ಆ್ಯಪ್ನಗರ

ರಾಜ್‌ಮೋಹನ್‌ ಕಲ್ಯೋಟ್‌ಗೆ ಭೇಟಿ

ಉಜ್ವಲ ಗೆಲುವು ಸಾಧಿಸಿದ ಬಳಿಕ ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಶುಕ್ರವಾರ ಬೆಳಗ್ಗೆ ಸಿಪಿಎಂನ ಕೊಲೆ ರಾಜಕೀಯಕ್ಕೆ ಬಲಿಯಾದ ಕೃಪೇಶ್‌ ಹಾಗೂ ಶರತ್‌ಲಾಲ್‌ನ ಮನಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

Vijaya Karnataka Web 25 May 2019, 5:00 am
ಕಾಸರಗೋಡು: ಉಜ್ವಲ ಗೆಲುವು ಸಾಧಿಸಿದ ಬಳಿಕ ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಶುಕ್ರವಾರ ಬೆಳಗ್ಗೆ ಸಿಪಿಎಂನ ಕೊಲೆ ರಾಜಕೀಯಕ್ಕೆ ಬಲಿಯಾದ ಕೃಪೇಶ್‌ ಹಾಗೂ ಶರತ್‌ಲಾಲ್‌ನ ಮನಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.
Vijaya Karnataka Web new mp visit kalyot
ರಾಜ್‌ಮೋಹನ್‌ ಕಲ್ಯೋಟ್‌ಗೆ ಭೇಟಿ


ಕೃಪೇಶ್‌ ಅವರ ತಂದೆ ಕೃಷ್ಣನ್‌ ಹಾಗೂ ಶರತ್‌ಲಾಲ್‌ ಅವರ ತಂದೆ ಸತ್ಯನಾರಾಯಣ ಅವರ ಕೈಗಳನ್ನು ಹಿಡಿದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುಡಿಎಫ್‌ ನೇತಾರರು, ಡಿಸಿಸಿ ಪದಾಧಿಕಾರಿಗಳ ಸಹಿತ ನೇತಾರರು ಸಹ ಜತೆಗಿದ್ದರು. ಎಂಪಿಯಾಗಿ ಆಯ್ಕೆದ ಬಳಿಕ ಮೊದಲ ಯಾತ್ರೆಯನ್ನು ರಾಜ್‌ಮೋಹನ್‌ ಉಣ್ಣಿತ್ತಾನ್‌ ಕಲ್ಯೋಟ್‌ಗೆ ಕೈಗೊಂಡರು. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಕಾಸರಗೋಡಿಗೆ ಆಗಮಿಸಿ ಮೊದಲ ಬಾರಿಗೆ ಕಲ್ಯೋಟ್‌ಗೆ ತೆರಳಿದ್ದರು. ಅಲ್ಲಿಂದಲೇ ಚುನಾವಣೆಗೆ ಇಡುಗಂಟಿಗಾಗಿ ತಾಯಿಂದಿರು ಹಣ ನೀಡಿದ್ದರು. ಇದೀಗ ಗೆಲುವು ಪಡೆದ ಬಳಿಕ ತೆರಳಿದರು.

ಉಣ್ಣಿತ್ತಾನ್‌ ಅವರೊಂದಿಗೆ ಪುತ್ರರಾದ ಅಮಲ್‌, ಅಖಿಲ್‌, ಕಾಂಗ್ರೆಸ್‌ ನೇತಾರರಾದ ಪೆರಿಯಾ ಬಾಲಕೃಷ್ಣನ್‌, ಎ. ಗೋವಿಂದನ್‌ ನಾಯರ್‌, ಪಿ.ವಿ. ಸುರೇಶ್‌, ವಿನೋದ್‌ ಕುಮಾರ್‌, ನ್ಯಾಯವಾದ ಕೆ. ರಾಜೇಂದ್ರನ್‌, ಧನ್ಯ ಸುರೇಶ್‌, ಸಾಜಿದ್‌ ಮಾವ್ವಲ್‌, ಪಿ.ಕೆ. ಫೈಸಲ್‌, ನಾಯಲ್‌ ಟೋ ತೋಮಸ್‌, ಜಿ. ರತಿ ಕುಮಾರ್‌, ನ್ಯಾಯವಾದಿ ಎಂ.ಕೆ. ಬಾಬುರಾಜ್‌ ಮತ್ತಿತರರು ಇದ್ದರು.

ಕಲ್ಯೋಟ್‌ಗೆ ತೆರಳಿ ಬಳಿಕ ಪ್ರೆಸ್‌ಕ್ಲಬ್‌ನಲ್ಲಿ ಮೀಟ್‌ ದಿ ಪ್ರೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ಕಲ್ಯಾಶ್ಶೇರಿಯಿಂದ ಆರಂಭಗೊಳ್ಳುವ ರೋಡ್‌ ಶೋದಲ್ಲಿ ಭಾಗವಹಿಸಿದ್ದರು. ರೋಡ್‌ಶೋ ಪಯ್ಯನ್ನೂರಿಲ್ಲಿ ಸಮಾಪನಗೊಳ್ಳುವುದು. ಶನಿವಾರ ಮಂಜೇಶ್ವರದಲ್ಲೂ, ಸೋಮವಾರ ಉದುಮ ಹಾಗೂ ಕಾಸರಗೋಡಿನಲ್ಲಿ ರೋಡ್‌ ಶೋದಲ್ಲಿ ಭಾಗವಹಿಸುವರು. ಮೇ 27ರಂದು ಕಾಞಂಗಾಡ್‌ನಲ್ಲಿ ರೋಡ್‌ ಶೋ ನಡೆಯುವುದು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ