕ, ಗೀತೋಪಾಸನ ಸತ್ಸಂಗ, ಮಧ್ಯಾಹ್ನ ಪೂಜೆ, ಭಜನೆ ಸಂಜೆ ದೀಪಾರಾಧನೆ, ಭಜನೆ, ರಾತ್ರಿ ನೃತ್ಯ ಸಂಗಮ ನಡೆಯಲಿದೆ. ಮೇ 18ರಂದು ಬೆಳಗ್ಗೆ ಮಹಾಗಣಪತಿ ಹೋಮ, ಉಷ:ಪೂಜೆ, ಭಜನೆ, ಮಧ್ಯಾಹ್ನ ಪೂಜೆ, ಭಜನೆ, ಸಂಜೆ ದೀಪಾರಾಧನೆ, ಸಾಮೂಹಿಕ ಸರ್ವೇೖಶ್ವರ್ಯ ದೀಪ ಪೂಜೆ, ರಾತ್ರಿ ಹಾಸ್ಯೋತ್ಸವ ರಾತ್ರಿ ನಡೆಯಲಿದೆ. ಮೇ 19ರಂದು ಬೆಳಗ್ಗೆ ಗಣಪತಿ ಹೋಮ, ಉಷ:ಪೂಜೆ, ಅಂಕುರ ಪೂಜೆ, ಜಲದ್ರೋಣಿಪೂಜೆ, ಕುಂಭೇಶಕರ್ಕರಿ ಪೂಜೆ, ಬ್ರಹ್ಮಕಲಶ ಪೂಜೆ, ತತ್ವಹೋಮ, ತತ್ವಕಲಶ ಪೂಜೆ, ಪಾಣಿ, ತತ್ವಕಲಶಾಭಿಷೇಕ, ಭಜನೆ, ರಾತ್ರಿ ಪೂಜೆ, ವಿಶೇಷ ನೃತ್ಯ ವೈವಿಧ್ಯ ನಡೆಯಲಿದೆ. ಮೇ 20ರಂದು ಗಣಪತಿ ಹೋಮ, ಉಷ: ಪೂಜೆ, ಅದಿವಾಸ, ಪಾಣಿ, ಬೆಳಗ್ಗೆ 10.05 ಮತ್ತು 12ರ ಮಧ್ಯೆ ನಡೆಯುವ ಶುಭಮುಹೂರ್ತದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಪರಿಕಲಶಾಭಿಷೇಕ, ಉಪದೇವತಾ ಪುನ: ಪ್ರತಿಷ್ಠೆಗಳು, ವಿಶೇಷ ಪೂಜೆ, ಶ್ರೀಭೂತಬಲಿ, ಮಧ್ಯಾಹ್ನ ಅಲಂಕಾರ ಪೂಜೆ, ಹೂವಿನ ಪೂಜೆ, ಮಹಾಪೂಜೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ